ಬೆಂಗಳೂರು: ‘ಸಲಗ’ ಚಿತ್ರದ ಯಶಸ್ಸಿನ ನಂತರ ಸಂಜನಾ ಆನಂದ್ ಮುಂದಿನ ನಡೆ ಏನು?
-ಹೀಗೊಂದು ಪ್ರಶ್ನೆಗೆ ಉತ್ತರವಾಗಿ ಕಾಣಿಸುತ್ತದೆ ತೆಲುಗಿನ ಹೊಸ ಸಿನಿಮಾ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರ ಕಳೆದ ತಿಂಗಳು ಮುಹೂರ್ತ ಮುಗಿಸಿ ಸೆಟ್ಟೇರಿದ್ದರೂ, ಈಗಷ್ಟೇ ಶೂಟಿಂಗ್ ಆರಂಭಿಸಿದೆ. ಆ ಚಿತ್ರದ ಚಿತ್ರೀಕರಣದಲ್ಲಿ ನಟಿ ಸಂಜನಾ ಭಾಗವಹಿಸಿದ್ದಾರೆ.
ವಿಶೇಷ ಏನೆಂದರೆ, ಈ ಚಿತ್ರವನ್ನು ಖ್ಯಾತ ಚಿತ್ರ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಮಗಳಾದ ಕೋಡಿ ದಿವ್ಯಾ ದೀಪ್ತಿ ನಿರ್ವಿುಸುತ್ತಿದ್ದಾರೆ. ಅವರ ಬ್ಯಾನರ್ನಲ್ಲಿ ನಿರ್ವಣವಾಗುತ್ತಿರುವ ಚೊಚ್ಚಲ ತೆಲುಗು ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ಸಂಜನಾ, ಅಷ್ಟೇ ಖುಷಿಯಲ್ಲಿ ಚಿತ್ರದ ಭಾಗವಾಗಿದ್ದಾರೆ.
‘ಇದೊಂದು ಅಪ್ಪಟ ಪ್ರೇಮಕಥೆ. ಅಷ್ಟೇ ಅಚ್ಚುಕಟ್ಟಾದ ತಂಡದ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಈ ಹಿಂದೆ ತೆಲುಗಿನಲ್ಲಿ ‘ರಾಜ ವಾರು, ರಾಣಿ ಗಾರು’ ಮತ್ತು ‘ಎಸ್ ಆರ್ ಕಲ್ಯಾಣಮಂಟಪಂ’ ಚಿತ್ರ ಮಾಡಿದ್ದ ಕಿರಣ್ ಅಬ್ಬಾವರಂ ಈ ಚಿತ್ರದ ನಾಯಕನಾಗಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಸಹ ಶುರುವಾಗಿದೆ. ನವ ನಿರ್ದೇಶಕ ಕಾರ್ತಿಕ್ ಶಂಕರ್ ಈ ಚಿತ್ರದ ನಿರ್ದೇಶಕರು’ ಎಂದು ಮಾಹಿತಿ ನೀಡುತ್ತಾರೆ ಸಂಜನಾ.
ಈಗಾಗಲೇ ಕನ್ನಡದಿಂದ ಸಾಕಷ್ಟು ನಟಿಯರು ಪರಭಾಷೆಯ ಅಂಗಳಕ್ಕೆ ಹೋಗಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್, ನಭಾ ನಟೇಶ್ ಸೇರಿ ಹಲವರು ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂನಲ್ಲಿಯೂ ಸಕ್ರಿಯರಾಗಿದ್ದಾರೆ. ಆ ಸಾಲಿಗೆ ಸಂಜನಾ ಸಹ ಸೇರಿದ್ದಾರೆ.
ನಮ್ ಕಾರು ತೇಲ್ತಿತ್ತು, ಇಂಜಿನ್ನೇ ಆಫ್ ಆಯ್ತು..; ತಿರುಪತಿಯಲ್ಲಿ ಭಯಂಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದನ್ನು ವಿವರಿಸಿದ ನಟಿ ತಾರಾ