ವಿಜಯಪುರ: ಶಿಕ್ಷಣದಿಂದಲೇ ಸಮಾಜ ಸಂಸ್ಕಾರಯುತ ಮಾಡಲು ಸಾಧ್ಯ. ಮಕ್ಕಳಿಗೆ ಬಾಲ್ಯದಲ್ಲಿ ನೀಡುವ ಗುಣಮಟ್ಟದ ಶಿಕ್ಷಣ ಅವರ ನಾಳಿನ ಸುಂದರ ಭವಿಷ್ಯವನ್ನು ನಿರ್ಧರಿಸುತ್ತದೆ. ಆ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಆರಂಭಿಕ ಹಂತದಲ್ಲೇ ಸಂಸ್ಕಾರಯುತ ಶಿಕ್ಷಣ ನೀಡಿ ಭವಿಷ್ಯದ ಭಾರತವನ್ನು ಭದ್ರಗೊಳಿಸಬೇಕೆಂದು ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷ ಸುನೀಲ್ ಜೈನಾಪುರ ಹೇಳಿದರು.
ನಗರದ ಆಲಕುಂಟೆ ಬಡಾವಣೆಯ ಪಿನ್ಯಾಕಲ್ ಕರಿಯರ್ ಬಿಲ್ಡರ್ಸ್ನಲ್ಲಿ ಸೋಮವಾರ ನಡೆದ ಬೇಸಿಗೆ ಶಿಬಿರದ ಮುಕ್ತಾಯ, ನೂತನ ಪೂರ್ವ ಪ್ರಾಥಮಿಕ ಶಾಲೆಯ ಉದ್ಘಾಟನೆ ಮತ್ತು ಎಸ್ಎಸ್ಎಲ್ಸಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಕ ಸಾಹಿತಿ ಶಿವಶರಣಪ್ಪ ಶಿರೋರ ಮಾತನಾಡಿ, ಮಕ್ಕಳನ್ನು ಶೈಕ್ಷಣಿಕವಾಗಿ ಅಷ್ಟೇ ಅಲ್ಲದೇ ದೇಶಪ್ರೇಮಿಗಳಾಗಿ ಬೆಳೆಸಬೇಕು. ಸದೃಢ ಭಾರತ ನಿರ್ಮಾಣದ ಸದುದ್ದೇಶದಿಂದ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಅಣಿಗೊಳಿಸಬೇಕು. ನಮ್ಮ ಭಾರತೀಯ ಸಂಸತಿ, ಆಚಾರ&ವಿಚಾರ ತಿಳಿಸುವ ಮೂಲಕ ಮಕ್ಕಳನ್ನು ಅತ್ಯುತ್ತಮ ನಾಗರಿಕರಾಗಿ ರೂಪಿಸಬೇಕೆಂದು ಹೇಳಿದರು.
![](https://cdn.vvimgs.com/wp-content/uploads/2024/06/ABHUDAYA-WEB-01.jpg)
ಡಿಸಿಸಿ ಬ್ಯಾಂಕಿನ ನೌಕರ ರಾಜು ರಾಠೋಡ್, ಆರ್ಎಸ್ಎಸ್ ಪ್ರಮುಖ ಸಿದ್ದು ಕಲರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿವಕುಮಾರ ನೇಕಾರ, ಕಾಂತೇಶ ದಾಶ್ಯಳ, ದೇವಿಂದ್ರ ರಾಠೋಡ, ಮಹೇಶಕುಮಾರ ಪತ್ತಾರ, ವಿಠಲ ಅಲಕುಂಟೆ, ಅಕ್ಷಯ ಹಿರೇಮಠ, ಬಾಪೂರಾಯ ಮೇಡೆಗಾರ ಮತ್ತಿತರರಿದ್ದರು.