ಕರೊನಾ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಹಲವರು ಕಳೆದ ಎರಡು ತಿಂಗಳುಗಳಿಂದ ತಮ್ಮದೇ ರೀತಿಯಲ್ಲಿ ಹಾಡುಗಳನ್ನು, ಕಿರುಚಿತ್ರಗಳನ್ನು ಮಾಡುತ್ತಲೇ ಇದ್ದಾರೆ. ಮನೆಯಲ್ಲೇ ಇದ್ದು, ಜನರಿಗೆ ಜಾಗೃತಿ ಮೂಡಿಸುವುದರ ಜತೆಗೆ, ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: ಜೆನಿಲಿಯಾ ಡಿಸೋಜಾ ಬಗ್ಗೆ ಈ ಸುದ್ದಿ ಕೇಳಿದಿರಾ?
ಕನ್ನಡ ಚಿತ್ರರಂಗದ ಜನಪ್ರಿಯ ಸಿನಿಮಾ ಪ್ರಚಾರ ಸಂಸ್ಥೆಯಾದ ಶ್ರೀ ರಾಘವೇಂದ್ರ ಚಿತ್ರವಾಣಿಯ ಸುಧೀಂದ್ರ ವೆಂಕಟೇಶ್ ಅವರ ಮಗ ಪವನ್ ಸಹ, ತಮ್ಮದೇ ತಂಡ ಕಟ್ಟಿಕೊಂಡು ‘ಕರೊನಾ – ಕರಾಳ ರೋಗ ನಾಶ’ ಎಂಬ ನಾಲ್ಕು ನಿಮಿಷದ ಕಿರುಚಿತ್ರವನ್ನು ಮಾಡಿ, ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
‘ಕರೊನಾ – ಕರಾಳ ರೋಗ ನಾಶ’ ಕಿರುಚಿತ್ರವು ಕೋವಿಡ್-19ರ ವಿವಿಧ ಮಜಲುಗಳನ್ನು ಸೆರೆಹಿಡಿಯಲಾಗಿದೆ. ಈ ಕಿರುಚಿತ್ರವನ್ನು ಒಂದೇ ಕೋಣೆಯಲ್ಲಿ ಚಿತ್ರೀಕರಣ ಮಾಡಿರುವುದು ವಿಶೇಷ. ಕೊರೋನಾ ತಡೆಯುವುದು ಹೇಗೆ ಎನ್ನುವ ವಿವರ ಇದರಲ್ಲಿದ್ದು, ತಾತ ಮತ್ತು ಮೊಮ್ಮೊಗನ ಪಾತ್ರಗಳ ಮೂಲಕ ಅದು ಅನಾವರಣಗೊಂಡಿದೆ. ತಾತ ಮತ್ತು ಮೊಮ್ಮಗನ ನಡುವಿನ ಸಂಭಾಷಣೆ ಈ ಕಿರುಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಿರುಚಿತ್ರವನ್ನು ನೋಡಿದರೆ ಕೊರೋನಾ ಹರಡಲು ಕಾರಣ ಮತ್ತು ಅದನ್ನು ನಿಯಂತ್ರಿಸುವ ವಿಧಾನ ಎರಡೂ ಸ್ಪಷ್ಟವಾಗಿ ಅರ್ಥವಾಗುತ್ತದೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಯಾಕೆ ಬೇಸರ?
ಪವನ್ ಈ ಕಿರುಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ. ತಾತನ ಪಾತ್ರದಲ್ಲಿ ಜಯಸಿಂಹ ಕಾಣಿಸಿಕೊಂಡರೆ, ಮೊಮ್ಮಗನ ಪಾತ್ರದಲ್ಲಿ ಸುಧೀಂದ್ರ (ಖ್ಯಾತ ಪಚಾರಕರ್ತ ಡಿ.ವಿ. ಸುಧೀಂದ್ರ ಅವರ ಮೊಮ್ಮಗ) ನಟಿಸಿದ್ದಾನೆ. ಇನ್ನು ಮನೋಜ್ ಈ ಕಿರುಚಿತ್ರಕ್ಕೆ ಸಂಗೀತ ಸಂಯೋಜಿಸಿದರೆ, ಅರುಣ್ ಛಾಯಾಗ್ರಹಣ ಮಾಡಿದ್ದಾರೆ.
ದರ್ಶನ್ ಅಭಿಮಾನಿಗಳಿಗೆ ಸಿಗ್ತು ಹೊಸ ಗಿಫ್ಟ್!