ಆಂಧ್ರಪ್ರದೇಶ: ಟಾಲಿವುಡ್ನ ಐಕಾನ್ ಸ್ಟಾರ್ ನಟ ಅಲ್ಲು ಅರ್ಜುನ್ ಇತ್ತೀಚೆಗೆ ತಮ್ಮ ಸ್ನೇಹಿತ ಮತ್ತು ವೈಎಸ್ಆರ್ಸಿಪಿ ಶಾಸಕ, ಲೋಕಸಭಾ ಅಭ್ಯರ್ಥಿ ರವಿಚಂದ್ರ ಕಿಶೋರ್ ರೆಡ್ಡಿಗೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ನಂದ್ಯಾಲಕ್ಕೆ ಭೇಟಿ ನೀಡಿ, ಬಿರುಸಿನ ಪ್ರಚಾರದಲ್ಲಿ ಭಾಗಿಯಾಗಿದ್ದರು. ಸ್ಟಾರ್ ನಟನ ಈ ನಡೆ ಪವನ್ ಕಲ್ಯಾಣ್ ಅಭಿಮಾನಿಗಳ ಭಾರೀ ಆಕ್ರೋಶಕ್ಕೆ ಗುರಿಯಾಯಿತು. ಅಲ್ಲು ವಿರುದ್ಧ ‘ಓಜಿ’ ಫ್ಯಾನ್ಸ್ ಸಿಡಿಮಿಡಿಗೊಂಡಿದ್ದರು.
ಇದನ್ನೂ ಓದಿ: 1963ರಲ್ಲಿ 1 ಲೀಟರ್ ಪೆಟ್ರೋಲ್ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್ ನೋಡಿದ್ರೆ ಹುಬ್ಬೇರೋದು ಖಚಿತ!
ಅಲ್ಲು ಅರ್ಜುನ್ ಪ್ರಚಾರ ಮಾಡಿದ್ದೇಕೆ? ಚುನಾವಣಾ ಪ್ರಚಾರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುವ ಪ್ಲ್ಯಾನ್ನಾ? ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ನಟನ ವಿರುದ್ಧ ವ್ಯಾಪಕ ಆಕ್ರೋಶ ಹೊರಹಾಕಿದರು. ಇನ್ನು ಇಂದು ಹೈದರಾಬಾದ್ನ ಜುಬ್ಲಿ ಹಿಲ್ಸ್ನಲ್ಲಿ ಮತಯಾಚಿಸಲು ಬಂದ ಅಲ್ಲು ಅರ್ಜುನ್, “ನನ್ನದು ಶುದ್ಧ ಸ್ನೇಹವೇ ಹೊರೆತು ರಾಜಕೀಯ ಉದ್ದೇಶವಲ್ಲ. ಅವರಿಗೆ ಚುನಾವಣೆಯಲ್ಲಿ ಶುಭವಾಗಲಿ ಎಂದು ಹರಸಲು ಮಾತ್ರ ಅಲ್ಲಿಗೆ ಬಂದೆ ಬಿಟ್ಟರೆ, ಇನ್ಯಾವುದೇ ಕಾರಣಕ್ಕೂ ಅಲ್ಲ” ಎಂದರು.
ರಾಜಕೀಯಕ್ಕೆ ಎಂಟ್ರಿ ಕೊಡುವ ಮುನ್ಸೂಚನೆ ಇದಾಗಿರಬಹುದಾ? ಎಂಬ ಪ್ರಶ್ನೆಗೆ ಸ್ಮೈಲ್ ಮಾಡುತ್ತಲೇ ‘ಇಲ್ಲ’ ಎಂದು ಉತ್ತರಿಸುವ ಮೂಲಕ ಸ್ಥಳದಿಂದ ಹೊರಟರು. ಸದ್ಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಪುಷ್ಪ 2’ ಚಿತ್ರದ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿರುವ ಸ್ಟೈಲಿಶ್ ಸ್ಟಾರ್, ಆಗಸ್ಟ್ 15ರಂದು ಪುಷ್ಪರಾಜ್ ಆಗಿ ಅಭಿಮಾನಿಗಳ ಮುಂದೆ ಗ್ರ್ಯಾಂಡ್ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ,(ಏಜೆನ್ಸೀಸ್).
ಅಂದು ಆರ್ಸಿಬಿ ಪ್ಲೇಆಫ್ ಕನಸಿನ ಬಗ್ಗೆ ವಿಲ್ ಜ್ಯಾಕ್ಸ್ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?
ಇದಕ್ಕೆಲ್ಲಾ ನನಗೆ ಕ್ಯಾಮರಾ ಬೇಕಿಲ್ಲ… ವಿಚ್ಛೇದನದ ಬಗ್ಗೆ ಕಡೆಗೂ ಮೌನ ಮುರಿದ ನಟಿ ಸಂಜೀದಾ ಶೇಖ್