ಆಕ್ಲ್ಯಾಂಡ್: 90ರ ದಶದಲ್ಲಿ ತಮಿಳಿನ ಜನಪ್ರಿಯ ನಟರಲ್ಲಿ ಅಬ್ಬಾಸ್ ಸಹ ಒಬ್ಬರು. ‘ಕಾದಲ್ ದೇಶಂ’ ಚಿತ್ರದ ಮೂಲಕ ಹೀರೋ ಆದ ಅವರು, ಕನ್ನಡದ ‘ಶಾಂತಿ ಶಾಂತಿ ಶಾಂತಿ’ ಚಿತ್ರದಲ್ಲೂ ನಟಿಸಿದ್ದರು. ಒಂದಿಷ್ಟು ಜನಪ್ರಿಯ ಚಿತ್ರಗಳಲ್ಲಿ, ಆ ಕಾಲದ ಪ್ರಖ್ಯಾತ ಹೀರೋಯಿನ್ಗಳ ಜತೆಗೆ ನಟಿಸಿದ ಅಬ್ಬಾಸ್, ಆ ನಂತರ ಚಿತ್ರರಂಗದಿಂದ ದೂರವಾಗಿದ್ದರು. ಅವರು ಎಲ್ಲಿದ್ದರು, ಏನು ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಉತ್ತರಗಳು ಸಿಕ್ಕಿರಲಿಲ್ಲ.
ಇದನ್ನೂ ಓದಿ: ಕಲಾವಿದೆಯಾಗಿ ನಾನು ಚೌಕಟ್ಟಿಗೆ ಒಳಪಡಲ್ಲ: ಭಾವನಾ..
ಕೆಲವು ವರ್ಷಗಳ ಹಿಂದೆ ಒಂದು ವಿಡಿಯೋ ಇಂಟರ್ವ್ಯೂನಲ್ಲಿ ಅಬ್ಬಾಸ್, ತಾವು ನ್ಯೂಜಿಲ್ಯಾಂಡ್ನ ಆಕ್ಲ್ಯಾಂಡ್ನಲ್ಲಿ ಇರುವುದಾಗಿ ಹೇಳಿಕೊಂಡಿದ್ದರು. ಅಲ್ಲೇ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಅವರು ನೆಲೆಸಿರುವುದಾಗಿ ಅವರು ಹೇಳಿದ್ದರು. ಇಷ್ಟಕ್ಕೂ, ಅವರು ಭಾರತ ಬಿಟ್ಟು ನ್ಯೂಜಿಲ್ಯಾಂಡ್ಗೆ ಹೋಗಿ ನೆಲೆಗೊಳ್ಳುವುದಕ್ಕೆ ಕಾರಣವೇನಿರಬಹುದು ಎಂದು ಆಶ್ಚರ್ಯವಾಗಬಹುದು.
ಅಬ್ಬಾಸ್ಗೆ ಇಲ್ಲಿ ಸಾಕಾಗಿತ್ತಂತೆ. ಇಲ್ಲಿಂದ ದೂರ ಹೋಗಿ ಎಲ್ಲಾದರೂ ನೆಲೆಗೊಳ್ಳಬೇಕು ಎಂದು ಅವರು ಯೋಚಿಸುತ್ತಿದ್ದಾಗ, ಒನ್ನೆ ಅವರು ಯಾರದ್ದೋ ಮದುವೆಗೆ ಆಕ್ಲ್ಯಾಂಡ್ಗೆ ಹೋಗಿದ್ದರಂತೆ. ಅಲ್ಲಿನ ಪರಿಸರ ಅವರಿಗೆ ಬಹಳ ಇಷ್ಟವಾಗಿತ್ತಂತೆ. ಹಾಗಾಗಿ, ಭಾರತದಿಂದ ದೂರ ಹೋಗಿ ಅವರು ಅಲ್ಲಿ ನೆಲೆಗೊಂಡಿದ್ದಾರೆ.
ಆಕ್ಲ್ಯಾಂಡ್ಗೆ ಹೋಗಿ ನೆಲೆಸಿದ್ದು, ಅಷ್ಟೇನೂ ಸುಲಭವಾಗಿರಲಿಲ್ಲವಂತೆ. ಆರಂಭದಲ್ಲಿ ಅವರು ಬಹಳ ಕಷ್ಟಪಡಬೇಕಾಯಿತಂತೆ. ಅಲ್ಲಿಗೆ ಹೋದ ಹೊಸದರಲ್ಲಿ ಅವರಿಗೆ ಏನು ಕೆಲಸ ಮಾಡಬೇಕು ಎಂದು ಗೊತ್ತಾಗಲಿಲ್ಲವಂತೆ. ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಕೆಲವು ದಿನಗಳ ಕಾಲ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿದೆ. ಅಲ್ಲಿ ಬಾತ್ರೂಮ್ ಸಹ ತೊಳೆದಿದ್ದೆ. ಆ ಕೆಲಸ ಬೋರ್ ಎನಿಸಿತ್ತು. ಕೆಲವೊಮ್ಮೆ ನನಗೆ ಸೂಸೈಡ್ ಯೋಚನೆ ಕೂಡಾ ಬಂದಿತ್ತು. ಕ್ರಮೇಣ ಅದೆಲ್ಲ ನೆಗೆಟಿವ್ ಯೋಚನೆಗಳಿಂದ ಹೊರಬಂದು, ಹೊಸ ಜೀವನ ನಡೆಸಿದೆ. ಮೋಟರ್ ಬೈಕ್ ಮೆಕ್ಯಾನಿಕ್ ಸೇರಿದಂತೆ ಹಲವು ಕೆಲಸಗಳನ್ನು ಮಾಡಿದೆ. ಈ ಎಲ್ಲ ಕೆಲಸಗಳು ಸಹ ನನಗೆ ಬಹಳ ಹೊಸದು. ಈಗ ಕಾಲ್ಸೆಂಟರ್ವೊಂದರಲ್ಲಿ ನಾನು ಅನಲಿಸ್ಟ್ ಹಾಗಿ ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ತರಬೇತಿ ಕೊಡುತ್ತಿದ್ದೇನೆ’ ಎನ್ನುತ್ತಾರೆ ಅಬ್ಬಾಸ್.
ಇದನ್ನೂ ಓದಿ: ಔರಂಗಜೇಬನ ಪಾತ್ರದಲ್ಲಿ ಬಾಬ್ಬಿ; ‘ಹರಿಹರ ವೀರ ಮಲ್ಲು’ ಚಿತ್ರದಲ್ಲಿ ಬಾಲಿವುಡ್ ನಟ
ಇದೆಲ್ಲದರಿಂದ ಅಬ್ಬಾಸ್ ಬಹಳ ಪಾಠ ಕಲಿತಿದ್ದಾರಂತೆ. ಈ ಬಗ್ಗೆ ಮಾತನಾಡಿರುವ ಅವರು, ‘ನಟನಾಗಿದ್ದಾಗ ನನಗೆ ಬಹಳ ಅಹಂ ಇತ್ತು. ಆ ನಂತರ ಜೀವನ ಸಾಕಷ್ಟು ಪಾಠ ಕಲಿಸಿತು. ಈಗ ಎಲ್ಲದರಿಂದ ಹೊರ ಬಂದಿದ್ದೇನೆ. ಸಾಮಾನ್ಯ ಜೀವನ ನಡೆಸಿದರೂ ಬಹಳ ಖುಷಿಯಾಗಿದ್ದೇನೆ’ ಎಂದು ಅಬ್ಬಾಸ್ ಹೇಳಿಕೊಂಡಿದ್ದಾರೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದು ಕೊಲೆ … ಪೋಸ್ಟ್ ಮಾರ್ಟಂ ಮಾಡಿದವರಿಂದ ಬಯಲು