ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ನಡುವೆ ಸ್ಟಾರ್ ವಾರ್ ನಡೆಯುವುದು ಸಾಮಾನ್ಯ. ಆದರೆ, ಈ ಸ್ಟಾರ್ ವಾರ್ ತೀರ ಕೆಳಮಟ್ಟಕ್ಕೆ ಇಳಿಯಬಾರದು. ತಮ್ಮ ನೆಚ್ಚಿನ ನಟ ಗ್ರೇಟ್ ಎಂದು ಹೇಳಿಕೊಳ್ಳಲು ಇನ್ನೊಬ್ಬ ನಟನನ್ನು ಹೀಯಾಳಿಸುವುದು ಒಳ್ಳೆಯದಲ್ಲ. ಇದನ್ನು ಸ್ವತಃ ನಟರು ಕೂಡ ಒಪ್ಪುವುದಿಲ್ಲ. ಅದರಲ್ಲೂ ಇಂದು ನಮ್ಮ ನಡುವೆ ಜೀವಂತವಾಗಿ ಇರದ ನಟನ ಹೆಸರನ್ನು ಮುಂದಿಟ್ಟುಕೊಂಡು ಸ್ಟಾರ್ ವಾರ್ ಮಾಡುವುದು ಸರಿಯಲ್ಲ. ಈ ರೀತಿ ಮಾಡಿದರೆ ಅವರಂತಹ ಕೆಟ್ಟ ಮನಸ್ಸಿನ ವ್ಯಕ್ತಿ ಬೇರಾರು ಇಲ್ಲ ಎಂದರ್ಥ. ಇಂಥಾ ಕೆಟ್ಟ ಪ್ರವೃತ್ತಿಗೆ ನಮ್ಮ ಸ್ಯಾಂಡಲ್ವುಡ್ ಸಾಕ್ಷಿಯಾಗುತ್ತಿರುವುದು ದುರ್ದೈವದ ಸಂಗತಿಯೇ ಸರಿ.
ಇದನ್ನೂ ಓದಿ: ವೀಣಾ ಕಾಶಪ್ಪನವರ್ ಮನೆಗೆ ಶಿವಾನಂದ ಪಾಟೀಲ್ ಭೇಟಿ!
ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ಕುಮಾರ್ರನ್ನು ಅವಮಾನಿಸಿದ್ದಲ್ಲದೆ, ಟೀಕೆಗೆ ಗುರಿಯಾಗುತ್ತಿದ್ದಂತೆ ಅದರಿಂದ ತಪ್ಪಿಸಿಕೊಳ್ಳಲು ಅಪ್ಪು ಮತ್ತು ಕಿಚ್ಚನ ಫ್ಯಾನ್ಸ್ ನಡುವೆ ತಂದಿಡುವ ಪ್ರಯತ್ನ ಸಹ ಮಾಡಿರುವುದು ಕೀಳು ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಇಂಥಾ ತಪ್ಪನ್ನು ಯಾರೇ ಮಾಡಿರಲಿ ಅಂಥವರನ್ನು ಹಿಡಿದು ಕಠಿಣ ಶಿಕ್ಷೆ ನೀಡುವ ಮೂಲಕ ಮಂದೆ ಯಾರೂ ಇಂಥಾ ತಪ್ಪನ್ನು ಮಾಡದಂತೆ ಎಚ್ಚರಿಕೆಯ ಸಂದೇಶವನ್ನು ರವಾನಿಸಬೇಕಿದೆ.
ಅಸಲಿಗೆ ನಡೆದಿದ್ದೇನು?
ಪವರ್ಸ್ಟಾರ್ ಡಾ. ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ವಿರುದ್ಧ ಗಜಪಡೆ ಹೆಸರಿನ ಟ್ವಿಟರ್ ಖಾತೆಯೊಂದು “ಶುಭ ಕಾರ್ಯಕ್ಕೆ ಮುತ್ತೈದೆಯರನ್ನು ಕರೆಯಬೇಕು. ಅದನ್ನು ಬಿಟ್ಟು ಗಂಡ ಇಲ್ಲದವರನ್ನು ಕರೆದಿದ್ದಾರೆ. ಆರ್ಸಿಬಿ ಅನ್ ಬಾಕ್ಸ್ ಇವೆಂಟ್’ಗೆ ಇವರನ್ನು ಕರೆಸಿದ್ದಕ್ಕೆ ಈಗ ಎಲ್ಲಾ ಮ್ಯಾಚ್ ಸೋಲುತ್ತಿದ್ದಾರೆ” ಎಂದು ಅವಹೇಳನಕಾರಿ ಪೋಸ್ಟ್ ಮಾಡಿತ್ತು.
