ಬೆಂಗಳೂರು: ಲಾಲ್ಬಾಗ್ ಸಸ್ಯೋದ್ಯಾನದಲ್ಲಿ ಈ ಬಾರಿ ‘ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ’ ನಡೆಯಲಿದ್ದು, ಸ್ಯಾಂಡಲ್ವುಡ್ನ ಪವರ್ ಸ್ಟಾರ್, ಕರುನಾಡಿನ ಪ್ರೀತಿಯ ಅಪ್ಪು ಅವರನ್ನ ಕಣ್ತುಂಬಿಕೊಳ್ಳಬಹುದು.
ಹೂವಿನಲ್ಲಿ ಡಾ.ಪುನೀತ್ ರಾಜ್ಕುಮಾರ್ರ ಪ್ರತಿಮೆ ಅರಳಲಿದ್ದು, ಡಾ.ರಾಜಕುಮಾರ್ ಅವರ ಗಾಜನಗೂರಿನ ಮನೆಯನ್ನೂ ವಿವಿಧ ಹೂಗಳಿಂದ ನಿರ್ಮಿಸಲಾಗುತ್ತದೆ. ಇದು ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷ.
ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘಗಳು ಲಾಲ್ಬಾಗ್ನಲ್ಲಿ ಪ್ರತಿ ವರ್ಷಕ್ಕೆ ಎರಡು ಬಾರಿ ಅಂದರೆ ಜನವರಿಯಲ್ಲಿ ಗಣರಾಜ್ಯೋತ್ಸವ ಮತ್ತು ಆಗಸ್ಟ್ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ‘ಫಲಪುಷ್ಪ ಪ್ರದರ್ಶನ’ವನ್ನು ಆಯೋಜಿಸುತ್ತವೆ. ಆದರೆ, ಕರೊನಾ ಸಾಂಕ್ರಾಮಿಕ ಪಿಡುಗಿನ ಕಾರಣಕ್ಕೆ ಕಾರ್ಯಕ್ರಮ ಕೈಬಿಡಲಾಗಿತ್ತು. ಇದೀಗ ಸಹಜ ಪರಿಸ್ಥಿತಿ ಮರಳಿರುವ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಫಲಪುಷ್ಪ ವೈಭವ ಮರುಕಳಿಸಲಿದೆ. ಫಲಪುಷ್ಪ ಪ್ರದರ್ಶನದಲ್ಲಿ ಪುನೀತ್ರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳ ಕಾತರದಿಂದ ಕಾಯುತ್ತಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ತೋಟಗಾರಿಕೆ ಸಚಿವ ಮುನಿರತ್ನ, ಆ.5 ರಿಂದ 17ರ ವರೆಗೆ ಫಲಪುಷ್ಪ ಪ್ರದರ್ಶನ ಇರಲಿದೆ. ಆ.5ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಡಾ.ಪುನೀತ್ ರಾಜ್ಕುಮಾರ್ ಅವರದ್ದು ಸ್ನೇಹಮಯಿ ವ್ಯಕ್ತಿತ್ವ. ಬಾಲ್ಯ ಕಲಾವಿದನಾಗಿ ಪ್ರತಿಭೆ ಮೆರೆದು, ಬೆಳೆದು ಅಲ್ಪಾವಧಿಯಲ್ಲಿ ಕೀರ್ತಿ ಶಿಖರಕ್ಕೆ ಏರಿದ ಅವರ ಕೊಡುಗೆ ಅವಿಸ್ಮರಣೀಯ. ಕರೊನಾ ಬಳಿಕ ಮೊದಲ ಬಾರಿಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಪುನೀತ್ ಅವರನ್ನು ಸ್ಮರಿಸಲಾಗುವುದು ಎಂದರು.
ಅಭಿಮಾನಿಗಳ ನೆಚ್ಚಿನ ಅಣ್ಣಾವ್ರಿಗೆ ಗಾಜನೂರಿನ ಮನೆ ಬಗ್ಗೆ ಹೆಚ್ಚಿನ ಅಕ್ಕರೆ, ಪ್ರೀತಿಯಿತ್ತು. ಈ ನೆನಪಿನ ಕುರುವು ಆಗಿ ಪುಷ್ಪಗಳಲ್ಲಿ ಗಾಜನೂರಿನ ಮನೆ ಅರಳಲಿದೆ. ಪುನೀತ್ ಮತ್ತು ಗಾಜನೂರಿನ ಮನೆ ಪ್ರದರ್ಶನ ಅಂದಗಾಣಿಸಲು ವಿದೇಶದಿಂದ ಹೂಗಿಡಗಳ ಪಟ್ಟಿ ತರಿಸಿಕೊಂಡು ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳುವ ಗಿಡಗಳನ್ನು ಆಯ್ಕೆ ಮಾಡುತ್ತೇವೆ ಎಂದು ವಿವರಿಸಿದರು.
ಇವರು ನಮ್ಮ ಪಕ್ಷದ ಕಾರ್ಯಕರ್ತ, ಇವರ ಕಾರನ್ನು ಹಿಡಿದು ತೊಂದರೆ ಕೊಡಬಾರದು: ಬಿಜೆಪಿ MLA ಶಿಫಾರಸು
ದಾಂಡೇಲಿಯಲ್ಲಿ ಮಗನಿಂದಲೇ ತಾಯಿ ಮೇಲೆ ಅತ್ಯಾಚಾರ: ಒಂದೇ ದಿನ 2 ಬಾರಿ ಬಲತ್ಕಾರ