ಶ್ರೀನಿವಾಸಪುರ: ‘Miss u Friends, I am going to RIP, nandu banner haki’ ಎಂದು ಸ್ನೇಹಿತರ ವಾಟ್ಸ್ಆ್ಯಪ್ ಗ್ರೂಪ್ಗೆ ಮೆಸೇಜ್ ಕಳಿಸಿ ಕೆರೆಗೆ ಹಾರಿ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಅಸಲಿ ಕಾರಣ ಬಯಲಾಗಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ಕೊಳ್ಳೂರು ಕಾಲನಿಯ 17 ವರ್ಷದ ಕಿಶೋರ್ ಗಂಗೋತ್ರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ. ಮಂಗಳವಾರ ಬೆಳಗ್ಗೆ ಕಾಲೇಜಿಗೆಂದು ಹೋದವನು ಸಂಜೆ ವಾಪಸ್ ಮನೆಗೆ ಬಂದಿರಲಿಲ್ಲ. ಅಂದು ಸಂಜೆ ಸ್ನೇಹಿತರಿಗೆ “ನಾನು ಸಾಯುತ್ತಿದ್ದೇನೆ, ಮಿಸ್ ಯೂ ಫ್ರೆಂಡ್ಸ್… ಬ್ಯಾನರ್ ಹಾಕಿ ನನಗೆ ಶ್ರದ್ಧಾಂಜಲಿ ಸಲ್ಲಿಸಿ’ ಎಂದು ಸಂದೇಶ ಕಳುಹಿಸಿದ್ದ. ಜತೆಗೆ ಶ್ರೀನಿವಾಸಪುರ ಪಟ್ಟಣದ ಅಮಾನಿ ಕೆರೆಯ ಫೋಟೋವನ್ನೂ ಕಳುಹಿಸಿದ್ದ. ಗೆಳೆಯರು, ‘ಯಾಕೋ ಹೀಗೆಲ್ಲ ಹೇಳ್ತಿಯಾ? ಕಾಲೇಜಿಗೆ ಬಾರೋ’ ಎಂದು ರಿಪ್ಲೇ ಮಾಡಿದ್ದು, ಆನಂತರ ಕಿಶೋರ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರಾದರೂ ಪ್ರಯೋಜನ ಆಗಲೇ ಇಲ್ಲ. ಆ ಕೂಡಲೇ ಸ್ನೇಹಿತರು ಕಿಶೋರ್ ಪಾಲಕರಿಗೂ ಮಾಹಿತಿ ನೀಡಿದ್ದರು.
ಎಲ್ಲರೂ ಸ್ಥಳಕ್ಕೆ ಬರುವಷ್ಟರಲ್ಲಿ ಕಿಶೋರ್ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದ. ಕೆರೆ ಬಳಿಯೇ ಚಪ್ಪಲಿ ಮತ್ತು ಬಟ್ಟೆ ಸಿಕ್ಕಿತ್ತು. ಅಂದು ರಾತ್ರಿ ಕತ್ತಲಾದ ಕಾರಣ ಬುಧವಾರ ಬೆಳಗ್ಗೆ ಕಿಶೋರ್ ಕುಮಾರ್ ಶವವನ್ನ ಕೆರೆಯಿಂದ ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ. ಇನ್ನು ಈ ಕಿಶೋರ್ ಸಾಯುವ ನಿರ್ಧಾರ ಮಾಡಿದ್ದು ಏಕೆ ಗೊತ್ತಾ?
ಕಿಶೋರ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಗೆ ಐ ಲವ್ ಯೂ ಎಂದು ಮೆಸೇಜ್ ಮಾಡಿದ್ದು, ವಿದ್ಯಾರ್ಥಿನಿ ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದಳು. ಪ್ರಾಂಶುಪಾಲರು ಕಿಶೋರ್ನನ್ನು ಕರೆಸಿ ಬುದ್ಧಿ ಹೇಳಿದ್ದರು. ನೊಂದ ಕಿಶೋರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ನೇಹಿತರ ವಲಯದಲ್ಲಿ ಚರ್ಚೆಯಾಗುತ್ತಿದೆ.
ಪೊಲೀಸರಿಗೆ ದೂರು: ನನ್ನ ಮಗನಿಗೆ ಆಗಾಗ ಹೊಟ್ಟೆ ನೋವು ಬರುತ್ತಿತ್ತು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕಿಶೋರ್ ತಂದೆ ವೆಂಕಟೇಶಪ್ಪ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಡಿವ ನೀರಿನ ಪೈಪ್ನಲ್ಲಿ ಮಾಂಸದ ಮುದ್ದೆ, ಮೂಳೆ ಪತ್ತೆ! ಬಗೆದಷ್ಟೂ ಜಟಿಲವಾಗ್ತಿದೆ ಯುವತಿ ಕಾಲಿನ ರಹಸ್ಯ…
ಅಣ್ಣನಿಂದಲೇ ಕೊಲೆಯಾದ ನವವಿವಾಹಿತೆ! ಮೊದಲೇ ನೊಂದಿದ್ದ ಆ ಜೀವಕ್ಕೆ ಬದುಕಲು ಬಿಡಲೇ ಇಲ್ಲ…
ಆ ಒಂದು ಮಾತಿಗೆ ಆಕೆಯ ಉಸಿರನ್ನೇ ನಿಲ್ಲಿಸಿ ತಾನೂ ಸತ್ತ… ಛೇ ಇದೆಂಥಾ ಪ್ರೀತಿ?