ನವದೆಹಲಿ: ಹಿಂಡನ್ಬರ್ಗ್ ಹೊಡೆತದಿಂದಾಗಿ ಅದಾನಿ ಗ್ರೂಪ್ಸ್ ನಲುಗಿ ಹೋಗಿದ್ದು ಇದೀಗ ಅದಾನಿ ಗ್ರೂಪ್ಸ್ ಸುಮಾರು 35 ಸಾವಿರ ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್ ಒಂದನ್ನು ಕೈಬಿಟ್ಟಿದೆ.
ಅದಾನಿ ಗ್ರೂಪ್ ಗುಜರಾತಿನ ಮುಂದ್ರಾದಲ್ಲಿ ರೂ 34,900 ಕೋಟಿ ರೂ. ಮೌಲ್ಯದ ಪೆಟ್ರೋಕೆಮಿಕಲ್ ಪ್ರಾಜೆಕ್ಟ್ನ ಕೆಲಸವನ್ನು ಸ್ಥಗಿತಗೊಳಿಸಿದೆ. ಇವರು ಈ ನಿರ್ಧಾರವನ್ನು ಕೈಗೊಳ್ಳಲು ಅನೇಕ ಕಾರಣಗಳಿವೆ ಎನ್ನಲಾಗಿದೆ. ಮೊದಲನೆಯದು, ಇರುವ ಹಣವನ್ನು ಉಳಿಸಿಕೊಳ್ಳುವುದು ಮತ್ತೊಂದು, ಹೂಡಿಕೆದಾರರ ಹಣವನ್ನು ಉಳಿಸುವುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅದಾನಿಗೆ 12 ಲಕ್ಷ ಕೋಟಿ ರೂ. ನಷ್ಟ: ಹಿಂಡನ್ಬರ್ಗ್ ವರದಿ ಪರಿಣಾಮ, ಕಂಪನಿಗಳ ಷೇರುಗಳಲ್ಲಿ ಕುಸಿತ
ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ 2021ರಲ್ಲಿ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಮುಂದ್ರಾ ಪೆಟ್ರೋಕೆಮ್ ಲಿಮಿಟೆಡ್ಅನ್ನು ಅದಾನಿ ಪೋರ್ಟ್ಸ್ನಲ್ಲಿ ಗ್ರೀನ್ಫೀಲ್ಡ್ ಕಲ್ಲಿದ್ದಲು-ಪಿವಿಸಿ ಸ್ಥಾವರವನ್ನು ಸ್ಥಾಪಿಸಲು ಮತ್ತು ಗುಜರಾತ್ನ ಕಚ್ ಜಿಲ್ಲೆಯ ವಿಶೇಷ ಆರ್ಥಿಕ ವಲಯ (APSEZ) ಭೂಮಿಯನ್ನು ಸಂಯೋಜಿಸಿತ್ತು.
ಆದರೆ ಹಿಂಡೆನ್ಬರ್ಗ್ ರಿಸರ್ಚ್ನ ಜನವರಿ 24 ರ ವರದಿಯಲ್ಲಿ ಲೆಕ್ಕಪರಿಶೋಧಕರ ವಂಚನೆ, ಸ್ಟಾಕ್ ಮ್ಯಾನಿಪ್ಯುಲೇಷನ್ಗಳು ಮತ್ತು ಇತರ ಕಾರ್ಪೊರೇಟ್ ಆಡಳಿತದ ಲೋಪಗಳ ಬಗ್ಗೆ ಗೌತಮ್ ಅದಾನಿ ಸಾಮ್ರಾಜ್ಯದ ಮೇಲೆ ಆರೋಪಗಳನ್ನು ಹೊರಿಸಲಾಗಿತ್ತು. ಇದರಿಂದಾಗಿ ಅದಾನಿ ಕಂಪನಿಗಳ ಶೇರು ಮೌಲ್ಯ ಮಾರುಕಟ್ಟೆಯಲ್ಲಿ ಪಾತಾಳ ಕಂಡಿತ್ತು.
ಇದನ್ನೂ ಓದಿ: ಎಲಾನ್ ಮಸ್ಕ್ ಮತ್ತೆ ನಂ.1 ಶ್ರೀಮಂತ: ಗೌತಮ್ ಅದಾನಿಗೆ ಎಷ್ಟೇ ಸ್ಥಾನ?
ಈಗ, ವ್ಯಾಪಾರದಲ್ಲಿ ಮತ್ತೊಮ್ಮೆ ಟಾಪ್ಗೆ ಏರಲು ಕೆಲವು ಸಾಲಗಳನ್ನು ಮರುಪಾವತಿ ಮಾಡಿ ಹೂಡಿಕೆದಾರರ ನಂಬಿಕೆ ಉಳಿಸಿಕೊಳ್ಳುವುದು ಮಾತ್ರವೇ ಒಂದು ತಂತ್ರವಾಗಿ ಉಳಿದಿದೆ. ಹಿಂಡನ್ಬರ್ಗ್ ಹೊರಿಸಿದ್ದ ಎಲ್ಲಾ ಆರೋಪಗಳನ್ನು ಅದಾನಿ ಗ್ರೂಪ್ಸ್ ನಿರಾಕರಿಸಿದೆ.
PTI ಸುದ್ದಿಸಂಸ್ಥೆ ನೋಡಿದ ಮೇಲ್ಗಳಲ್ಲಿ, ಮುಂದ್ರಾ ಪೆಟ್ರೋಕೆಮಿಕಲ್ ಲಿಮಿಟೆಡ್ನ ಗ್ರೀನ್ ಪಿವಿಸಿ ಯೋಜನೆಗಾಗಿ ಕೆಲಸದ ವ್ಯಾಪ್ತಿಯ ಎಲ್ಲಾ ಚಟುವಟಿಕೆಗಳನ್ನು ಮತ್ತು ಎಲ್ಲಾ ಜವಾಬ್ದಾರಿಯುತ ಹುದ್ದೆಗಳನ್ನು ಅಮಾನತುಗೊಳಿಸುವಂತೆ ಗುಂಪು ಆದೇಶಿಸಿದೆ. ಇದು ಅನಿರೀಕ್ಷಿತ ಸನ್ನಿವೇಶ. ವಿವಿಧ ವ್ಯವಹಾರದ ವರ್ಗಗಳಲ್ಲಿ, ಅದಾನಿ ಗ್ರೂಪ್ಸ್ ವಿವಿಧ ಯೋಜನೆಗಳನ್ನು ಮರು-ಮೌಲ್ಯಮಾಪನ ಮಾಡುತ್ತಿದೆ. ಭವಿಷ್ಯದ ಹಣದ ಹರಿವು ಮತ್ತು ಹಣಕಾಸಿನ ಆಧಾರದ ಮೇಲೆ, ಕೆಲವು ಯೋಜನೆಗಳನ್ನು ಅದರ ಮುಂದುವರಿಕೆ ಮತ್ತು ಟೈಮ್ಲೈನ್ನಲ್ಲಿ ಪರಿಷ್ಕರಣೆಗಾಗಿ ಮರು-ಮೌಲ್ಯಮಾಪನ ಮಾಡಲಾಗುತ್ತಿದೆ ಎನ್ನಲಾಗಿದೆ.(ಏಜೆನ್ಸೀಸ್)