More

    ಮನೆಯಲ್ಲಿ ಇರೋದನ್ನೆಲ್ಲಾ ಮಾರಿದೆ! ಜೀವನವೇ ಅರ್ಧ ಕತ್ತರಿಸಿ ಹೋಗಿತ್ತು; ನಟ ರಣದೀಪ್ ಭಾವುಕ

    ಮುಂಬೈ: ಬಾಲಿವುಡ್​ ನಟ ರಣದೀಪ್ ಹೂಡ ಅಭಿನಯದ ಬಹುನಿರೀಕ್ಷಿತ ಬಯೋಪಿಕ್​ ‘ಸ್ವತಂತ್ರ್ಯ ವೀರ ಸಾರ್ವಕರ್’​ ಸಿನಿಮಾ ಇತ್ತೀಚೆಗೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಸಿನಿಪ್ರೇಕ್ಷಕರಿಂದ ವ್ಯಾಪಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಇದರ ಜತೆಗೆ ಬಾಕ್ಸ್​ ಆಫೀಸ್​ನಲ್ಲಿ ಮೊದಲ ದಿನದಿಂದಲೂ ಉತ್ತಮ ಗಳಿಕೆ ಕಾಣುತ್ತಿರುವ ಈ ಚಿತ್ರದಲ್ಲಿ ಸಾರ್ವಕರ್​ ಆಗಿ ಕಾಣಿಸಿಕೊಂಡ ರಣದೀಪ್ ನಟನೆಗೆ ಭಾರೀ ಪ್ರಶಂಸೆಗಳು ವ್ಯಕ್ತವಾಗಿವೆ.

    ಇದನ್ನೂ ಓದಿ: IPL 2024: ವ್ಯರ್ಥವಾಯ್ತು ರೋಹಿತ್​ ಕೊಡುಗೆ! ಕ್ಯಾಪ್ಟನ್​ ಗಿಲ್​ಗೆ ಒಲಿದ ಗೆಲುವು

    ‘ಸ್ವತಂತ್ರ್ಯ ವೀರ ಸಾರ್ವಕರ್’​ ಸಿನಿಮಾ ತೆರೆಕಂಡ ಬೆನ್ನಲ್ಲೇ ಸಂದರ್ಶನದಲ್ಲಿ ಭಾಗಿಯಾದ ರಣದೀಪ್​, ಎಲ್ಲಿಯೂ ಹಂಚಿಕೊಳ್ಳದ ಕೆಲವು ಕಹಿ ಘಟನೆಗಳನ್ನು ನೆನೆದು ಭಾವುಕರಾಗಿದ್ದಾರೆ. ಈ ಚಿತ್ರವು ರಂದೀಪ್ ನಿರ್ದೇಶನದ ಚೊಚ್ಚಲ ಚಿತ್ರವಾಗಿದ್ದು, ಸಾರ್ವಕರ್ ಅವರ ಪಾತ್ರಕ್ಕಾಗಿ ಬರೋಬ್ಬರಿ 32 ಕೆಜಿ ದೇಹದ ತೂಕ ಇಳಿಸಿಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೆ ದೂಡಿದರು. ವೃತ್ತಿಪರವಾಗಿ ಮಾತನಾಡುವ ವೇಳೆ ನಟನಾಗಿ ಅನುಭವಿಸಿದ ಸಂಕಷ್ಟಗಳನ್ನು ಹೂಡ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

    “ಬ್ಯಾಟಲ್ ಆಫ್ ಸರಗರ್ಹಿ ಚಿತ್ರಕ್ಕಾಗಿ ನಾನು ಮೂರು ವರ್ಷಗಳ ಕಾಲ ಸಿಖ್​ರಂತೆ ಕಾಣಲು ಗಡ್ಡ ಬಿಟ್ಟಿದ್ದೆ. ಸಕಲ ತಯಾರಿಗಳನ್ನು ಮಾಡಿಕೊಂಡಿದ್ದೆ. ಆದರೆ, ಸಿನಿಮಾ ಸ್ಥಗಿತಗೊಂಡಾಗ ಮಾನಸಿಕ ಖಿನ್ನತೆಗೆ ಒಳಗಾದೆ. ಇದರಿಂದ 2020ರಲ್ಲಿ ಮೂಡಿಬಂದ ‘ಎಕ್ಸ್‌ಟ್ರಾಕ್ಷನ್‌’ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶವನ್ನು ಕಳೆದುಕೊಂಡೆ” ಎಂದರು.

    ಇದನ್ನೂ ಓದಿ: ನಿವೃತ್ತ ಲೆಫ್ಟಿನೆಂಟ್ ಜನರಲ್ ಡಾ.ಎಸ್.ಪಿ. ಕೊಚಾರ್ ಪುತ್ರಿ ಚೀಸ್ತಾ ಕೊಚ್ಚರ್ ಲಂಡನ್​ನಲ್ಲಿ ನಿಧನ!

    “ಇದು ಜೀವನವನ್ನು ಅರ್ಧ ಕತ್ತರಿಸಿದಂತಾಯಿತು. ಅದಾದ ಬಳಿಕ ಗೋಲ್ಡನ್ ಟೆಂಪಲ್​ಗೆ ಹೋಗಿದ್ದೆ. ಸಿನಿಮಾ (ಬ್ಯಾಟಲ್ ಆಫ್​ ಸಾರಗರ್ಹಿ) ಮುಗಿಯುವವರೆಗೆ ನನ್ನ ಕೂದಲು ಕತ್ತರಿಸುವುದಿಲ್ಲ ಎಂದು ವಾಗ್ದಾನ ಮಾಡಿದ್ದೆ ಮತ್ತು ಅದು ಮುಗಿದ ಬಳಿಕವಷ್ಟೇ ನಾನು ಕೂದಲು ಕತ್ತರಿಸಿಕೊಂಡೆ. ಆ ನಂತರ ಎದುರಾಗಿದ್ದೇ ಹರಸಾಹಸ! ಮೂರು ವರ್ಷ ನನಗೆ ಕೆಲಸವೇ ಇರಲಿಲ್ಲ. ಏನು ಮಾಡಬೇಕೆಂದೇ ತಿಳಿಯಲಿಲ್ಲ” ಎಂದರು.

    “ಎಲ್ಲವೂ ವಿಚಿತ್ರವಾಗಿ ಕಾಣುತ್ತಿತ್ತು, ನಂತರ ಇದರಿಂದ ಹೊರಬಂದೆ. ನನ್ನ ಪೋಷಕರು ನಿಜವಾಗಿಯೂ ಚಿಂತಿತರಾಗಿದ್ದರು. ನಾನು ಅಲ್ಪಾವಧಿಯಲ್ಲಿ ಯಶಸ್ಸನ್ನು ಪಡೆದಿದ್ದರೆ, ಇಂದು ನಾನು ನಟನಾಗುತ್ತಿರಲಿಲ್ಲ. ನಾನು ಶ್ರಮಿಸುವುದನ್ನೇ ನಿಲ್ಲಿಸುತ್ತಿದ್ದೆ. ಆದರೆ ಆ ಹೋರಾಟವು ನನ್ನನ್ನು ಹೆಚ್ಚು ಮತ್ತು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಗಟ್ಟಿಯಾಗುವಂತೆ ಮಾಡಿತು. ಎಷ್ಟೋ ಸಮಯ ನನ್ನ ಬಳಿ ಒಂದು ರೂಪಾಯಿ ಕೂಡ ಇರಲಿಲ್ಲ. ಖರ್ಚಿಗೆ ಹಣವಿರಲಿಲ್ಲ. ಆಗ ಮನೆಯಲ್ಲಿದ್ದ ಹಲವು ವಸ್ತುಗಳನ್ನು ಮಾರಿದ್ದೇನೆ. ಆದ್ರೆ, ಕುದುರೆಗಳನ್ನು ಮಾತ್ರ ಎಂದಿಗೂ ಮಾರಲಿಲ್ಲ” ಎಂದು ಭಾವುಕರಾದರು.

    ಇದನ್ನೂ ಓದಿ: ಜನಾರ್ದನರೆಡ್ಡಿ ವಾಪ್ಸಿಯಿಂದ ಕಲ್ಯಾಣ ಕರ್ನಾಟಕದಲ್ಲಿ‌ ಬಿಜೆಪಿಗೆ ದೊಡ್ಡ ಶಕ್ತಿ: ಬಿ.ವೈ.ವಿಜಯೇಂದ್ರ ಬಣ್ಣನೆ

    ರಣದೀಪ್ ಅಭಿನಯದ ಸ್ವತಂತ್ರ ವೀರ್ ಸಾವರ್ಕರ್ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಎರಡು ದಿನಗಳಲ್ಲಿ 4.85 ಕೋಟಿ ರೂ.ಗಿಂತಲೂ ಅಧಿಕ ಹಣವನ್ನು ಗಳಿಸಿದ್ದು, ಸಿನಿಪ್ರೇಕ್ಷಕರ ಪ್ರತಿಕ್ರಿಯೆಗಳ ಆಧರದ ಮೇರೆಗೆ ಚಿತ್ರಮಂದಿರಗಳಲ್ಲಿ ಹೆಚ್ಚಿನ ಪ್ರದರ್ಶನ ಕಾಣುತ್ತಿದೆ,(ಏಜೆನ್ಸೀಸ್).

    ನನಗೆ ಸಾಕಾಗಿದೆ, 1 ಗಂಟೆಗೆ 5 ಲಕ್ಷ ರೂ. ಕೊಡಿ, ಬನ್ನಿ… ವೈರಲ್ ಆಗ್ತಿದೆ ಈ ನಿರ್ದೇಶಕನ ಹೇಳಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts