ಬೆಂಗಳೂರು: ಒಬ್ಬ ವ್ಯಕ್ತಿಯ ಹೆಸರಲ್ಲಿ ಬರೋಬ್ಬರಿ 12 ಆಸ್ಪತ್ರೆಯಲ್ಲಿ 12 ಬೆಡ್ ಬ್ಲಾಕ್ ಆಗಿದೆ. ಇವರು ಮಾಡ್ತಿರೋದು ಭ್ರಷ್ಟಾಚಾರ ಅಲ್ಲ, ಮರ್ಡರ್. ಇವರದ್ದು ಮಧ್ಯರಾತ್ರಿಯ ದಂಧೆ. ರಾತ್ರಿ 12 ಗಂಟೆಗೆ ಇವರ ದಂಧೆ ಶುರುವಾಗುತ್ತೆ. ಇವರೆಲ್ಲ ಹುಳ ಬಿದು ಸಾಯ್ತಾರೆ. ಒಂದು ಡೇಟಾ ಪಡೆಯೋದಕ್ಕೆ ಸಂಸದನಾಗಿ ನಾನು ಪಟ್ಟಪಾಡು ಅಷ್ಟಿಷ್ಟಲ್ಲ. ಕಚಡಾ ಆಫೀಸರ್ಗಳು ಮತ್ತು ಭ್ರಷ್ಟಾಚಾರಿಗಳಿಂದಾಗಿ ಜನ ಸಾಯುತ್ತಿದ್ದಾರೆ…
ಕೋವಿಡ್ ವಾರ್ಡ್ನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆಸುತ್ತಿರುವವರ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಗರಂ ಆದ ಪರಿ ಇದು. ಬೆಡ್ ಬ್ಲಾಕಿಂಗ್ ದಂಧೆ ಬಗ್ಗೆ ಸಿಎಂ ಜತೆ ಮಾತನಾಡಿದ್ದೇನೆ. ಅವರು ತಕ್ಷಣವೇ ನನ್ನನ್ನು ಬರಲು ಹೇಳಿದ್ದಾರೆ. ತಪ್ಪಿತಸ್ಥರನ್ನು ಜೈಲಿಗಟ್ಟುವ ಭರವಸೆ ನೀಡಿದ್ದಾರೆ. ಕರೊನಾ ಸಂಕಷ್ಟ ಕಾಲದಲ್ಲೂ ಹಣ ಮಾಡಲು ಇಳಿದಿರುವವರು ಹುಳ ಬಂದು ಸಾಯ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿರಿ ರಾಮನಗರದಲ್ಲಿ ಹಾಡಹಗಲೇ ಗ್ರಾಮ ಪಂಚಾಯಿತಿ ಸದಸ್ಯನ ಬರ್ಬರ ಹತ್ಯೆ!
ಬಿಬಿಎಂಪಿ ವಾರ್ ರೂಂನಿಂದ ಪ್ರಮುಖ ಸಂದೇಶವೊಂದು ಬಂದಿದೆ. ಎಸ್ಸಿ, ಎಸ್ಟಿ ಬೆಡ್ಗಳನ್ನು ಬ್ಲಾಕ್ ಮಾಡಿದ್ದಾರೆ. ವಾರ್ ರೂಂನಲ್ಲಿರುವ ಡಾ.ರನೀನ್ ಜೋಸೆಫ್ ಎಂಬ ಅಧಿಕಾರಿ ಬೆಡ್ ಬ್ಲಾಕ್ ಮಾಡದಿರುವ ರೀತಿ ಸಾಫ್ಟ್ ವೇರ್ ರೆಡಿ ಮಾಡಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಸ್ಮಶಾನದಲ್ಲೂ ಹೌಸ್ಫುಲ್ ಬೋರ್ಡ್! ಶವಗಳ ಹೊತ್ತು ಕ್ಯೂ ನಿಂತ ಆಂಬುಲೆನ್ಸ್
ಅಪಘಾತ: ಸಾವಿನಲ್ಲೂ ಸಾರ್ಥಕತೆ ಮೆರೆದ ಚಿತ್ರದುರ್ಗ ಉಪವಿಭಾಗಾಧಿಕಾರಿ ವಿ.ಪ್ರಸನ್ನ!
https://www.vijayavani.net/a-boyfriend-threatening-tv-actress/https://www.vijayavani.net/oxygen-problem-in-chamarajanagara-covid-hospital-newly-married-person-case/