More

    ಎಲ್ಲಾ ಸಾಧಿಸಿದ ನನಗೆ ಒಂದು ದುಃಖವಿದೆ! ಅಂದು…. ನಟ ಜಗ್ಗೇಶ್ ಮನದಾಳ

    ಬೆಂಗಳೂರು: ಸ್ಯಾಂಡಲ್​ವುಡ್​ನ ಹಿರಿಯ ನಟ ಜಗ್ಗೇಶ್​ ಅಭಿನಯದ ರಂಗನಾಯಕ ಸಿನಿಮಾ ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿತು. ಆದರೆ, ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಮೋಡಿ ಮಾಡದೆ, ಹೀನಾಯ ಸೋಲು ಅನುಭವಿಸಿತು. ಈ ಕುರಿತು ಸ್ವತಃ ಜಗ್ಗೇಶ್​ ಅವರೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಸೋಲಿನ ಹಿಂದಿದ್ದ ಕಾರಣ ತಿಳಿಸಿದ್ದರು. ಆದರೆ ಇದೀಗ ಮತ್ತೊಂದು ಸಂದೇಶ ಹಂಚಿಕೊಂಡಿರುವ ನಟ, ತಮ್ಮ 40 ವರ್ಷದ ಸಿನಿಪಯಣ ನೆನೆದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಮೆಟ್ರೋ ಬರುವಾಗ ಹಳಿಗೆ ಹಾರಿ ಪ್ರಾಣ ಬಿಟ್ಟ ವಿದ್ಯಾರ್ಥಿ ರುಂಡ -ಮುಂಡ ಛಿದ್ರ ಛಿದ್ರ

    ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿರುವ ನಟ ಜಗ್ಗೇಶ್​, “ಈ ಚಿತ್ರಗಳ ಮೆಲುಕುಹಾಕಿ ಮತ್ತೊಮ್ಮೆ ನೋಡಿ ನನಗನ್ನಿಸಿದ್ದು ಇವನು ಇಲ್ಲಿಂದ ಬೆಳೆದವ ಎಂದರೆ ಸಿನಿಮ ಕಥೆ ಓಕೆ. ಆದರೆ ನಿಜಜೀವನದಲ್ಲಿ ಯಾರು ನಂಬರು ಬೇರೆಯವರು ಯಾಕೆ ನನಗೆ ಅನುಮಾನ ಬಂತು!ನಾನು ಹುಟ್ಟಿದ್ದು ಸಣ್ಣ ಕುಟುಂಬ ಆದರೆ ದೊಡ್ಡ ಕನಸು.. ನಟನಾಗಬೇಕು ಅದು ಅತಿರಥರ 1980ರ ಕಾಲದಲ್ಲಿ!ನೀವೆ ಹೇಳಿ ಯಾವ ಅಪ್ಪ ಒಪ್ಪುತ್ತಾನೆ ಮಗನ ಈ ಕನಸ್ಸು? ಹಾಗಾಗಿ ಬೂಟಿನ ಏಟು ಬಾಲ್ಯದ ನಿತ್ಯ ಪೂಜೆಯಾಗಿತ್ತು” ಎಂದಿದ್ದಾರೆ.

    “ಅಮ್ಮನ ಕಣ್ಣೀರು ನಿತ್ಯದ ಅಭಿಷೇಕವಾಗಿತ್ತು ಸಿಟ್ಟು ರೋಷದ್ವೇಷ ನನ್ನದಾಗಿತ್ತು ಇದು ನನ್ನ ಬದುಕಾಗಿತ್ತು!ಈಗ ನೆನೆದರೆ ನನ್ನ ಬಗ್ಗೆ ಅನುಮಾನ ನಾನು ಇಷ್ಟು ದೂರ ನಡೆದುಬಂದನೆ ಎಂದು?ನನ್ನ ಬದುಕು ಸಾಧಿಸುವವರಿಗೆ ದಾರಿಕಾಣದವರಿಗೆ ಅಸಾಯಕರಾದವರಿಗೆ ಕೊನೆಯ ಘಟ್ಟ ಎಂದುಕೊಂಡವರಿಗೆ ಸಣ್ಣ ಧೈರ್ಯದ ಚಿಲುಮೆ ಚಿಮ್ಮಲಿ ಅವರ ಮನ ನನ್ನ ನೋಡಿ …ಎಲ್ಲವು ಸಾಧ್ಯ ಯಾವುದು ಅಸಾಧ್ಯವಲ್ಲಾ. ಶ್ರೇಷ್ಟ ಚಿಂತನೆಯ ಮನಸಿದ್ದರೆ ಮಾರ್ಗ” ಎಂದರು.

    ಇದನ್ನೂ ಓದಿ: ಸಹಾಯಕ ಸಿವಿಲ್ ಇಂಜಿನಿಯರ್ ಹುದ್ದೆಗಳ ನೇಮಕಾತಿ ವಿಳಂಬ ಕೆಪಿಎಸ್ಸಿಗೆ ಹೈಕೋರ್ಟ್ ನೋಟಿಸ್

    “ಎಲ್ಲಾ ಸಾಧಿಸಿದ ನನಗೆ ಒಂದು ದುಃಖವಿದೆ. ಅಂದು ಹಟಮಾಡಿದ ಮಗ ಈಗ ಸಾಧಿಸಿದ್ದಾನೆ. ನೋಡಲು ಅಪ್ಪ ಅಮ್ಮ ಇಲ್ಲವೆ ಎಂದು
    ಇಂದಿನ ಸಮಯಕ್ಕೆ ಸಾಧನೆ ಶ್ರಮ ತಪಸ್ಸು, ಯಶಸ್ಸು ಕಾಮಿಡಿ ಪೀಸು ಅಂದರೆ ಫಾರ್​ ಗ್ರಾಂಟೆಡ್​. ಅಣಕ, ಅಪಮಾನವೆ ಯಶಸ್ಸು ಎಂಬ ಕಲ್ಪನೆಯ ಕಾಲದಲ್ಲಿ ಬಂದು ನಿಂತಿರುವೆ. ಮನಸ್ಸು ಎಂಬ ಮೊಸರನ್ನ ರಾಯರು ಎಂಬ ಕಡುಗೋಲಿನಿಂದ ಕಡೆದು ತಿಳಿಯಾದ ಮಜ್ಜಿಗೆ ಮಾಡಿಕೊಂಡು ಪ್ರಶಾಂತವೆಂಬ ಸರೋವರ ಮಾಡಿಕೊಂಡಿರುವೆ ಚಂಚಲ ಮನಸ್ಸನ್ನ” ಎಂದಿದ್ದಾರೆ.

    “ಇಂಥ ಶ್ರಮದ ಬದುಕು ಕಟ್ಟಿಕೊಂಡವ ನಾನು..ನನ್ನಂತೆ ಎಲ್ಲರು ಬೆಳೆಯಿರಿ ಎಂದು ಅಪ್ಪಿದರೆ ಮುತ್ತಿಡುವಂತೆ ನಟಿಸಿ ವಿಷ ಇಟ್ಟು ಕೊಂದು ಸಂಭ್ರಮಿಸುವರು!ಇದರ ಮತ್ತೊಂದು ಹೆಸರೆ ನಂಬಿಕೆ ದ್ರೋಹದ ಕಾಲಮಾನ. ಇಂದು ಶ್ರಮಕ್ಕೆ ಬೆಲೆಯಿಲ್ಲಾ ಬೆಳಗ್ಗೆ ಹುಟ್ಟಿ, ಮಧ್ಯಾಹ್ನ ಬೆಳೆದು, ರಾತ್ರಿ ಸಾಯುವ ಕಾಲಘಟ್ಟ! ಬೆವರುಸುರಿಸದೆ ಬೆಳೆಯದೆ ಅನುಭವ ಹಂಚುವ ಜಗತ್ತು! ಅದೇನೆ ಇರಲಿ ನನ್ನ 40ವರ್ಷದ ಬೆಳವಣಿಗೆ ಬಳಕೆಗೆ ಉಪಯುಕ್ತ ಅನ್ನಿಸಿದರೆ ಅನುಸರಿಸಿ ಬೆಳೆಯಿರಿ, ಉಳಿಯಿರಿ. ಜನ್ಮಕೊಟ್ಟವರ ಸಮಾಜದ ಮುತ್ತು ರತ್ನ ಹವಳ ಪಚ್ಚೆ ವಜ್ರವಾಗಿ, ಹಳ್ಳಿಯಿಂದ ಡೆಲ್ಲಿಯ ಬೆವರಿನ ಪ್ರಯಾಣದ ನಿಮ್ಮ ಮನೆಯ ಬಂಧುವಿಗೆ” ಎಂದು ಬರೆದು ಹಂಚಿಕೊಂಡಿದ್ದಾರೆ.

    ಒಳ್ಳೆಯ ಕಂಟೆಂಟ್ ಇದ್ದರೂ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳಿಗಿಲ್ಲ ಉಳಿವು! ಹೀಗಾದರೆ….

    ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯಬೇಕಾ? ಹಾಗಾದ್ರೆ ಇದನ್ನು ಟ್ರೈ ಮಾಡುವುದೇ ಬೆಸ್ಟ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts