More

    ಬೆಂಗಳೂರಿಗೆ ಆಗಮಿಸಿದ ಪುನೀತ್​ ಪುತ್ರಿ ಧೃತಿ: ನೋವಿನ ಭಾರ ಹೊತ್ತುಕಂಡೇ ಹೆಜ್ಜೆ ಹಾಕಿದ ಮಗಳು…

    ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಸಂಜೆ 4.15ಕ್ಕೆ ಬಂದಿಳಿದ ಪುನೀತ್​ ರಾಜ್​ಕುಮಾರ್​ ಅವರ ಪುತ್ರಿ ಧೃತಿ ಅವರನ್ನ ಪೊಲೀಸ್​ ಭದ್ರತೆಯಲ್ಲಿ ಕಂಠೀರವ ಸ್ಟೇಡಿಯಂಗೆ ಕರೆತರಲಾಗಿದೆ. ನೋವಿನ ಭಾರ ಹೊತ್ತುಕೊಂಡೇ ಅಪ್ಪನ ಪಾರ್ಥೀವ ಶರೀರದತ್ತ ಹೆಜ್ಜೆ ಹಾಕಿದ ಧೃತಿಯ ದುಃಖದ ಕಟ್ಟೆ ಹೊಡೆದಿತ್ತು.

    ವಿದ್ಯಾಭ್ಯಾಸಕ್ಕೆ ತೆರಳಿದ್ದ ಧೃತಿ ನ್ಯೂಯಾರ್ಕ್​ನಲ್ಲಿದ್ದರು. ಅಪ್ಪ ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಅಲ್ಲಿಂದ ಭಾರತಕ್ಕೆ ಹೊರಟ ಧೃತಿ, ಏರ್ ಇಂಡಿಯಾ 102 ವಿಮಾನದಲ್ಲಿ ದೃತಿ ದೆಹಲಿಗೆ ಶನಿವಾರ ಬಂದಿಳಿದಿದ್ದರು. ಅಲ್ಲಿಂದ ಮಧ್ಯಾಹ್ನ 1.30ಕ್ಕೆ ಏರ್ ಇಂಡಿಯಾ ವಿಮಾನ ಹತ್ತಿದ್ದ ಧೃತಿ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 4.15ಕ್ಕೆ‌ ಬಂದಿಳಿದರು. ಬಳಿಕ ವಿಮಾನ ನಿಲ್ದಾಣದಿಂದ ನೇರವಾಗಿ ಕಂಠೀರವ ಸ್ಟುಡಿಯೋ ಕಡೆಗೆ ಆಗಮಿಸಿದರು.

    ಬೆಂಗಳೂರಿಗೆ ಆಗಮಿಸಿದ ಪುನೀತ್​ ಪುತ್ರಿ ಧೃತಿ: ನೋವಿನ ಭಾರ ಹೊತ್ತುಕಂಡೇ ಹೆಜ್ಜೆ ಹಾಕಿದ ಮಗಳು...

    ಅಪ್ಪಾ… ಅಪ್ಪಾ… ಎಂದು ಧೃತಿ ಅಳುತ್ತಿದ್ದ ದೃಶ್ಯ ಎಂಥವರ ಕರುಳನ್ನೂ ಹಿಂಡುವಂತಿತ್ತು. ಅಪ್ಪನ ತಲೆ ಸವರಿ ಕಣ್ಣೀರಿಟ್ಟ ಧೃತಿಯನ್ನ ದೊಡ್ಡಪ್ಪ ಶಿವರಾಜ್​ಕುಮಾರ್​ ಅಪ್ಪಿಕೊಂಡು ಸಂತೈಸಿದರು. ಅಮ್ಮಾ… ಅಪ್ಪಾ ನಮ್ಮನ್ನೆಲ್ಲ ಬಿಟ್ಹೋದ್ರು… ಎನ್ನುತ್ತಲೇ ತಾಯಿ ಅಶ್ವಿನಿಯನ್ನ ಬಿಗಿದಪ್ಪಿ ಕಣ್ಣೀರಿಟ್ಟರು.

    ಹೆಸರು ಬದಲಾಯಿಸಿದ್ರೂ ವಿಧಿಯಾಟ ಬೇರೆಯೇ ಇತ್ತು, ಪುನೀತ್ ಅಲ್ಪಾವಧಿಗೆ ಹೋಗ್ಬಿಟ್ರು..!

    ಸಾವಿಗೂ ಮುನ್ನಾ ಪುನೀತ್ ಕರೆ ಮಾಡಿದ್ದು ಯಾರಿಗೆ? ಅದೆಲ್ಲವೂ ಕೊನೆಯಾಗಿಯೇ ಉಳಿಯಿತಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts