More

    ಬಿಸಿಬಿಸಿ ಪಕೋಡ ಯಾರಿಗ್ ಬೇಕು? … ‘ಅಗ್ನಿಸಾಕ್ಷಿ’ ತಂಡದಿಂದ ಹೀಗೊಂದು ಕಿರುಚಿತ್ರ

    ಭಾರತೀಯ ಚಿತ್ರರಂಗದ ಖ್ಯಾತನಾಮರೆಲ್ಲಾ ಮನೆಯಲ್ಲಿದ್ದುಕೊಂಡೇ, ‘ಫ್ಯಾಮಿಲಿ’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದೇ ನಟಿಸಿದ್ದು, ಇದೀಗ ಅದೊಂದು ಟ್ರೆಂಡ್ ಆಗಿಬಿಟ್ಟಿದೆ. ‘ಫ್ಯಾಮಿಲಿ’ ನಂತರ ನಿರ್ದೇಶಕ ಪವನ್ ಒಡೆಯರ್, ತಮ್ಮ ‘ರೆಮೋ’ ಚಿತ್ರದ ಕುರಿತಾಗ ‘ಹೊಸ ಕ್ಲೈಮ್ಯಾಕ್ಸ್’ ಎಂಬ ಕಿರುಚಿತ್ರ ಮಾಡಿದ್ದರು. ಇದೀಗ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಅಗ್ನಿಸಾಕ್ಷಿ’ ಟೀಮ್‌ನವರು ಸಹ ‘ಪಕೋಡ’ ಎಂಬ ಕಿರುಚಿತ್ರ ಮಾಡಿದ್ದಾರೆ.

    ‘ಪಕೋಡ’ ಎಂದ ಮಾತ್ರಕ್ಕೆ, ಪಕೋಡ ಕುರಿತಾದ ಕಿರುಚಿತ್ರ ಇರಬಹುದು ಎಂಬ ಸಂಶಯ ಬೇಡ. ಪಕೋಡದ ಜತೆಗೆ, ಎಲ್ಲರೂ ಮನೆಯಲ್ಲೇ ಇರಿ, ಮನೆಯಲ್ಲೇ ಬೇಕಾದ್ದನ್ನು ಮಾಡಿಕೊಂಡು ತಿನ್ನಿ, ಆಚೆ ಮಾತ್ರ ಹೋಗಬೇಡಿ … ಎಂಬ ಸಂದೇಶವಿರುವ ಈ ಚಿತ್ರವನ್ನು ರಾಜೇಶ್ ಧ್ರುವ ನಿರ್ದೇಶನ ಮಾಡಿದ್ದಾರೆ. ಇನ್ನು ಈ ಕಿರುಚಿತ್ರಕ್ಕೆ ಸಂಕಲನ ಮತ್ತು ಸಂಗೀತ ಸಹ ಅವರದ್ದೇ. ಇಂಥದ್ದೊಂದು ಪ್ರಯತ್ನಕ್ಕೆ ‘ಫ್ಯಾಮಿಲಿ’ಯೇ ಸ್ಫೂರ್ತಿ ಎಂದು ಹೇಳಿಕೊಂಡಿರುವ ರಾಜೇಶ್ ಧ್ರುವ, ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ.

    ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಟಿಸಿದ್ದ ವಿಜಯ್ ಸೂರ್ಯ, ವೈಷ್ಣವಿ ಗೌಡ, ಸುಕೃತಾ ನಾಗ್, ರಾಜೇಶ್ ಧ್ರುವ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಎಲ್ಲಾ ಜನಪ್ರಿಯ ಕಲಾವಿದರೂ, ಈ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ‘ಮೈನೆ ಪ್ಯಾರ್ ಕಿಯಾ’ಗೆ ಟ್ವಿಸ್ಟ್ ಕೊಟ್ಟ ಸಲ್ಮಾನ್ … ಕರೊನಾ ಜಾಗೃತಿ ಮೂಡಿಸಿದ ಸಲ್ಲು ಭಾಯ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts