ಬೆಂಗಳೂರು: ಕರೊನಾ ಸಂಕಷ್ಟ ಕಾಲದಲ್ಲಿ ಬಡ ಜನರ ನೆರವಿಗೆ ನಿಂತಿರುವ ಸಹೃದಯಿ ಕಿಚ್ಚ ಸುದೀಪ್ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಈ ಬಾರಿ ಮುಸ್ಲಿಂ ಯುವತಿಯ ಮದುವೆಗೆ ಸುದೀಪ್ ಧನ ಸಹಾಯ ಮಾಡಿದ್ದಾರೆ.
ಆಟೋಚಾಲಕ ರಿಯಾಜ್ ಲಾಕ್ಡೌನ್ಗೂ ಮೊದಲೇ ತಂಗಿಯ ಮದುವೆ ನಿಗದಿಪಡಿಸಿದ್ದರು. ಆದರೆ, ದೇಶಕ್ಕೆ ಕಾಲಿಟ್ಟ ಮಹಾಮಾರಿ ಕರೊನಾ ವೈರಸ್ನಿಂದಾಗಿ ದಿಢೀರನೇ ಲಾಕ್ಡೌನ್ ಹೇರಲಾಯಿತು. ಇಡೀ ದೇಶವೇ ಸ್ತಬ್ಧವಾಗಿದ್ದರಿಂದ ಮದುವೆ ಖರ್ಚಿಗೆ ಹಣ ಹೊಂದಿಸುವುದು ಆಟೋ ಚಾಲಕನಿಗೆ ಕಷ್ಟವಾಗಿತ್ತು.
ಇದನ್ನೂ ಓದಿ: ಅಧಿಕೃತ ವಾಹನದಲ್ಲೇ ಸೆಕ್ಸ್ ಮಾಡಿದ ಉದ್ಯೋಗಿಗಳಿಬ್ಬರಿಗೆ ವಿಶ್ವಸಂಸ್ಥೆ ಶಾಕ್!
ತುಂಬಾ ಕಷ್ಟದಲ್ಲಿದ್ದ ರಿಯಾಜ್, ಬಳಿಕ ಸುದೀಪ್ ಚಾರಿಟೆಬಲ್ ಟ್ರಸ್ಟ್ ಮೊರೆ ಹೋಗಿದ್ದರು. ಇದೀಗ ಮದುವೆ ಖರ್ಚನ್ನು ಭರಿಸಲು ತಮ್ಮ ಟ್ರಸ್ಟ್ ಸದಸ್ಯರಿಗೆ ಸುದೀಪ್ ಸೂಚನೆ ನೀಡಿದ್ದಾರೆ. ಇದೀಗ ಸುದೀಪ್ ಸೂಚನೆಯ ಮೇರೆಗೆ ಟ್ರಸ್ಟ್ ಇಂದು ರಿಯಾಜ್ ಕುಟುಂಬಕ್ಕೆ ಹಣ ಹಸ್ತಾಂತರಿಸಿದೆ.
ಸುದೀಪ್ ಸಹಾಯ ನೆನೆದು ಭಾವುಕರಾದ ಯುವತಿ ನಸ್ರಿನ್, ಧನ್ಯವಾದಗಳು ಸುದೀಪ್ ಸರ್, ನನ್ನ ಮದುವೆಗೆ ಫಂಕ್ಷನ್ ಹಾಲ್ ಕೊಡಿಸಿದ್ದಾರೆ. ಅಲ್ಲದೆ, ಮದುವೆಗೆ ಅಗತ್ಯವಾದ ವಸ್ತುಗಳನ್ನು ಕೊಳ್ಳಲು ಒಂದಿಷ್ಟು ಹಣದ ನೆರವನ್ನು ನೀಡಿದ್ದಾರೆ. ನನಗೆ ತಂದೆಯಿಲ್ಲ. ನಮ್ಮಣ್ಣನೇ ನಿಂತು ನನಗೆ ಮದುವೆ ಮಾಡಿಸುತ್ತಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ನಮಗೆ ಸಹಾಯ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದಳು ಎಂದಿದ್ದಾರೆ.
ಇದನ್ನೂ ಓದಿ: ಮಹಾಮಾರಿ ಕರೊನಾ ನಿರ್ನಾಮವಾಗುತ್ತಾ? ಕೋಡಿಮಠ ಶ್ರೀಗಳು ನುಡಿದ ಭವಿಷ್ಯವೇನು?
ಇನ್ನು ಕಳೆದ ವಾರವಷ್ಟೇ ಮೈಸೂರಿನ ಹುಡುಗನೊಬ್ಬನ ಚಿಕಿತ್ಸೆಗೆ ಸುದೀಪ್ ಸ್ಪಂದಿಸಿದ್ದರು. ಅಲ್ಲದೆ, ಕೆಲವು ದಿನಗಳ ಹಿಂದೆ ತಂದೆಯಿಲ್ಲದ ಬಾಲಕಿಯ ನೆರವಿಗೆ ಧಾವಿಸಿದ ಸುದೀಪ್, ಆಕೆಯ ಇಡೀ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಮೂಲಕ ಮೊದಲು ಮಾನವನಾಗು ಎಂಬ ಸಂದೇಶವನ್ನು ಸುದೀಪ್ ಕರೊನಾ ಸಂಕಷ್ಟ ಕಾಲದಲ್ಲಿ ಸಾರುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)