ಬಾಲಿವುಡ್ ನಟ ಅಮಿತಾಬ್ ಬಚ್ಚನ್ಗೆ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು, ತೀವ್ರ ಚಿಕಿತ್ಸೆಯ ಅವಶ್ಯಕತೆ ಇಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದು, ಇನ್ನೊಂದು ವಾರದಲ್ಲಿ ಇಬ್ಬರನ್ನೂ ಡಿಸ್ಚಾರ್ಜ್ ಮಾಡಲಾಗುವುದೆಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಶೆಹನ್ಶಾ ದೇಗುಲದಲ್ಲಿ ನಡೆಯುತ್ತಿದೆ ಯಜ್ಞ; ಬಚ್ಚನ್ ಕುಟುಂಬದ ಚೇತರಿಕೆಗಾಗಿ ನಾನ್ಸ್ಟಾಪ್ ಹೋಮ
ಶನಿವಾರ ರಾತ್ರಿ, ಬಾಲಿವುಡ್ನ ಬಿಗ್ ಬಿ ಅಮಿತಾಬ್ ಬಚ್ಚನ್ಗೆ ಕರೊನಾ ಪಾಸಿಟಿವ್ ಇದೆ ಎಂದು ಸುದ್ದಿಯಾಗಿತ್ತು. ಕೆಲವೇ ಸಮಯದಲ್ಲಿ ಖುದ್ದು ಅಮಿತಾಭ್ ಟ್ವೀಟ್ ಮಾಡುವ ಮೂಲಕ ತಮಗೆ ಕರೊನಾ ಪಾಸಿಟಿವ್ ಇರುವುದು ನಿಜ ಎಂದು ಹೇಳಿದ್ದರು. ಆ ನಂತರ ಅವರ ಮಗ ಅಭಿಷೇಕ್ಗೂ ಕರೊನಾ ಪಾಸಿಟಿವ್ ಎಂದು ಅವರಿಬ್ಬರನ್ನೂ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
‘ಇಬ್ಬರ ಆರೋಗ್ಯದಲ್ಲಿ ಗಂಭೀರತೆ ಕಾಣಿಸಿಲ್ಲ. ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಮುಂದಿನ ಏಳು ದಿನದಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು’ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನಟಿ ಸಾರಾ ಅಲಿಖಾನ್ ಡ್ರೈವರ್ಗೆ ಕರೊನಾ; ಆತಂಕದಲ್ಲಿ ಸೈಫ್ ಅಲಿಖಾನ್ ಕುಟುಂಬ
ಇಬ್ಬರೂ ಚಿಕಿತ್ಸೆಗೆ ಸ್ಪಂದಿಸುತ್ತಿರುವುದರಿಂದ ಅವರಿಗೆ ತೀವ್ರವಾದ ಚಿಕಿತ್ಸೆಯ ಅವಶ್ಯಕತೆ ಇಲ್ಲ ಎಂದು, ಇದೀಗ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಕರೊನಾ ಸೋಂಕಿತರಿಗೆ, ಅವರ ಖಾಯಿಲೆಯ ತೀವ್ರತೆ ನೋಡಿಕೊಂಡು, ಚಿಕಿತ್ಸೆ ನೀಡಲಾಗುತ್ತಿದೆ. ಅಮಿತಾಬ್ ಮತ್ತು ಅಭಿಷೇಕ್ಗೆ ಮೊದಲ ಹಂತದಲ್ಲಿರುವುದರಿಂದ, ತೀವ್ರ ಚಿಕಿತ್ಸೆಯ ಅವಶ್ಯಕತೆ ಇಲ್ಲ, ಅವರಿಗೆ ಕೆಲವು ಬೇಸಿಕ್ ಆದ ಔಷಧಿ ಮತ್ತು ಒಳ್ಳೆಯ ಆಹಾರ ನೀಡಲಾಗುತ್ತಿದೆ ಎಂದಿದ್ದಾರೆ.
ಇನ್ನು ಇತ್ತ ಅಭಿಮಾನಿ ವಲಯದಲ್ಲಿ ಬಚ್ಚನ್ ಕುಟುಂಬ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹೋಮ ಹವನದ ಮೊರೆ ಹೋಗಿದ್ದಾರೆ. ಕೋಲ್ಕತ್ತದಲ್ಲಿ ಶೆಹನ್ಶಾ ದೇವಾಲಯದಲ್ಲಿ ಯಜ್ಞವನ್ನೂ ಹಮ್ಮಿಕೊಂಡಿದ್ದಾರೆ. (ಏಜೆನ್ಸೀಸ್)
PHOTO GALLERY| ಬರ್ತ್ಡೇ ಗರ್ಲ್, ಕಿಸ್ ಬೆಡಗಿ ಶ್ರೀಲೀಲಾ ಗ್ಲಾಮರಸ್ ಫೋಟೋ ಝಲಕ್!