More

    ಡಿಸೆಂಬರ್​ನಲ್ಲಿ ಪೃಥ್ವಿರಾಜ್​, ಜನವರಿಯಲ್ಲಿ ಬಚ್ಚನ್​ ಪಾಂಡೆ ಆಗಲಿದ್ದಾರೆ ಅಕ್ಷಯ್​

    ಮುಂಬೈ: ಲಾಕ್​ಡೌನ್​ ಸಡಿಲಿಕೆ ಆಗುತ್ತಿದ್ದಂತೆ ವಿದೇಶಕ್ಕೆ ತೆರಳಿ ಬೆಲ್​ಬಾಟಂ ಸಿನಿಮಾ ಶೂಟಿಂಗ್​ ಮುಗಿಸಿದ ಬಾಲಿವುಡ್​ ನಟ ಅಕ್ಷಯ್​ ಕುಮಾರ್​, ಇನ್ನೇನು ಶೀಘ್ರದಲ್ಲಿ ಓಟಿಟಿಯಲ್ಲಿ ಲಕ್ಷ್ಮೀ ಬಾಂಬ್​ ಮೂಲಕ ಎಂಟ್ರಿಕೊಡಲಿದ್ದಾರೆ. ಈಗಾಗಲೇ ಆ ಚಿತ್ರದ ಪ್ರಚಾರ ಕೆಲಸದಲ್ಲಿಯೂ ಅಕ್ಷಯ್​ ನಿರತರಾಗಿದ್ದಾರೆ. ಅದು ಮುಗಿಯುತ್ತಿದ್ದಂತೆ ಮತ್ತೆರಡು ಸಿನಿಮಾ ಶೂಟಿಂಗ್​ನಲ್ಲಿ ಅಕ್ಷಯ್​ ಭಾಗವಹಿಸಲಿದ್ದಾರೆ.

    ಇದನ್ನೂ ಓದಿ: ಗೋವಾ ಬೀಚ್​ನಲ್ಲಿ ಅರೆಬೆತ್ತಲೆ ನೃತ್ಯ ಮಾಡಿದ್ದಕ್ಕೆ ಪೂನಂ ಪಾಂಡೆ ವಿರುದ್ಧ ದೂರು

    ಬಚ್ಚನ್​ ಪಾಂಡೆ ಮತ್ತು ಪೃಥ್ವಿರಾಜ್​ ಚಿತ್ರದ ಚಿತ್ರೀಕರಣ ಪೂರ್ವ ಕೆಲಸಗಳು ಮುಕ್ತಾಯವಾಗಿವೆ. ಇನ್ನೇನಿದ್ದರೂ, ಶೂಟಿಂಗ್​ಗೆ ತೆರಳುವುದಕ್ಕೆ ಎರಡು ತಂಡಗಳು ಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ. ಈ ಎರಡು ಸಿನಿಮಾಗಳ ಪೈಕಿ ಡಿಸೆಂಬರ್​ನಲ್ಲಿ ಐತಿಹಾಸಿಕ ಪೃಥ್ವಿರಾಜ್ ಚಿತ್ರದ ಶೂಟಿಂಗ್​ನಲ್ಲಿ ಅಕ್ಷಯ್​ ಭಾಗವಹಿಸಲಿದ್ದಾರೆ. ಅದಾದ ಬಳಿಕ ಜನವರಿಯಲ್ಲಿ ಬಚ್ಚನ್ ಪಾಂಡೆ ಅವತಾರ ತಾಳಲಿದ್ದಾರೆ.

    ಇದನ್ನೂ ಓದಿ: ನಟಿ ಕಂಗನಾ ರಣಾವತ್​ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಜಾವೇದ್ ಅಖ್ತರ್

    ಪೃಥ್ವಿರಾಜ್ ಸಿನಿಮಾದ ಶೂಟಿಂಗ್​ ಸಲುವಾಗಿ ಮುಂಬೈನಲ್ಲಿ ಬೃಹತ್​ ಸೆಟ್ ನಿರ್ಮಾಣ ಕಾರ್ಯ ಶುರುವಾಗಿದ್ದು, ಬಹುತೇಕ ಕೊನೇ ಹಂತದಲ್ಲಿದೆ. ಈಗಾಗಲೇ ಒಂದಷ್ಟು ಭಾಗದ ಚಿತ್ರೀಕರಣ ಮುಗಿದಿರುವುದಿರಿಂದ ಬಾಕಿ ಕೆಲಸಗಳನ್ನು ಮುಗಿಸಿಕೊಳ್ಳಲಿದೆ ತಂಡ. ಇನ್ನು ಜನವರಿಯಲ್ಲಿ ಪರ್ಹಾದ್​ ಸಮ್ಜಿ ನಿರ್ದೇಶನದ , ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಬಚ್ಚನ್ ಪಾಂಡೆ ಶುರುವಾಗಲಿದೆ. ಇಲ್ಲಿ ಅಕ್ಷಯ್​ಗೆ ಕೃತಿ ಸನೋನ್​ ನಾಯಕಿ. (ಏಜೆನ್ಸೀಸ್​)

    ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋವಾ ಬೀಚ್​ನಲ್ಲಿ ಬೆತ್ತಲೆ ಓಡಾಡಿದ ಬಾಲಿವುಡ್​ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts