More

    ಪ್ರಶಾಂತ್​ ನೀಲ್​ ನಿರ್ದೇಶನದ ಹೊಸ ಚಿತ್ರದಲ್ಲಿ ಆಮೀರ್​ ಖಾನ್​ ವಿಲನ್​?

    ಮುಂಬೈ: ತನಗೆ ನಟನೆ ಸಾಕಾಗಿದೆ, ಇನ್ನು ಮುಂದೆ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಆಮೀರ್​ ಖಾನ್​ ಮೊದಲೇ ಸೂಕ್ಷ್ಮವಾಗಿ ಹೇಳಿದ್ದರು. ಅದಕ್ಕೆ ಸರಿಯಾಗಿ ‘ಚಾಂಪಿಯನ್​’ ಚಿತ್ರದಲ್ಲಿ ನಟಿಸುವುದರಿಂದ ಹಿಂದೆ ಸರಿದಿದ್ದರು. ಆಮೀರ್​ ತಾನೊಲ್ಲೆ ಎಂದು ಹೇಳುತ್ತಿದ್ದರೂ, ಅವರ ಜತೆಗೆ ಕೆಲಸ ಮಾಡುವುದಕ್ಕೆ ಆಸೆ ಪಡುವವರ ಸಂಖ್ಯೆ ಮಾತ್ರ ಹೆಚ್ಚಾಗುತ್ತಿದೆ. ಈಗಿನ ಸುದ್ದಿಯ ಪ್ರಕಾರ, ಆಮೀರ್​ ಖಾನ್​ ಜತೆಗೆ ಕೆಲಸ ಮಾಡುವುದಕ್ಕೆ ‘ಉಗ್ರಂ’ ಮತ್ತು ‘ಕೆಜಿಎಫ್​’ ಖ್ಯಾತಿಯ ಪ್ರಶಾಂತ್​ ನೀಲ್​ ಸಹ ಆಸಕ್ತಿ ತೋರಿಸಿದ್ದಾರಂತೆ.

    ಇದನ್ನೂ ಓದಿ: ‘ಛೂ ಮಂತರ್​’ ಮೂಲಕ ತಮ್ಮ ಆಸೆ ತೀರಿಸಿಕೊಂಡ ಶರಣ್​ …

    ಪ್ರಶಾಂತ್​ ಸದ್ಯ ‘ಸಲಾರ್​’ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದ ಕೆಲಸಗಳೆಲ್ಲ ಮುಗಿದ ನಂತರ ಅವರು ಜ್ಯೂನಿಯರ್​ ಎನ್​ಟಿಆರ್​ಗೊಂದು ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದಲ್ಲಿ ಜ್ಯೂನಿಯರ್​ ಎನ್​ಟಿಆರ್​ ಎದುರು ಖಳನಾಯಕನನ್ನಾಗಿ ಆಮೀರ್​ ಖಾನ್​ ಅವರನ್ನು ಕರೆತರುವುದು ಪ್ರಶಾಂತ್​ ಯೋಚನೆಯಂತೆ.

    ಪ್ರಶಾಂತ್​ ನೀಲ್​ ನಿರ್ದೇಶನದ ಚಿತ್ರಗಳಲ್ಲಿ ನಾಯಕನಿಗಿರುವಷ್ಟೇ ಪ್ರತಿನಾಯಕನಿಗೂ ಸ್ಕೋಪ್​ ಇರುತ್ತದೆ. ‘ಕೆಜಿಎಫ್​ 2’ ಚಿತ್ರದಲ್ಲಿ ಯಶ್​ ಎದುರು ಸಂಜಯ್​ ದತ್​ ಅವರನ್ನು ನಿಲ್ಲಿಸಿದ್ದರು ನೀಲ್​. ‘ಸಲಾರ್​’ನಲ್ಲಿ ಪ್ರಭಾಸ್​ಗೆ ವಿಲನ್​ ಆಗಿ ಪೃಥ್ವಿರಾಜ್​ ಸುಕುಮಾರನ್ ಅವರನ್ನು ಕರೆದುಕೊಂಡು ಬಂದಿದ್ದಾರೆ. ಅದೇ ರೀತಿ, ಜ್ಯೂನಿಯರ್​ ಎನ್​ಟಿಆರ್​ ಅಭಿನಯದ ಹೊಸ ಚಿತ್ರದಲ್ಲಿ ಅವರಿಗೆ ವಿಲನ್​ ಆಗಿ ಆಮೀರ್ ಖಾನ್​ರನ್ನು ಕರೆತಂದರೆ ಹೇಗೆ ಎಂಬ ಯೋಚನೆ ಪ್ರಶಾಂತ್​ ಅವರದ್ದು.

    ಇದನ್ನೂ ಓದಿ: ಈ ಆರು ಓಟಿಟಿಗಳು 2022ರಲ್ಲಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

    ಈ ಚಿತ್ರ ಘೋಷಣೆಯಾಗಿದೆಯಾದರೂ, ಪ್ರಾರಂಭವಾಗುವುದೇನಿದ್ದರೂ 2024ರಲ್ಲಿ. ಇನ್ನು, ಬಿಡುಗಡೆಯಾಗುವುದು 2025ರಲ್ಲಿ. ಸಾಕಷ್ಟು ಸಮಯವಿರುವುದರಿಂದ, ಆಮೀರ್​ ಖಾನ್​ ಅವರನ್ನು ಒಪ್ಪಿಸಿ ಹೇಗಾದರೂ ಕರೆ ತರಬೇಕು ಎನ್ನುವುದು ಪ್ರಶಾಂತ್​ ಐಡಿಯಾ. ಬರೀ ಪ್ರಶಾಂತ್​ ಅಷ್ಟೇ ಅಲ್ಲ, ದಕ್ಷಿಣದ ಇನ್ನೂ ಹಲವು ನಿರ್ದೇಶಕರು ಮತ್ತು ನಿರ್ಮಾಪಕರು ಆಮೀರ್​ ಅವರನ್ನು ತಮ್ಮ ಚಿತ್ರಕ್ಕಾಗಿ ಸಂಪರ್ಕಿಸಿದ್ದಾರಂತೆ. ಈ ಪೈಕಿ ಯಾರಿಗೆ ಅವರು ಗ್ರೀನ್​ ಸಿಗ್ನಲ್​ ಕೊಡುತ್ತಾರೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.

    ‘ಸೂರ್ಯ 42’ ಚಿತ್ರದ ಹಿಂದಿ ಅವತರಣಿಕೆಗೆ 100 ಕೋಟಿ ಕೊಟ್ಟರಂತೆ ‘RRR’ ವಿತರಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts