ವಿಜಯಪುರ: ಗೂಡ್ಸ್ ವೆಹಿಕಲ್ ಹಾಗೂ ಏಸ್ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ವಿಜಯಪುರ ತಾಲೂಕಿನ ಅರಕೇರಿ ಬಳಿ ಈ ಅಪಘಾತ ಸಂಭವಿಸಿದೆ.
ವಿಜಯಪುರ ಜಿಲ್ಲೆ ಲೋಣಿ ಗ್ರಾಮದ ಬುದ್ದಯ್ಯ ಹಿರೇಮಠ (70), ಪ್ರತೀಕ ಹಿರೇಮಠ (27), ಸಿದ್ರಾಮ್ ಹಿರೇಮಠ (22) ಮೃತಪಟ್ಟವರು. ಇವರೆರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ಏಸ್ ವಾಹನದಲ್ಲಿದ್ದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಅಪಘಾತ ಹಾಗೂ ಮೃತಪಟ್ಟವರಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಇನ್ನು ಸ್ಮಾರ್ಟ್ಫೋನ್ ಇಲ್ಲದೆ ವಾಟ್ಸ್ಆ್ಯಪ್ ಬಳಸಬಹುದು; ಬೀಟಾ ಯೂಸರ್ಸ್ಗೆ ಹೊಸ ಆಪ್ಷನ್!
ಇದು ಕರೊನಾ ಲಸಿಕೆ ಇನ್ನೂ ಪಡೆಯದವರು ಓದಲೇಬೇಕಾದ ವಿಷಯ: ಹೊರಬಿತ್ತು ಮತ್ತೊಂದು ಅಧ್ಯಯನ ವರದಿ