ಬೆಂಗಳೂರು: ಅನ್ಲಾಕ್ ಶುರವಾಗುತ್ತಿದ್ದಂತೆ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡುತ್ತಿದ್ದು, ಪ್ರವಾಸೋದ್ಯಮ ಚೇತರಿಕೆ ಹಾದಿಯಲ್ಲಿ ಸಾಗುತ್ತಿದೆ. ಆದರೆ, ನಿರೀಕ್ಷಿತ ಪ್ರಮಾಣದ ಆದಾಯ ಗಳಿಕೆಗೆ ಸಮಯಾವಕಾಶ ಬೇಕಿದೆ.
ಇನ್ನು ಲಾಕ್ಡೌನ್ ಹಿನ್ನೆ ಎರಡು ತಿಂಗಳಿಂದ ಮನೆಯಲ್ಲೇ ಇದ್ದವರ ಪೈಕಿ ಕೆಲವರು ವೀಕೆಂಡ್ ಟ್ರಿಪ್ಗೆಂದು ರಾಜ್ಯದ ಪ್ರಮುಖ ಪ್ರವಾಸಿತಾಣಗಳತ್ತ ಆಗಮಿಸುತ್ತಿದ್ದ ದೃಶ್ಯ ಇಂದು ಬೆಳ್ಳಂಬೆಳಗ್ಗೆ ಕಂಡುಬಂತು. ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ, ಮೈಸೂರು ಅರಮನೆ, ಚಿಕ್ಕಬಳ್ಳಾಪುರದ ನಂದಿಬೆಟ್ಟ, ಹಂಪಿ, ಬೆಂಗಳೂರು ಸಮೀಪದ ಮುತ್ಯಾಲಮಡು, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಗದಗನ ಬಿಂಕದಕಟ್ಟಿ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ… ಹೀಗೆ ಹಲವೆಡೆ ಪ್ರವಾಸಿಗರು ಬರುತ್ತಿದ್ದಾರೆ.
ನಂದಿಗಿರಿಧಾಮ ಹೊರತುಪಡಿಸಿ ಈ ತಾಣಗಳಲ್ಲಿ ಮೊದಲಿನಷ್ಟು ಪ್ರವಾಸಿಗರ ಸಂಖ್ಯೆ ಇಲ್ಲವಾದರೂ ನೂರಾರು ಜನ ಭೇಟಿ ಕೊಡುತ್ತಿದ್ದಾರೆ. ನಂದಿಬೆಟ್ಟದಲ್ಲಿ ಮಾತ್ರ ಸಾವಿರಾರು ಸಂಖ್ಯೆಯ ಜನ ಕಾರು-ಬೈಕ್ಗಳಲ್ಲಿ ಸೂರ್ಯೋದಯಕ್ಕೂ ಮುನ್ನವೇ ಲಗ್ಗೆಯಿಟ್ಟಿದ್ದಾರೆ.
ಬೆಳ್ಳಂಬೆಳಗ್ಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ಲಗ್ಗೆ! ಮಾರ್ಗದಲ್ಲೇ ಬಿಸಿ ಮುಟ್ಟಿಸಿದ ಪೊಲೀಸರು
ಮಳೆ ಅವಾಂತರ: ಜೀವ ಭಯದಲ್ಲೇ ಹಗ್ಗ ಕಟ್ಟಿಕೊಂಡು ಹಳ್ಳ ದಾಟುತ್ತಿರುವ ರೈತರು
ಸಲಿಂಗಕಾಮಕ್ಕೆ ಒಪ್ಪದ ಸರ್ಕಾರಿ ಶಾಲೆ ಶಿಕ್ಷಕನ ಬರ್ಬರ ಹತ್ಯೆ! ಬೆಚ್ಚಿಬೀಳಿಸುತ್ತೆ ಆ ರಾತ್ರಿಯ ಕೃತ್ಯ