More

    ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಅವಕಾಶ ಸಿಕ್ಕಿದ್ದು ಒಂದು ಸಂದೇಶದಿಂದ: ನಟಿ ಚೈತ್ರಾ ಜೆ.ಆಚಾರ್​

    ಬೆಂಗಳೂರು: ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಕನ್ನಡ ಚಿತ್ರರಂಗದ ಯವನಟಿ ಚೈತ್ರಾ ಜೆ.ಆಚಾರ್, ತಮಗೆ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ನಟಿಸುವ ಅವಕಾಶ ಹೇಗೆ ಲಭಿಸಿತು ಎಂಬುದರ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಹೆತ್ತವರ ಕಷ್ಟವನ್ನು ಎಂದಿಗೂ ಮರೆಯಬೇಡಿ: ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಕೆ.ರಾಜೇಂದ್ರ ಕಿವಿಮಾತು

    “ಈ ಚಿತ್ರದ ಒಂದು ತಂಡವೇ ಬಹಳ ಮಜಾವಾಗಿತ್ತು. ಸಪ್ತ ಸಾಗರದಾಚೆ ಎಲ್ಲೋ ನನಗೆ ಬಹಳ ಇಷ್ಟವಾದ ಟೀಂ. ಹೇಮಂತ್ ರಾವ್​​ ಅವರೊಟ್ಟಿಗೆ ಕೆಲಸ ಮಾಡಬೇಕು ಎಂಬ ಹಂಬಲ ಹಲವು ದಿನಗಳಿಂದ ಇತ್ತು. ಕನ್ನಡ ಚಿತ್ರರಂಗಕ್ಕೆ ನಾನು ನಟಿಸಲು ಪ್ರಾರಂಭಿಸಿದ ದಿನದಿಂದಲೂ ಅವರೊಟ್ಟಿಗೆ ಚಿತ್ರ ಮಾಡಬೇಕು ಎಂದು ಹೇಳಿಕೊಂಡು ಬಂದಿದ್ದೆ. ಅವರು ನನ್ನನ್ನು ಕರೆದು ಈ ಪಾತ್ರ ಕೊಟ್ಟಾಗ ಉಂಟಾದ ಸಂತಸ ನಿಜಕ್ಕೂ ಹೇಳತೀರದು” ಎಂದು ಹೇಳಿದರು.

    “ಈ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಿದ ಹೇಮಂತ್ ರಾವ್​ ಅವರು, ಒಂದು ದಿನ ಹಾಯ್​ ಸುರಭಿ, ನಿನಗೆ ಬಿಡುವಿದ್ದಾಗ ನನಗೆ ಕರೆ ಮಾಡು ಎಂದು ಕಳುಹಿಸಿದ ಸಂದೇಶ ಇನ್ನು ನನಗೆ ನೆನಪಿದೆ. ಆ ದಿನ ನಾನು ಒಂದು ಹಾಡನ್ನು ರೆಕಾರ್ಡಿಂಗ್​ ಮಾಡುತ್ತಿದ್ದೆ, ಆ ವೇಳೆ ಅವರ ಮೆಸೇಜ್​​ ಕಂಡು ಉತ್ಸಾಹ ತಾಳಲಾರದೆ ಎರಡು ನಿಮಿಷ ಸಮಯ ತೆಗೆದುಕೊಂಡು ಹೊರಗೆ ಬಂದೆ, ಕೂಡಲೇ ಫೋನ್​ ಕೈಗೆತ್ತಿಕೊಂಡು ಅವರಿಗೆ ಕರೆ ಮಾಡಿ ಮಾತನಾಡಿದೆ. ತದನಂತರ ಚಿತ್ರದಲ್ಲಿ ನಾನು ನಾಯಕಿಯಾಗಿ ನಟಸಿದ್ದು” ಎಂದು ಹೇಳಿದರು.

    ಇದನ್ನೂ ಓದಿ: “ಸಿದ್ದರಾಮಯ್ಯ ಎರಡುವರೆ ವರ್ಷ, ಡಿಕೆ ಶಿವಕುಮಾರ್ ಎರಡುವರೆ ವರ್ಷ ಸಿಎಂ” ಎಂಬ ಆರ್​​​ವಿ ದೇಶಪಾಂಡೆ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯೆ

    “ಹೇಮಂತ್​ ರಾವ್​ ಅವರು ಪ್ರತಿಯೊಬ್ಬ ಕಲಾವಿದರನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಅವರು ಬಹಳ ತಾಳ್ಮೆಯಿಂದ ನಮ್ಮನ್ನು ಹ್ಯಾಂಡಲ್​ ಮಾಡುತ್ತಿದ್ದರು” ಎಂದು ಹೇಳಿದ್ದಾರೆ. ಮತ್ತಷ್ಟು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡ ನಟಿ ಚೈತ್ರಾ ಆಚಾರ್​​ ಅವರ ಸಂದರ್ಶನದ ವಿಡಿಯೋ ವೀಕ್ಷಿಸಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts