ಬೆಂಗಳೂರು: ಉಂಡ ಮನೆಗೆ ಕನ್ನ ಹಾಕಿದ ಭೂಪ, ಲಕ್ಷ ಲಕ್ಷ ಹಣಕ್ಕಾಗಿ ಮಾಲೀಕನ ಮಗನನ್ನೇ ಅಪಹರಿಸಿದ ಕೆಲವೇ ಗಂಟೆಯಲ್ಲಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕೊನೆಗೂ ಬಾಲಕನ ಅಪಹರಣದ ಪ್ರಕರಣ ಸುಖಾಂತ್ಯ ಕಂಡಿದೆ.
ಬೆಂಗಳೂರು ಪೂರ್ವ ತಾಲೂಕಿನ ಕಿತ್ತಗನೂರಿನ ಹ್ಯಾಪಿ ಲೇಔಟ್ನಲ್ಲಿ ಈ ಘಟನೆ ನಡೆದಿದ್ದು, 5 ಲಕ್ಷ ರೂ. ಹಣ ಕೊಡದಿದ್ರೆ ಮಗನನ್ನ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕಿದ್ದ 24 ಗಂಟೆಯಲ್ಲೇ ಆವಲಹಳ್ಳಿ ಪೊಲೀಸರು ಆರೋಪಿಗಳನ್ನು ಸೆರೆಹಿಡಿದು ಹೆಡೆಮುರಿಕಟ್ಟಿದ್ದಾರೆ.
ಕೆಆರ್ ಪುರಂ ಮೂಲದ ಶಕ್ತಿವೇಲು ಮತ್ತು ಸುನಿತಾ ಬಂಧಿತರಾಗಿದ್ದು, ಈ ಇಬ್ಬರು ಮನೋಜ್ ಕುಮಾರ್ ಎಂಬುವವರ ಮನೆಯಲ್ಲಿ ಕೆಲಸಕ್ಕಿದ್ದರು. ದುಡ್ಡಿನ ಆಸೆಗೆ ಬಿದ್ದು, ಮನೋಜ್ ಅವರ 6 ವರ್ಷದ ಮಗನನ್ನು ಕಿಡ್ಯ್ನಾಪ್ ಮಾಡಲು ಹೋಗಿ ಈಗ ಕಂಬಿ ಎಣಿಸುತ್ತಿದ್ದಾರೆ.
ಮಗ ಶಾಲೆಯಿಂದ ಬರುವ ವ್ಯಾನ್ ಅಡ್ಡಗಟ್ಟಿ ಕಿಡ್ನ್ಯಾಪ್ಗೆ ಯತ್ನಿಸಿದ್ದಾರೆ. ಶಾಲಾ ವ್ಯಾನ್ ಚಾಲಕ ಬಾಲಕನನ್ನು ನೀಡಲು ನಿರಾಕರಿಸಿದ್ದಾನೆ. ಈ ವೇಳೆ ಅಲ್ಲಿಂದ ಕಾಲ್ಕಿತ್ತ ಆರೋಪಿಗಳು, ನಂತರವೂ ಮನೋಜ್ ಕುಮಾರ್ ಅವರಿಗೆ ಕರೆ ಮಾಡಿ, 5 ಲಕ್ಷ ರೂ. ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಪೋಷಕರನ್ನು ತೋರಿಸಿದರೆ ಮಾತ್ರ ಬಾಲಕನನ್ನು ಕಳುಹಿಸಿಕೊಡುವುದಾಗಿ ಹೇಳಿದ್ದ ಚಾಲಕನ ಮೇಲೆಯೂ ಹಲ್ಲೆ ನಡೆಸಿದ್ದರು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ. (ದಿಗ್ವಿಜಯ ನ್ಯೂಸ್)
ಸ್ಥಳೀಯರಿಗೆ ಸೇತುವೆ ಮುಳುಗೋ ಭಯ.. ಇತ್ತ ಪ್ರಾಣಕ್ಕೂ ಲೆಕ್ಕಿಸದ ಪ್ರವಾಸಿಗರಿಗೆ ಸೆಲ್ಫಿ ಕ್ರೇಜ್!
ಕೆ.ಎನ್.ರಾಜಣ್ಣ ಹೇಳಿಕೆಗೆ ಖಂಡಿಸಿ ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