ಬೆಂಗಳೂರು: ಕರೊನಾ ಮತ್ತು ಒಮಿಕ್ರಾನ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ವಿಧಿಸಿರುವ ವಾರಾಂತ್ಯ ಕರ್ಫ್ಯೂ ಇಂದು(ಶುಕ್ರವಾರ) ರಾತ್ರಿ 10ರಿಂದ ರಾಜ್ಯವ್ಯಾಪಿ ಜಾರಿಯಾಗಲಿದೆ. ಸೋಮವಾರ ಬೆಳಗ್ಗೆ 5ರ ವರೆಗೆ ತುರ್ತು ಸೇವೆ ಹೊರತುಪಡಿಸಿ ಎಲ್ಲ ವಹಿವಾಟು ಆಗಲಿದೆ. ಆಯಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಕಮಿಷನರ್ಗಳು ಅಧಿಕೃತವಾಗಿ ನಿಷೇಧಾಜ್ಞೆ ಮತ್ತು ಕರ್ಫ್ಯೂ ಆದೇಶ ಹೊರಡಿಸಿದ್ದು, ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವಂತೆ ಕಟ್ಟಾಜ್ಞೆ ವಿಧಿಸಿದ್ದಾರೆ. ವೀಕೆಂಡ್ ಕರ್ಫ್ಯೂನಲ್ಲಿ ಏನಿರುತ್ತೆ? ಏನಿರಲ್ಲ? ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ.
ಏನಿರಲ್ಲ?
ಉದ್ಯಾನವನ, ಸಿನಿಮಾ, ವಾಣಿಜ್ಯ ಮಳಿಗೆ ಓಪನ್ ಇರಲ್ಲ. ಇಂದು(ಶುಕ್ರವಾರ) ರಾತ್ರಿ 8 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆವರೆಗೆ ಮದ್ಯದಂಗಡಿಗಳನ್ನು ಬಂದ್ ಮಾಡಿ ಅಬಕಾರಿ ಇಲಾಖೆ ಆದೇಶ. ಸಭೆ-ಸಮಾರಂಭಗಳಿಗೆ ಕಂಪ್ಲೀಟ್ ಬ್ರೇಕ್.
ಏನಿರುತ್ತೆ?
-ಔಷಧ, ಆಹಾರ, ದಿನಸಿ, ಹಣ್ಣು ತರಕಾರಿ, ಮೀನು, ಮಾಂಸ, ಹಾಲಿನ ಕೇಂದ್ರ, ಪಶು ಆಹಾರ ಕೇಂದ್ರ, ಬೀದಿಬದಿ ವ್ಯಾಪಾರ, ನ್ಯಾಯದ ಬೆಲೆ ಅಂಗಡಿ ಹಾಗೂ ಹೋಟೆಲ್, ರೆಸ್ಟೋರೆಂಟ್, ದರ್ಶಿನಿಗಳಲ್ಲಿ ಪಾರ್ಸೆಲ್, ಹೋಂ ಡೆಲವರಿ ಸೇವೆ ಲಭ್ಯ.
–ಕ್ಯಾಬ್, ಆಟೋ ಸೇವೆಗಳು ತುರ್ತು ಅಗತ್ಯಕ್ಕೆ ಮಾತ್ರ ಅವಕಾಶ.
-ಬೆಂಗಳೂರಿನಲ್ಲಿ ಬಿಎಂಟಿಸಿ ಶೇ.10 ಸೇವೆ ಲಭ್ಯ. ಈಗಾಗಲೇ ಆನ್ಲೈನ್ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡಿರುವ ಪ್ರಯಾಣಿಕರ ಸಂಖ್ಯೆ ಆಧರಿಸಿ ಕೆಎಸ್ಆರ್ಟಿಸಿ ಬಸ್ ಸೇವೆ ಕಲ್ಪಿಸಲಾಗುವುದು.
-ಕೈಗಾರಿಕೆಗಳು, ಐಟಿ ಉದ್ಯಮಗಳ ನೌಕರರು ಅಧಿಕೃತ ಐಡಿ ಕಾರ್ಡ್ ತೋರಿಸಿ ಓಡಾಡಲು ಅವಕಾಶ. ಅದೂ ಕೆಲಸಕ್ಕೆ ಹೋಗುವುದಿದ್ದರಷ್ಟೇ.
ಅದು ನಮ್ಮಿಬ್ಬರ ಕರುಳ ಬಳ್ಳಿ ಜಗಳ, ಅಕ್ಕನ ಮಗಳೋ- ಮಾವನ ಮಗನೋ ಎಂಬಂತೆ ಜಗಳ ಆಗಿದೆ ಅಷ್ಟೇ…