More

    ಕುಡಿವ ನೀರಿನ ಪೈಪ್​ನಲ್ಲಿ ಮಾಂಸದ ಮುದ್ದೆ, ಮೂಳೆ ಪತ್ತೆ! ಬಗೆದಷ್ಟೂ ಜಟಿಲವಾಗ್ತಿದೆ ಯುವತಿ ಕಾಲಿನ ರಹಸ್ಯ…

    ರಾಮನಗರ: ಚನ್ನಪಟ್ಟಣದಲ್ಲಿ ಕುಡಿವ ನೀರಿನ ಓವರ್​ಹೆಡ್ ಟ್ಯಾಂಕ್​ನ ಕೊಳವೆಯಲ್ಲಿ ಸತ್ತ ಯುವತಿಯ ಕೊಳೆತ ಕಾಲು ಪತ್ತೆಯಾದ ಪ್ರಕರಣದ ಜಾಡು ಹಿಡಿದು ಹೊರಟವರಿಗೆ ಮೂಳೆ ಹಾಗೂ ಮಾಂಸದ ಮುದ್ದೆ ಸಿಕ್ಕಿದ್ದು, ಬೆಗೆದಷ್ಟು ಜಟಿಲವಾಗುತ್ತಲೇ ಇದೆ ಈ ಕೇಸ್​.

    ಅ.9ರಂದು ಚನ್ನಪಟ್ಟಣದ ನ್ಯಾಯಾಲಯಗಳ ಸಂಕೀರ್ಣದ ಸಮೀಪವೇ ಇರುವ ಟ್ಯಾಂಕ್​ನ ನೀರಿನ ಪೈಪ್​ನ​ಲ್ಲಿ ಕೊಳೆತ ಸ್ಥಿತಿಯಲ್ಲಿ ತೊಡೆಭಾಗದಿಂದ ಪಾದದವರೆಗೂ ಕಾಲು ಪತ್ತೆಯಾಗಿತ್ತು. ಈ ಪ್ರಕರಣ ಚನ್ನಪಟ್ಟಣದ ಜನತೆಯಲ್ಲಿ ಆತಂಕ ಉಂಟು ಮಾಡಿದ್ದು ಮಾತ್ರವಲ್ಲದೆ, ಪೊಲೀಸ್ ಇಲಾಖೆಗೆ ಸವಾಲನ್ನೇ ತಂದೊಡ್ಡಿದೆ. ಮೃತದೇಹದ ಉಳಿದ ಭಾಗಕ್ಕಾಗಿ ಹುಡುಕಾಟ ಮುಂದುವರಿದಿದ್ದು, 15 ದಿನಗಳ ಬಳಿಕ ಅಂದರೆ ಇಂದು(ಅ.27) ಕೂಗಳತೆ ದೂರದಲ್ಲಿರುವ ಮಂಗಳವಾರಪೇಟೆಯ 10ನೇ ಕ್ರಾಸ್​ನ ಪೈಪ್​ನಲ್ಲಿ ಮಾಂಸದ ಮುದ್ದೆ ಹಾಗೂ ಮೂಳೆಗಳು ಪತ್ತೆಯಾಗಿದ್ದು, ಸ್ಥಳೀಯರನ್ನ ಬೆಚ್ಚಿಬೀಳಿಸಿದೆ. ಸ್ಥಳಕ್ಕೆ ಪೊಲೀಸ್ ಇಲಾಖೆ ಹಾಗೂ ನಗರಸಭೆ ಹಾಗೂ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳ ಭೇಟಿ ನೀಡಿದ್ದಾರೆ.

    ಕುಡಿವ ನೀರಿನ ಪೈಪ್​ನಲ್ಲಿ ಮಾಂಸದ ಮುದ್ದೆ, ಮೂಳೆ ಪತ್ತೆ! ಬಗೆದಷ್ಟೂ ಜಟಿಲವಾಗ್ತಿದೆ ಯುವತಿ ಕಾಲಿನ ರಹಸ್ಯ...

    ಸುಮಾರು 23-25 ವರ್ಷ ಪ್ರಾಯದ ಯುವತಿಯದ್ದಾಗಿದೆ. ಅಲ್ಲದೆ ಕಾಲು ದೊರೆತ ಮೂರ್ನಾಲ್ಕು ದಿನಗಳ ಮೊದಲೇ ಯುವತಿಯನ್ನು ಕೊಲೆ ಮಾಡಿ ಆಕೆಯ ಕಾಲು ಕತ್ತರಿಸಿ ಇಲ್ಲಿ ತಂದು ಹಾಕಲಾಗಿದೆ ಎನ್ನಲಾಗಿದೆ. ಅ.9ರಂದು ಟ್ಯಾಂಕ್​ನ ಮೇಲ್ಭಾಗದಲ್ಲಿ ಮಹಿಳೆಯ ಬಟ್ಟೆ, ಚಪ್ಪಲಿ ಹಾಗೂ ಛತ್ರಿಯೊಂದು ಸಿಕ್ಕಿದ್ದು, ಕೆಲದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ವಾಲ್ವ್​ ಓಪನ್ ಮಾಡಿ ನೋಡಿದಾಗ ತೊಡೆಭಾಗದವರೆಗೂ ಒಂದು ಕಾಲು ಮಾತ್ರ ಸಿಕ್ಕಿದ್ದು, ಬೆರಳಲ್ಲಿ ಕಾಲುಂಗರ ಕೂಡ ಇದೆ. ಮತ್ತೊಂದು ಕಾಲು, ಸೇರಿ ದೇಹದ ಉಳಿದ ಭಾಗ ಪತ್ತೆಯಾಗಿರಲಿಲ್ಲ. ಇದೀಗ ಮಾಂಸದ ಮುದ್ದೆ ಹಾಘೂ ಮೂಳೆಗಳು ಪತ್ತೆಯಾಗಿದ್ದು, ನಗರವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.

    ಪೊಲೀಸರ ನಿದ್ದೆಗೆಡಿಸಿದೆ ‘ಯುವತಿಯ ಕೊಳೆತ ಕಾಲು’: ನೀರುಗಂಟಿಗಳಿಗೆ ತಪ್ಪದ ಪೀಕಲಾಟ

    ಗೆಳತಿಯರೊಂದಿಗೆ ಮಡಿಕೇರಿ ಪ್ರವಾಸಕ್ಕೆ ಬಂದಿದ್ದ ಯುವತಿ ಸಾವು! ಹೋಂ ಸ್ಟೇನಲ್ಲಿ ಆಗಿದ್ದೇನು?

    ಒಂದೇ ಕುಟುಂಬದ ಐವರು ಆತ್ಮಹತ್ಯೆ: ಮನೆಯ ದೇವರ ಫೋಟೋ ಹಿಂದಿತ್ತು ಮನಕಲಕುವ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts