ಮೈಸೂರು: ಪ್ರೀತಿಸಿ ವಂಚನೆಗೊಳಗಾದ ಯುವತಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಎಎಸ್ಐ ಸೇರಿದಂತೆ 8 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸ್ ಠಾಣೆ ಎಎಸ್ಐ ಎಂ. ಶಿವರಾಜು 8ನೇ ಆರೋಪಿ. ನಂಜನಗೂಡು ತಾಲೂಕು ಚನ್ನಪಟ್ಟಣ ಗ್ರಾಮದ ಶೋಭಾ ಮೃತ ದುರ್ದೈವಿ. ಶೋಭಾ ಸ್ವಗ್ರಾಮದ ಲೋಕೇಶ್ ಎಂಬಾತನನ್ನು ಪ್ರೀತಿಸಿದ್ದಳು. ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಬಲವಂತವಾಗಿ ಶೋಭಾ ಜತೆ ಲೋಕೇಶ್ ಲೈಂಗಿಕ ಸಂಪರ್ಕ ಬೆಳೆಸಿದ್ದ. ಇವರಿಬ್ಬರ ಮಧ್ಯೆ ಸುರೇಶ್ ಎಂಬಾತ ಎಂಟ್ರಿ ಕೊಟ್ಟಿದ್ದ. ಬಳಿಕ ಲೋಕೇಶ್ ಉಲ್ಟಾ ಹೊಡೆದಿದ್ದು, ಮದುವೆ ಆಗಲು ನಿರಾಕರಿಸಿದ್ದ.
ತನಗಾದ ವಂಚನೆ ಬಗ್ಗೆ ಶೋಭಾ ದೂರು ನೀಡಲು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ತೆರಳಿದ್ದಳು. ಈ ವೇಳೆ ಶೋಭಾಳ ದೂರಿಗೆ ಸ್ಪಂದಿಸದ ಎಎಸ್ಐ ಶಿವರಾಜು, ಡೀಲ್ ಮಾಡಿ ಕೇಸ್ ಮುಗಿಸಲು ಯತ್ನಿಸಿದ್ದರು. ಇದಾದ ಬಳಿಕ ಲೋಕೇಶ್ ಸೇರಿದಂತೆ ಆತನ ಕಡೆಯವರಾದ ಸುರೇಶ, ಗುರುಮಲ್ಲು, ಲೋಕೇಶ್, ಜಡೆ ಮಲ್ಲಯ್ಯ, ಮಲ್ಲಿಕಾರ್ಜುನಯ್ಯ, ಗೌರಮ್ಮ, ರಾಜಮ್ಮ ಎಂಬುವರು ಶೋಭಾಳ ಮನೆಗೆ ಬಂದು ಗಲಾಟೆ ಮಾಡಿ ಧಮ್ಕಿ ಹಾಕಿದ್ದರು. ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಅವಾಜ್ ಹಾಕಿದ್ದರು.
ಇಷ್ಟೆಲ್ಲ ಬೆಳವಣಿಗೆ ಬಳಿಕ ಮರ್ಯಾದೆಗೆ ಅಂಜಿದ ಶೋಭಾ ಮನನೊಂದು ಮನೆಯಲ್ಲೇ ನೇಣಿಗೆ ಶರಣಾಗಿದ್ದಳು. ಮೃತಳ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ಕೊಡದೆ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದರು. ಇದಾದ 11 ದಿನಕ್ಕೆ ಮನೆಯನ್ನ ಸ್ವಚ್ಛ ಮಾಡುವಾಗ ಶೋಭಾ ಬರೆದಿಟ್ಟಿದ್ದ ಡೆತ್ ನೋಟ್ ಪತ್ತೆಯಾಗಿದೆ. ಆ ಡೆತ್ನೋಟ್ನಲ್ಲಿ ಶೋಭಾ ತನಗಾದ ಅನ್ಯಾಯದ ಬಗ್ಗೆ ಎಳೆಎಳೆಯಾಗಿ ಬರೆದಿದ್ದು, ಪ್ರೀತಿ-ಮದುವೆ ನೆಪದಲ್ಲಿ ಲೋಕೇಶ್ ತನ್ನನ್ನು ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ. ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದರೂ ಎಎಸ್ಐ ಶಿವರಾಜು ನಿರ್ಲಕ್ಷ್ಯ ಮಾಡಿದ್ರು. ನನಗೆ ಅನ್ಯಾಯ ಮಾಡಿದ 8 ಮಂದಿ ವಿರುದ್ಧಕ್ರಮ ಕೈಗೊಳ್ಳಬೇಕು. ಲೋಕೇಸ್ಗೆ ಜೈಲು ಶಿಕ್ಷೆ ಆಗಬೇಕು, ನೇಣಿಗೆ ಏರಿಸಬೇಕೆಂದು ಉಲ್ಲೇಖಿಸಿದ್ದಾಳೆ. ಈ ಡೆತ್ನೋಟ್ ಸಿಕ್ಕ ಕೂಡಲೇ ಯುವತಿಯ ತಾತ ಚಿಕ್ಕಚನ್ನಯ್ಯ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಸೇರಿ 8 ಮಂದಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಠಾಣೆಗೆ ಭೇಟಿ ನೀಡಿದ್ದ ಎಸ್ಪಿ ಚೇತನ್, ಮಾಹಿತಿ ಪಡೆದು ವರದಿ ನೀಡುವಂತೆ ಸೂಚನೆ ನೀಡಿದ್ದರು. ಅ.16 ರಂದು ವೃತ್ತ ನಿರೀಕ್ಷಕರು ನೀಡಿದ ವರದಿ ಆಧಾರದ ಮೇಲೆ ಎಎಸ್ಐ ಶಿವರಾಜ್ ಸಹ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ.
ಗುತ್ತಿಗೆದಾರನಿಗೆ ತಾನೇ ಆಹ್ವಾನಿಸಿ ಮಂಚ ಹಂಚಿಕೊಂಡ ಲೇಡಿ! ಇವಳ ಹಿನ್ನೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ
ಪರಸ್ತ್ರೀ ಜತೆ ಗ್ರಾಪಂ ಅಧ್ಯಕ್ಷೆ ಗಂಡನ ಕಾಮದಾಟ! ವಾಟ್ಸ್ಆ್ಯಪ್ ಗ್ರೂಪ್ಗೆ ತನ್ನದೇ ಫೋಟೋ ತಾನೇ ಹಾಕಿಕೊಂಡ…
ಬೇಯಿಸಿದ ಮೊಟ್ಟೆ ತಿಂದು ಪ್ರಾಣಬಿಟ್ಟ ಮಹಿಳೆ! ಮೊಟ್ಟೆ ಪ್ರಿಯರನ್ನ ಬೆಚ್ಚಿಬೀಳಿಸುತ್ತೆ ಈ ಘಟನೆ