More

    ಸ್ವಚ್ಛತಾ ಅಭಿಯಾನಕ್ಕೂ ಕೊಂಕು ನುಡಿದ ಪಂಚಾಯತ್ ಅಧ್ಯಕ್ಷ; ಲಾರಿ ಕಳಿಸೋಕೂ ಸಿದ್ಧ ಅಂದ ನಟ ಅನಿರುದ್ಧ

    ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಖ್ಯಾತಿಯ ನಟ ಅನಿರುದ್ಧ ಅವರು ನಡೆಸುತ್ತಿರುವ ಸ್ವಚ್ಛತಾ ಅಭಿಯಾನಕ್ಕೆ ಪಂಚಾಯತ್ ಅಧ್ಯಕ್ಷರೊಬ್ಬರು ಕೊಂಕು ನುಡಿದಿದ್ದು, ಅದಕ್ಕೆ ಅನಿರುದ್ಧ ಸಾವಧಾನದಿಂದ ಸ್ಪಷ್ಟನೆ ನೀಡಿ ತಕ್ಕ ಉತ್ತರ ನೀಡಿದ ಪ್ರಸಂಗವೊಂದು ನಡೆದಿದೆ.

    #ಸ್ವಚ್ಛತೆಗಾಗಿನಾನೂಸಹಭಾಗಿ ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಅನಿರುದ್ಧ ಅವರು ಕಳೆದ ಒಂದೂವರೆ ವರ್ಷದಿಂದ ಅಭಿಯಾನ ನಡೆಸುತ್ತಿದ್ದು, ಸ್ವಚ್ಛತೆಯ ಸಲುವಾಗಿ ಜಾಗೃತಿ ಮೂಡಿಸುವ ಹಾಗೂ ಸ್ವಚ್ಛಗೊಳಿಸುವ ಕೆಲಸವನ್ನು ನಡೆಸುತ್ತಿದ್ದಾರೆ. ಹೀಗೆ ಅವರು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದಲ್ಲಿನ ಜಾಗವೊಂದರ ಸ್ವಚ್ಛತೆ ಕುರಿತು ದನಿ ಎತ್ತಿದ್ದರು. ಇದಕ್ಕೆ ಸುಳ್ಯ ಪಂಚಾಯತ್ ಅಧ್ಯಕ್ಷ ನ. ವಿನಯಕುಮಾರ್ ಎಂಬವರು ತಕರಾರು ತೆಗೆದಿದ್ದರು.

    ಫೇಸ್​ಬುಕ್​ನಲ್ಲಿ ಮನವಿ ಮಾಡುವುದರಿಂದ ಸಮಸ್ಯೆಗಳು ಬಗೆಹರಿಯುವುದಾದರೆ ದೇಶದಲ್ಲಿ ಯಾವ ಸಮಸ್ಯೆಗಳೂ ಇರುತ್ತಿರಲಿಲ್ಲ. ಯಾರೋ ಕೆಲಸ ಇಲ್ಲದವರು ಅಲ್ಲಿನ ಜನಪ್ರತಿನಿಧಿಗಳ ಪ್ರಾಮಾಣಿಕ ಪ್ರಯತ್ನವನ್ನು ಅವಲೋಕಿಸದೆ ಪ್ರಚಾರಕ್ಕಾಗಿ ಮೆಸೇಜ್ ಮಾಡಿದರೆ ಯೋಚಿಸದೆ ಅದನ್ನು ಶೇರ್ ಮಾಡುವುದಲ್ಲ. ಕಾನೂನು ನಿಯಮಗಳ ಎಲ್ಲ ಅಗತ್ಯಗಳನ್ನು ಪೂರೈಸಿ ಕಸ ಸಾಗಾಟಕ್ಕೆ ವ್ಯವಸ್ಥೆ ಆಗುತ್ತಿದೆ. ಊಟ ರೆಡಿ ಆದಮೇಲೆ ಬಡಿಸೋಕೆ ಬಂದಂಥವರ ಕತೆ ಆಯ್ತು ಇದು. ಕಸ ವಿಲೇವಾರಿಗೆ ಅದರದ್ದೇ ಆದ ತೊಡಕುಗಳಿವೆ. ಅದನ್ನೆಲ್ಲ ನಿವಾರಿಸಿ ಟೆಂಡರ್ ಪ್ರಕ್ರಿಯೆ ಚಾಲು ಆಗಿದೆ. ಕಸ ಹೋಗಿಯೇ ಹೋಗುತ್ತದೆ, ಯಾರ ಫೇಸ್​ಬುಕ್ ಮನವಿಯ ಕಾರಣದಿಂದಲೂ ಅಲ್ಲ, ನಮ್ಮ ಇಚ್ಛಾಶಕ್ತಿಯ ಕಾರಣದಿಂದ ಎಂದು ವಿನಯಕುಮಾರ್​ ಕಮೆಂಟ್ ಮಾಡಿದ್ದರು.

    ಅದಕ್ಕೆ ಸಮಾಧಾನದಿಂದಲೇ ತಕ್ಕ ಉತ್ತರ ನೀಡಿರುವ ಅನಿರುದ್ಧ, ದೇವರ ದಯೆಯಿಂದ ನನಗೆ ಬೇಕಾದಷ್ಟು ಜನಮನ್ನಣೆ ಪ್ರೀತಿ ಸಿಕ್ಕಿದೆ. ಕಳೆದ 20 ವರ್ಷಗಳಿಂದ ಪ್ರಚಾರದಲ್ಲೂ ಇದ್ದೇನೆ. ಅವನ್ನೆಲ್ಲ ಬಳಸಿಕೊಂಡು ಒಳ್ಳೆಯ ಕೆಲಸ ಮಾಡುವ ಎಂದುಕೊಂಡು ಮಾಡುತ್ತಿರುವುದೇ ವಿನಃ ಇದನ್ನು ಯಾವುದೇ ಪ್ರಚಾರಕ್ಕಾಗಿ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಐದು ವರ್ಷಗಳಿಂದ ಸಮಸ್ಯೆ ಇತ್ತು ಎನ್ನುವುದನ್ನು ತಿಳಿದೇ ಪೋಸ್ಟ್ ಮಾಡಿದ್ದು, ಅಷ್ಟು ಸಮಯದಿಂದ ಊಟ ರೆಡಿ ಆಗುತ್ತಲೇ ಇತ್ತಾ? ಎಂದೂ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ನನ್ನಿಂದ ಆಯ್ತು ಎನ್ನುವ ಆಸೆ ನನಗಿಲ್ಲ, ನಮ್ಮಿಂದ ಆಯ್ತು ಅನ್ನೋದೇ ಮುಖ್ಯ. ಇದಕ್ಕೆ ಜನರು ಮತ್ತು ಎಲ್ಲ ಮಾಧ್ಯಮದವರು ಬೆಂಬಲಿಸುತ್ತಿರುವುದರಿಂದ ಕೆಲಸ ಆಗಿದೆ, ಆಗುತ್ತಿದೆ. ಅದಕ್ಕಾಗಿ ನಾವೆಲ್ಲ ಕೈಜೋಡಿಸೋಣ ಎನ್ನುವುದೇ ತಮ್ಮ ಆಶಯ ಎಂದು ಅನಿರುದ್ಧ ಹೇಳಿದ್ದಾರೆ.

    ಅಲ್ಲದೆ ವಾಟ್ಸ್​ಆ್ಯಪ್ ಗ್ರೂಪ್​ವೊಂದರಲ್ಲಿ ಒಬ್ಬರು, ಅನಿರುದ್ಧನಿಗೆ 10 ಲಾರಿ ಕಳಿಸಿಕೊಡಲು ಹೇಳಿ, ಲೋಡಿಂಗ್ ನಮ್ಮ ಕಾರ್ಮಿಕರಿಂದ ಮಾಡಿಸ್ತೇವೆ, ಫೇಸ್​ಬುಕ್ ವಿಡಿಯೋದಿಂದ ಸಮಸ್ಯೆ ಬಗೆಹರಿಯಲ್ಲ ಎಂದಿದ್ದರು. ಅದಕ್ಕೂ ಅನಿರುದ್ಧ ಉತ್ತರಿಸಿದ್ದು, ಯಾವಾಗ ಕಳಿಸಿಕೊಡಬೇಕು ದಯಮಾಡಿ ತಿಳಿಸಿ, ಕಳಿಸಿಕೊಡುವೆ ಎನ್ನುವ ಮೂಲಕ ಲಾರಿ ಕಳಿಸಿಕೊಡಲೂ ಸಿದ್ಧ ಎಂದಿದ್ದಾರೆ.

    ಸ್ವಚ್ಛತಾ ಅಭಿಯಾನಕ್ಕೂ ಕೊಂಕು ನುಡಿದ ಪಂಚಾಯತ್ ಅಧ್ಯಕ್ಷ; ಲಾರಿ ಕಳಿಸೋಕೂ ಸಿದ್ಧ ಅಂದ ನಟ ಅನಿರುದ್ಧ ಸ್ವಚ್ಛತಾ ಅಭಿಯಾನಕ್ಕೂ ಕೊಂಕು ನುಡಿದ ಪಂಚಾಯತ್ ಅಧ್ಯಕ್ಷ; ಲಾರಿ ಕಳಿಸೋಕೂ ಸಿದ್ಧ ಅಂದ ನಟ ಅನಿರುದ್ಧ

    ವಿದ್ಯುತ್ ಸ್ಪರ್ಶದಿಂದಾಗಿ ‘ಜೂನಿಯರ್ ರವಿಚಂದ್ರನ್​’ ಸಾವು…

    ಹೆಂಡತಿ ತವರಿಗೆ ಹೋದ್ಲು ಅಂತ ಮಗಳ ಜತೆ ಆತ್ಮಹತ್ಯೆಗೆ ಯತ್ನಿಸಿದ ಗಂಡ; ಆಮೇಲಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು ಡಿಜಿಪಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts