More

    ‘ಮುಂದಿನ ವರ್ಷ ಗೆದ್ದೇ ಗೆಲ್ತೀವಿ’ ಆರ್​ಸಿಬಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಎಬಿಡಿ

    ಅಬುದಾಬಿ: ಸದಾ ಈ ಸಲ ಕಪ್​ ನಮ್ಮದೇ ಎಂದು ಕನವರಿಸುವ ಆರ್​ಸಿಬಿ ಅಭಿಮಾನಿಗಳಿಗೆ ಆರ್​ಸಿಬಿ ತಂಡ ಈ ಸಲವೂ ನಿರಾಸೆ ಉಂಟುಮಾಡಿದೆ. ಆದರೆ ಪ್ರತಿ ಸಲದಂತೆ ಈ ಸಲವೂ ಕೂಡ ಅಭಿಮಾನಿಗಳ ಮನ ಗೆಲ್ಲುವಲ್ಲಿ ತಂಡ ಯಶಸ್ವಿಯಾಗಿದೆ. ಈ ಬಾರಿ ಆರ್​ಸಿಬಿ ಪ್ಲೇ ಆಫ್​ ತಲುಪುವುದಕ್ಕೆ ಅತ್ಯಂತ ಶ್ರೇಷ್ಠ ಕೊಡುಗೆ ನೀಡಿದ, ಅಭಿಮಾನಿಗಳಿಗೆ ಅಚ್ಚು ಮೆಚ್ಚಾದ ಎಬಿ ಡಿ ವಿಲಿಯರ್ಸ್​ ಇದೀಗ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಮುಂದಿನ ವರ್ಷ ತಂಡವನ್ನು ಇನ್ನಷ್ಟು ಬಲಿಷ್ಠ ಮಾಡಿಕೊಂಡು, ಕಪ್​ ಗೆಲ್ಲುವುದಾಗಿ ಭರವಸೆ ಕೊಟ್ಟಿದ್ದಾರೆ.

    ಇದನ್ನೂ ಓದಿ: ಇಸ್ಲಾಂನಲ್ಲಿಲ್ಲ ಅಹಿಂಸೆ ಪ್ರಚೋದಿಸುವ ಬೋಧನೆ: ಮೌಲಾನಾ ಯು.ಕೆ ಅಬ್ದುಲ್ ಅಝೀಝ್ ದಾರಿಮಿ

    ಶುಕ್ರವಾರ ನಡೆದ ಎಲಿಮಿನೇಟರ್​ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್​ ಎದುರು ಆರ್​ಸಿಬಿ ಸೋಲುಂಡಿದೆ. ಆಟ ಮುಗಿಸಿ ಡ್ರೆಸ್ಸಿಂಗ್​ ರೂಂ ಸೇರಿದ ಆರ್​ಸಿಬಿ ತಂಡ, ಅಭಿಮಾನಿಗಳಿಗಾಗಿ ವಿಡಿಯೋ ಒಂದನ್ನು ಮಾಡಿದೆ. ನಾವು ಕಷ್ಟ ಪಟ್ಟು ಪ್ಲೇ ಆಫ್​ ತಲುಪಿದ್ದೇವೆ. ಕೆಲವು ಸಣ್ಣ ಪುಟ್ಟ ತಪ್ಪುಗಳ ಕಾರಣ ಗೆಲುವಿನಿಂದ ದೂರ ಉಳಿಯುವಂತಾಗಿದೆ. ಆದರೆ ಕಳೆದ ವರ್ಷದ ಹಾದಿ ತಪ್ಪಿದ್ದ ತಂಡ ಈ ವರ್ಷ ಸಾಕಷ್ಟು ಸುಧಾರಿಸಿಕೊಂಡು ಬಂದಿದ್ದೇವೆ. ಮುಂದಿನ ವರ್ಷಕ್ಕೆ ಇನ್ನಷ್ಟು ಹೆಚ್ಚಿನ ಪ್ರಯತ್ನ ಮಾಡೋಣ ಎಂದು ತಂಡದ ನಾಯಕ ವಿರಾಟ್​ ಕೊಹ್ಲಿ ತಂಡದ ಸದಸ್ಯರಿಗೆ ಹುರಿದುಂಬಿಸಿದ್ದಾರೆ.

    ಇದನ್ನೂ ಓದಿ: PHOTOS| ಮಾದಕ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕಣ್ಸನ್ನೆ ಬೆಡಗಿ!

    ವಿಡಿಯೋದಲ್ಲಿ ತಂಡದ ಪ್ರತಿಯೊಬ್ಬ ಸದಸ್ಯರೂ ಮಾತನಾಡಿದ್ದಾರೆ. ಯಾರೊಬ್ಬರೂ ಋಣಾತ್ಮಕವಾಗಿ ಮಾತನಾಡದೆ, ಧನಾತ್ಮಕವಾಗಿಯೇ ಮಾತನಾಡಿದ್ದು, ಮುಂದಿನ ವರ್ಷ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ವಿಶೇಷವಾಗಿ ಆರ್​ಸಿಬಿ ಸ್ಟಾರ್​ ಎನಿಸಿಕೊಂಡಿರುವ ಎಬಿಡಿ, ಆರ್​ಸಿಬಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಈ ವಿಡಿಯೋವನ್ನು ಆರ್​ಸಿಬಿ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. (ಏಜೆನ್ಸೀಸ್​)

    ಹಸೆಮಣೆ ಏರಬೇಕಾದವಳು ಚಟ್ಟಕ್ಕೇರಿದಳು! ಬೈಕಲ್ಲಿ ಬಂದು ಗುಂಡಿಟ್ಟ ದುಷ್ಕರ್ಮಿಗಳು

    ಮಸೀದಿಯಲ್ಲಿ ಹೋಮ ಮಾಡುತ್ತೇವೆ! ವಿವಾದಾತ್ಮಕ ಹೇಳಿಕೆ ಹಿಂಪಡೆದ ವಿಎಚ್​ಪಿ ನಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts