ಕೊಪ್ಪಳ: ಚಾಲಕನ ಅತಿವೇಗದ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಅಪಘಾತ ಸಂಭವಿಸಿದ್ದು, ಟೆಂಪೊ ಪ್ಯಾಸೆಂಜರ್ ವಾಹನವೊಂದು ಹೆದ್ದಾರಿಯಿಂದ ಹೋಟೆಲ್ಗೆ ನುಗ್ಗಿ ಗ್ಯಾಸ್ ಒಲೆಗೇ ಡಿಕ್ಕಿ ಹೊಡೆದ ಪ್ರಕರಣ ಸಂಭವಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ ಈ ಅಪಘಾತ ನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಹೆದ್ದಾರಿಯ ಆ ಕಡೆಯಿಂದ ಟೆಂಪೊ ಪ್ಯಾಸೆಂಜರ್ ವಾಹನ ಏಕಾಏಕಿ ಹೋಟೆಲ್ನತ್ತ ನುಗ್ಗಿ ಬಂದಿದೆ. ಇದನ್ನು ತಕ್ಷಣ ಗಮನಿಸಿದ್ದ ಅಲ್ಲಿದ್ದವರು ಕೂಡಲೇ ಎದ್ದು ಪಕ್ಕಕ್ಕೆ ಓಡಿದ್ದರು. ಅದಾಗ್ಯೂ ವೇಗವಾಗಿಯೇ ಬಂದ ವಾಹನ ಹೋಟೆಲ್ಗೇ ನುಗ್ಗಿದ್ದು ಗ್ಯಾಸ್ ಒಲೆಗೆ ಡಿಕ್ಕಿ ಹೊಡೆದಿದೆ.
ಹೋಟೆಲ್ಗೆ ನುಗ್ಗುವ ಮೊದಲು ಈ ವಾಹನ ಬೈಕ್ ಸವಾರನೊಬ್ಬನಿಗೆ ಡಿಕ್ಕಿ ಹೊಡೆದಿತ್ತು. ಬಳಿಕ ಕ್ಷಣಮಾತ್ರದಲ್ಲಿ ಹೋಟೆಲ್ಗೆ ನುಗ್ಗಿತ್ತು. ಅಲ್ಲಿದ್ದ ಜನರು ತಕ್ಷಣ ಎದ್ದು ಪಕ್ಕಕ್ಕೆ ಓಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಬೆದರಿದ ಗ್ರಾಹಕರು-ಸಿಬ್ಬಂದಿ ಎದ್ದುಬಿದ್ದು ಓಡಿಹೋಗಿದ್ದಾರೆ. ಈ ಅಪಘಾತದಲ್ಲಿ ಟೆಂಪೊ ಪ್ಯಾಸೆಂಜರ್ ವಾಹನ ಸಂಪೂರ್ಣ ಜಖಂಗೊಂಡಿದೆ. 2-3 ಬೈಕ್ ಮತ್ತು ಹೋಟೆಲ್ ಪೀಠೋಪಕರಣಗಳು ಹಾನಿಗೀಡಾಗಿವೆ. ಈ ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿಷ್ಣುವರ್ಧನ್ ಜನ್ಮದಿನಂದು ‘ಯಜಮಾನೋತ್ಸವ’; ನಡೆಯಲಿದೆ ದಾಖಲೆಯ ಕಟೌಟ್ ಜಾತ್ರೆ..