ತುಮಕೂರು: ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಜಿಲ್ಲಾ ಘಟಕದ ಜಗಳ ಬೀದಿಗೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಮಾಜಿ ಶಾಸಕ ಬಿ.ಸುರೇಶ್ಗೌಡ ನಡುವಿನ ಜಗಳ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಂಗಳ ತಲುಪಿದೆ.
ಮೂಲ ಬಿಜೆಪಿ ಕಾರ್ಯಕರ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿ ನೋವು ತಂದಿದೆ, ವಿರೋಧ ಪಕ್ಷಗಳ ಶಾಸಕರನ್ನು ಓಲೈಸಿಕೊಂಡು ಕ್ಷೇತ್ರದಲ್ಲಿ ಓಡಾಡಿದರೆ ಪಕ್ಷ ಸಂಟನೆ ಹೇಗೆ ಸಾಧ್ಯ ಎಂದು ಮಾಜಿ ಶಾಸಕ ಬಿ.ಸುರೇಶ್ಗೌಡ ಬಹಿರಂಗವಾಗಿಯೇ ಹರಿಹಾಯ್ದಿದ್ದಾರೆ.
ಗ್ರಾಮಾಂತರ ಕ್ಷೇತ್ರದ ಕೆರೆ ತುಂಬಿಸಲು ಅಂದಿನ ಬೃಹತ್ ನೀರಾವರಿ ಮಂತ್ರಿ, ಇಂದು ಸಿಎಂ ಆಗಿರುವ ಬಸವರಾಜ ಬೊಮ್ಮಾಯಿ ಅವರೇ ಅನುಮೋದನೆ ನೀಡಿದ ಯೋಜನೆ ಅವೈಜ್ಞಾನಿಕ ಎಂದಿರುವ ಮಾಧುಸ್ವಾಮಿ ಹೇಳಿಕೆ ನಮಗೆ ಅಚ್ಚರಿ ಮೂಡಿಸಿದೆ. ಬೊಮ್ಮಾಯಿ ಕಾಲದ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬಂತೆ ಆರೋಪಿಸಿದ್ದಾರೆ ಎಂದು ಸುರೇಶ್ಗೌಡ ಕೋಪ ಹೊರಹಾಕಿದ್ದಾರೆ
ಏನಿದು ವಿವಾದ?: ಆರಂಭದಿಂದಲೂ ಜೆ.ಸಿ.ಮಾಧುಸ್ವಾಮಿ ಹಾಗೂ ಬಿ.ಸುರೇಶ್ಗೌಡರದ್ದು ಎಣ್ಣೆ, ಸೀಗೇಕಾಯಿ ಸಂಬಂಧ. ಪಕ್ಷ ಸಂಘಟನೆಯಲ್ಲಿ ಜೆಸಿಎಂ ವಿರೋಧಿ ಬಣದವರನ್ನು ಚಿಕ್ಕನಾಯಕನಹಳ್ಳಿ ಮಂಡಲಕ್ಕೆ ನೇಮಿಸಿದಾಗಿನಿಂದಲೂ ಬೂದಿ ಮುಚ್ಚಿದ ಕೆಂಡದಂತಿದ್ದ ಮುಸುಕಿನ ಗುದ್ದಾಟ ಈಗ ಸ್ಫೋಟವಾಗಿದೆ. ಸಚಿವ ಜೆ.ಸಿ.ಮಾಧುಸ್ವಾಮಿ ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆಗಳು ಅವೈಜ್ಞಾನಿಕವಾಗಿದ್ದು, ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಇರುವ ಪೈಪ್ಲೈನ್ ಸಾಮರ್ಥ್ಯ ಸಾಕಾಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದು ಹಾಗೂ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಮಾಧುಸ್ವಾಮಿ ಅವರನ್ನು ಹೊಗಳುವುದು ಸುರೇಶ್ಗೌಡರ ಸಿಟ್ಟು ಹೆಚ್ಚಿಸಿದೆ.
ಬಿಎಸ್ವೈ ಸಿಎಂ, ಬೊಮ್ಮಾಯಿ ನೀರಾವರಿ ಮಂತ್ರಿಯಾಗಿದ್ದಾಗ ನಮ್ಮ ಒತ್ತಾಯದ ಮೇರೆಗೆ ತುಮಕೂರು ಗ್ರಾಮಾಂತರದಲ್ಲಿ ನೀರಾವರಿ ಯೋಜನೆಗೆ ಮಂಜೂರಾತಿ ನೀಡಲಾಗಿತ್ತು. ಆದರೆ ಯೋಜನೆ ಅವೈಜ್ಞಾನಿಕ ಎಂದು ಹೇಳಿಕೆ ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ವರಸೆ ಬದಲಿಸಿದ್ದು, ಮಾಧುಸ್ವಾಮಿ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ದೂರು ನೀಡುವೆ.
| ಬಿ.ಸುರೇಶ್ಗೌಡ ಮಾಜಿ ಶಾಸಕ
ಸಖತ್ ವೈರಲ್ ಆಗ್ತಿರೋ ಮದ್ವೆ ಫೋಟೋ ಹಿನ್ನೆಲೆ ಗೊತ್ತಾ? ಯುವತಿ ಹೇಳಿಕೆ ಕೇಳಿದ್ರೆ ಅಚ್ಚರಿಯಾಗೋದು ಖಂಡಿತ!
ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್ಆರ್ಟಿಸಿ ಬಸ್ ಅನ್ನೇ ಕದ್ದ ಕಳ್ಳರು!
ಲವ್-ಸೆಕ್ಸ್ ದೋಖಾ: ಎಎಸ್ಐ ಸೇರಿ 8 ಮಂದಿ ವಿರುದ್ಧ ಎಫ್ಐಆರ್! ಯುವತಿ ಸತ್ತ 11 ದಿನಕ್ಕೆ ಸಿಕ್ತು ಡೆತ್ನೋಟ್
ಶಾಸಕ ಶ್ರೀನಿವಾಸ್ಗೆ ಎಚ್ಡಿಕೆ ಮಾಸ್ಟರ್ ಸ್ಟ್ರೋಕ್! 25ಕ್ಕೆ ಗುಬ್ಬಿಯಲ್ಲೇ ಸಮಾವೇಶ, ಪರ್ಯಾಯ ನಾಯಕತ್ವ ಸೃಷ್ಟಿ