ಇದನ್ನೂ ಓದಿ: ಬೆಂಗಳೂರು ಕೇಂದ್ರಕ್ಕೆ ಯಾರು ಸಂಸದರಾಗಬೇಕು? ಜನರು ಏನಂತಾರೆ ಕೇಳಿ!
ಈ ಪೋಸ್ಟ್ಗೆ ಹ್ಯಾಶ್ಟ್ಯಾಗ್ ಯುವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ಯುವ, ಡಿಬಾಸ್, #DevilTheHero ಎಂದು ಸೇರಿಸಿ ಹಂಚಿಕೊಂಡಿದ್ದರು. ಯಾವಾಗ ಈ ಪೋಸ್ಟ್ ವ್ಯಾಪಕ ಟೀಕೆಗೆ, ಆಕ್ರೋಶಕ್ಕೆ ಗುರಿಯಾಯಿತೋ ಆ ಕೂಡಲೇ ಎಕ್ಸ್ ಖಾತೆಯಿಂದ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಅಪ್ಪು ಅಭಿಮಾನಿಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ದೂರು ಕೂಡ ದಾಖಲಿಸಿದ್ದಾರೆ. ಆದರೆ, ಟ್ವೀಟ್ ವೈರಲ್ ಆದ ತಕ್ಷಣವೇ ಖಾತೆಯ ಹೆಸರು ‘ಸುದೀಪ್ ಅಭಿಮಾನಿ’ ಎಂದು ಬದಲಾಗಿರುವುದು ಇಲ್ಲಿ ಗಮನಿಸಬೇಕಾದ ವಿಷಯ.
ಇನ್ನು ಅಪ್ಪು ಹುಡುಗರು ಅಭಿಮಾನಿ ಬಳಗ ಸಹ ಈ ಬಗ್ಗೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದೆ. ಟ್ವೀಟ್ ಮಾಡುವ ಮುನ್ನ ‘ಗಜಪಡೆ’ ಎಂದಿದ್ದ ಹೆಸರು, ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸುದೀಪ್ ಅಭಿಮಾನಿ ಎಂದು ಬದಲಾಯಿಸಿದೆ. ಹೀಗೆ ಮಾಡುವ ಮೂಲಕ ಸುದೀಪ್ ಹಾಗೂ ಅಪ್ಪು ಅಭಿಮಾನಿಗಳ ಮಧ್ಯೆ ತಂದಿಡುವ ಕೆಲಸವನ್ನು ದರ್ಶನ್ ಫ್ಯಾನ್ಸ್ ಎಂದು ಹೇಳಿಕೊಂಡು ಕೆಲವು ಕಿಡಿಗೇಡಿಗಳು ಮಾಡುತ್ತಿರುವುದು ಅಕ್ಷೇಪಾರ್ಹ.
ಇದನ್ನೂ ಓದಿ: ಐಪಿಒ ಷೇರು 76ರಿಂದ 126ಕ್ಕೆ ಏರಿತು: ಮೊದಲ ದಿನವೇ ಹೂಡಿಕೆದಾರರಿಗೆ ಲಾಭದ ಸುರಿಮಳೆ
ಪುನೀತ್ ಫ್ಯಾನ್ಸ್ ಕೊಟ್ಟ ದೂರು ಹೀಗಿದೆ:
ಕಳೆದ ಮಾರ್ಚ್ 19ನೇ ತಾರೀಕಿನಂದು ಬೆಂಗಳೂರಿನ ಅರ್ಸಿಬಿ ತಂಡದ ಜೆರ್ಸಿ ಉದ್ಘಾಟನೆ ಕಾರ್ಯಕ್ರಮಕ್ಕೆ, ಆಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಆಹಾನಿಸಿದ್ದರು. ಅದರಂತೆ ಆಶ್ವಿನಿ ಮೇಡಮ್ ಸಹ ಆ ಕಾರ್ಯಕ್ರಮದಲ್ಲಿ, ಪಾಲ್ಗೊಂಡಿದ್ದರು. ಇದಾದ ನಂತರ ಐಪಿಎಲ್ ಪ್ರಾರಂಭವಾಗಿ ಆರ್ಸಿಬಿ ತಂಡವು ಕೆಲ ಪಂದ್ಯಗಳಲ್ಲಿ, ಸೋತ ಕಾರಣ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣವಾದ ಟ್ವಿಟರ್ನಲ್ಲಿ, ಗಜಪಡೆ ಎಂಬ ನಕಲಿ ಖಾತೆ ಸೃಷ್ಟಿಸಿ ಅಶ್ವಿನಿ ಪ್ರತೀತ್ ರಾಜ್ ಕುಮಾರ್ ಅವರು ಆ ಕಾರ್ಯಕ್ರಮಕ್ಕೆ ಬಂದದ್ದೆ ಆರ್ಸಿಬಿ ಸೋಲಿಗೆ ಕಾರಣ ಎಂದು ಮೇಡಂ ಅವರನ್ನು ಹೊಣೆ ಮಾಡಿ ಅವರನ್ನು ಕೆಟ್ಟದಾಗಿ ನಿಂದಿಸಿ ಪೋಸ್ಟ್ ಮಾಡಿರುತ್ತಾನೆ.
ಇದಾದ ನಂತರ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ, ತೀವ್ರವಾಗಿ ವಿರೋಧ ವ್ಯಕ್ತಪಡಿಸಿದಾಗ ಆ ನಕಲಿ ಖಾತೆಯ ಹೆಸರನ್ನು, “ಸುದೀಪ್ ಅಭಿಮಾನಿ” ಎಂದು ಬದಲಾಯಿಸಿ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳು ಹಾಗೂ ಸುದೀಪ್ ಅವರ ಅಭಿಮಾನಿಗಳ ನಡುವೆ ಭಿನ್ನಭಿಪ್ರಾಯ ಉಂಟಾಗುವಂತೆ ಮಾಡಿ ಸಾಮಾಜಿಕ ಜಾಲತಾಣದಲಿ ಅಶಾಂತಿ ಸೃಷ್ಟಿಸಿರುತ್ತಾನೆ ಹಾಗೂ ಅಪ್ಪು ಮತ್ತು ಸುದೀಪ್ ಅವರಿಗೆ ಅವಮಾನ ಮಾಡಿರುತ್ತಾನೆ. ಈ ಘಟನೆಯಿಂದ ಕರ್ನಾಟಕದ ರಾಜವಂಶದ ಅಭಿಮಾನಿಗಳಿಗೆ ತುಂಬಾ ನೋವು ಉಂಟಾಗಿರುತ್ತದೆ. ಹಾಗಾಗಿ ಅವನನ್ನು ಶೀಘ್ರದಲ್ಲಿ ಬಂಧಿಸಿ, ಶಿಕ್ಷೆ ನೀಡಬೇಕಾಗಿ ಕೋರುತ್ತಿದ್ದೇವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ನಟ ದರ್ಶನ್ ಪ್ರತಿಕ್ರಿಯೆ:
ಅಂದಹಾಗೆ ಈ ಪೋಸ್ಟ್ ಬಗ್ಗೆ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ(ರಿ)ಕೇಂದ್ರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪುನೀತ್ ದರ್ಶನ್ ಗೌಡ್ರು ಪ್ರತಿಕ್ರಿಯೆ ನೀಡಿದ್ದಾರೆ. ಈ ಅವಹೇಳನಕಾರಿ ಪೋಸ್ಟ್ ಬಗ್ಗೆ ದರ್ಶನ್ ಅವರ ಗಮನಕ್ಕೂ ಬಂದಿದೆ. ಅವರು ಕರೆ ಮಾಡಿ ಮಾತನಾಡಿದರು. “ಈ ರೀತಿ ಮಾಡುವುದು ತಪ್ಪು. ಬೇರೆ ಯಾರೋ ಬೇಕಂತಲೇ ಮಾಡಿ, ನಮ್ಮ ಮೇಲೆ ಹೇಳುತ್ತಿದ್ದಾರೆ. ಇದು ಯಾರು ಮಾಡಿದ್ದಾರೋ ಗೊತ್ತಿಲ್ಲ, ಈ ಬಗ್ಗೆ ವಿಚಾರಿಸಿ ಕ್ರಮ ಕೈಗೊಳ್ಳಿ ಎಂದು ದರ್ಶನ್ ತಿಳಿಸಿದ್ದಾರೆ” ಎಂದು ಹೇಳಿದರು.
ವರ್ಷಕ್ಕೆ 4 ಲಕ್ಷ ರೂ. ಸಂಬಳ! ಹುಡುಗ ಹೇಗಿರಬೇಕು, ಈಕೆ ಕೊಟ್ಟ ಡಿಟೇಲ್ಸ್ ನೋಡಿದ್ರೆ ಕುಸಿದು ಬಿಳೋದು ಪಕ್ಕಾ