More

    ರಂಗೋಲಿ ಪುಡಿ ಸಂಗ್ರಹಿಸಲು ತೆರಳಿದ್ದ ವೇಳೆ ಮಣ್ಣು ಕುಸಿತ: ಸ್ಥಳದಲ್ಲೇ ಮಹಿಳೆಯರಿಬ್ಬರ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ

    ಹೊಸೂರು: ಇಟ್ಟಿಗೆ ಭಟ್ಟಿಯಲ್ಲಿ ರಂಗೋಲಿ ಪುಡಿ ಸಂಗ್ರಹಿಸಲು ತೆರಳಿದ್ದ ವೇಳೆ ಮಣ್ಣು ಕುಸಿದು ಮಹಿಳೆಯರು ಮೃತಪಟ್ಟ ಘಟನೆ ಕೃಷ್ಣಗಿರಿ ಜಿಲ್ಲೆ ಥಳಿ ಸಮೀಪದ ಸಮನತ್ತಂ ಗ್ರಾಮದಲ್ಲಿ ಸಂಭವಿಸಿದೆ.
    ಸಮನತ್ತಂನ ರಾಧಾ ಮತ್ತು ಲಕ್ಷ್ಮಮ ಮೃತ ದುರ್ದೈವಿಗಳು. ಉಮಾ ಮತ್ತು ವಿಮಲಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದದಾರೆ.

    ಈ ನಾಲ್ವರು ಮಹಿಳೆಯರು ರಂಗೋಲಿ ಪುಡಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಗ್ರಾಮದ ಸಮೀಪ ಇಟ್ಟಿಗೆ ತಯಾರಿಸಲು ಮಣ್ಣು ಕೊರೆದು ಹಳ್ಳ ಮಾಡಲಾಗಿತ್ತು. ಆ ಮಣ್ಣು ಬಿಳಿ ಬಣ್ಣಕ್ಕೆ ತಿರುಗಿದ ಬಳಿಕ ಅದನ್ನು ಸಂಗ್ರಹಿಸಿ, ರಂಗೋಲಿ ಪುಡಿ ಮಾಡಿ ಮಾರಾಟ ಮಾಡುತ್ತಿದ್ದರು.

    ಎಂದಿನಂತೆ ಜ.18ರಂದು ನಾಲ್ವರು ಮಹಿಳೆಯರೂ ಮಣ್ಣನ್ನು ಸಂಗ್ರಹಿಸಲು ಹೋಗಿದ್ದರು. ಆಕಸ್ಮಿಕವಾಗಿ ಮಣ್ಣು ಕುಸಿದಾಗ ಅದರಡಿ ಸಿಲುಕಿಕೊಂಡರು. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ರಕ್ಷಣಾ ಕಾರ್ಯ ನಡೆಸಿದ್ದರಾದರೂ ಅಷ್ಟರಲ್ಲಿ ರಾಧಾ ಮತ್ತು ಲಕ್ಷ್ಮಮ್ಮ ಕೊನೆಯುಸಿರೆಳೆದಿದ್ದರು. ಉಮಾ ಮತ್ತು ವಿಮಲಮ್ಮ ಸ್ಥಿತಿ ಗಂಭೀರವಾಗಿದ್ದು. ಡೆಂಕಣಿಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಥಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದೂರು ನೀಡಲು ಬಂದಾಕೆಯನ್ನೇ ಮಂಚಕ್ಕೆ ಕರೆದ ಪೊಲೀಸ್​ ಇನ್​ಸ್ಪೆಕ್ಟರ್​! ಸಂತ್ರಸ್ತೆ ಬಿಚ್ಚಿಟ್ಟ ನೋವು ಇಲ್ಲಿದೆ

    ಅಂತ್ಯಸಂಸ್ಕಾರಕ್ಕೆ ಚಿತೆ ತಯಾರಿ ನಡೆಯುತ್ತಿತ್ತು… ಅಷ್ಟರಲ್ಲಿ ಆತ ಕಣ್ಣುಬಿಟ್ಟು ಉಸಿರಾಡಿದ!

    ಅಯ್ಯೋ ವಿಧಿಯೇ ನೀನೆಷ್ಟು ಕ್ರೂರಿ? ನನ್ನ ಹೊಟ್ಟೆಯಲ್ಲಿದ್ದ 7 ತಿಂಗಳ ಮಗುವನ್ನೂ ಕಿತ್ತುಕೊಂಡೆ.. ಈಗ ಗಂಡನ ಪ್ರಾಣವನ್ನೂ ತೆಗೆದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts