More

    ವಿಸ್ಮಯ ಲೋಕದಲ್ಲಿ ಶ್ರಾವ್ಯಾ ರಾವ್

    ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಶ್ರಾವ್ಯಾ ರಾವ್ (ಸಾತ್ವಿಕಾ) ಇದೀಗ ಹೊಸ ಸಿನಿಮಾ ಮೂಲಕ ಮತ್ತೆ ಚಂದನವನದಲ್ಲಿ ಕಾಣಿಸಿಕೊಳ್ಳಲು ತಯಾರಾಗಿದ್ದಾರೆ. ಈ ಹಿಂದೆ ‘ಧರ್ಮಸ್ಯ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ ಬೇರೆ ಸಿನಿಮಾಗಳ ಬಗ್ಗೆ ಅವರಿಂದ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ 2021ಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗದ ಪಕ್ಕಾ ರೊಮ್ಯಾಂಟಿಕ್ ಶೈಲಿಯ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ.

    ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಮೈಸೂರು ಮೂಲದ ವಿಸ್ಮಯ ಗೌಡ. ಮೆಕಾನಿಕಲ್ ಇಂಜಿನಿಯರಿಂಗ್ ಓದಿದರೂ, ಸಿನಿಮಾ ಕ್ಷೇತ್ರದ ಸೆಳೆತ ಅವರನ್ನು ಚಿತ್ರ ನಿರ್ದೇಶಿಸುವಂತೆ ಮಾಡಿದೆ. ಅಷ್ಟೇ ಅಲ್ಲ, ಈ ಚಿತ್ರವನ್ನು ನಿರ್ಮಾಣ ಮಾಡುವ ಜವಾಬ್ದಾರಿಯೂ ಅವರದ್ದೇ. ಈ ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕಿ ವಿಸ್ಮಯ, ‘ಕಳೆದ ಒಂದೂವರೆ ವರ್ಷದ ಹಿಂದೆಯೇ ಈ ಕಥೆ ಹೆಣೆಯುತ್ತ ಬಂದಿದ್ದೇನೆ. ನಮ್ಮ ಸುತ್ತಮುತ್ತ ನಡೆದ ನೈಜ ಘಟನೆಗಳನ್ನೇ ಸ್ಪೂರ್ತಿಯನ್ನಾಗಿಸಿಕೊಂಡು ಬರೆದ ಕಥೆ ಇದೀಗ ಸಂಪೂರ್ಣವಾಗಿದೆ. ಸಾಮಾಜಿಕ ಸಂದೇಶದ ಜತೆಗೆ ಯುವಪೀಳಿಗೆಯ ಬಗ್ಗೆಯೂ ಈ ಸಿನಿಮಾ ಮಾತನಾಡಲಿದೆ. ನಾಯಕನಾಗಿ ಕಿಶನ್ ಬಿಳಗಲಿ, ನಾಯಕಿಯಾಗಿ ಶ್ರಾವ್ಯಾ ನಟಿಸಲಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ.

    ಇದೇ ತಿಂಗಳ 21ಕ್ಕೆ ಈ ಚಿತ್ರದ ಮುಹೂರ್ತ ನಡೆಯಲಿದ್ದು, ಫೆ. 14ರಂದು ಶೀರ್ಷಿಕೆ ಅನಾವರಣವಾಗಲಿದೆ. ಮೈಸೂರು, ಮಡಿಕೇರಿ, ಕಾರವಾರದಲ್ಲಿ ಚಿತ್ರೀಕರಣ ನಡೆಯಲಿದೆ. ಮಧುಸೂದನ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನೀಡಲಿದ್ದಾರೆ.

    ಇದು ಧೈರ್ಯ ಅಂದ್ರೆ..!; ಸಿಂಹವನ್ನೇ ಹಿಮ್ಮೆಟ್ಟಿಸಿದ ಬೀದಿನಾಯಿ..!

    ಹಳೇ ನೆನಪುಗಳನ್ನು ಮತ್ತೆ ಬ(ಅ)ಗೆದ ಸನ್ನಿ ಲಿಯೋನ್​; ಅವರು ಹತ್ತಿ ನಿಂತಿದ್ದಾದರೂ ಎಲ್ಲಿ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts