ಕಲಬುರಗಿ: ಕರೊನಾ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸುತ್ತಾ ಇತರರಿಗೂ ಮಾದರಿ ಆಗಬೇಕಿದ್ದ ಸರ್ಕಾರಿ ಅಧಿಕಾರಿಯೊಬ್ಬರು ಗುಟ್ಖಾ ಉಗುಳುತ್ತಾ ಕಾರಿನಲ್ಲಿ ಮಾಸ್ಕ್ ಧರಿಸದೆ ಬಂದಿದ್ದಲ್ಲದ್ದೇ ಇದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಘಟನೆ ನಗರದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಆಹಾರ ಮತ್ತು ನಾಗರಿಕ ಇಲಾಖೆಯಲ್ಲಿ ಅನ್ನಭಾಗ್ಯ ಯೋಜನೆಯ ಇನ್ಸ್ಪೆಕ್ಟರ್ ಬಸವರಾಜ್ ಕಾರಿನಲ್ಲಿ ಮಾಸ್ಕ್ ಧರಿಸದೆ ಬಂದು ಪೊಲೀಸರ ಜತೆ ವಾಗ್ವಾದ ನಡೆಸಿದವರು. ಪೊಲೀಸರ ತಪಾಸಣೆ ವೇಳೆ ‘ನಾನು ಇನ್ಸ್ಪೆಕ್ಟರ್ ಸರ್’ ಅಂತಾ ಬಚಾವ್ ಆಗೋಕೆ ಯತ್ನಿಸಿದರು. ‘ಬೆಳಗ್ಗೆಯಿಂದ ಕೆಲಸದಲ್ಲಿ ಬಿಜಿಯಾಗಿದ್ದೇನೆ, ಕೆಲಸದ ಮೇಲೆ ಬಂದಿದ್ದೀನಿ ಬಿಡಿ’ ಎಂದು ನೈಟ್ ಡ್ರಸ್ ಧರಿಸಿಕೊಂಡು ವಾಗ್ವಾದ ನಡೆಸುತ್ತಿದ್ದರು.
ಮಾಸ್ಕ್ ಹಾಕದೆ ಬಂದ ತಪ್ಪಿಗೆ ಅಧಿಕಾರಿಗೆ ಪೊಲೀಸರು 250 ರೂಪಾಯಿ ದಂಡ ಹಾಕಿದರು. ಪೊಲೀಸರು ಫೈನ್ ಹಾಕುವಾಗ ಅಧಿಕಾರಿ ತನ್ನ ಹೆಸರನ್ನು ತಪ್ಪಾಗಿ ಹೇಳಿದರು. ಅಧಿಕಾರಿಯ ಓರಿಜಿನಲ್ ಹೆಸರು ಬಸವರಾಜ್ ಎಂದಿದ್ದರೂ ದಂಡದ ರಶೀದಿಯಲ್ಲಿ ದಶರಥ ಅಂತಾ ಬರೆಸಿಕೊಂಡು ದಂಡ ಕಟ್ಟಿ ಹೋದರು.
ಅಪ್ಪ-ಅಮ್ಮ ಕೋವಿಡ್ಗೆ ಬಲಿ! ತಾತ-ಅಜ್ಜಿಗೂ ಸೋಂಕು, ಅನಾಥೆಯಾದ 4 ವರ್ಷದ ಕಂದಮ್ಮ
ಪ್ರೀತಿ ಹೆಸರಲ್ಲಿ ಶಾಲಾ ವಿದ್ಯಾರ್ಥಿನಿ ಜತೆ ಯುವಕನ ಸೆಕ್ಸ್: ಮಾತ್ರೆ ನುಂಗಿಸಿ ಸಿಕ್ಕಿಬಿದ್ದ ಕಾಮುಕನ ಕಥೆ ಏನಾಯ್ತು?
ಕರೊನಾಗೆ ಬಾಣಂತಿ ಬಲಿ! ಅವಳ ಚಿತೆಯಲ್ಲೇ ನನ್ನನ್ನೂ ಸುಟ್ಟುಹಾಕಿ … ಎಂದವ ವಿಷ ಕುಡಿದು ಆಸ್ಪತ್ರೆ ಆವರಣದಲ್ಲೇ ಒದ್ದಾಡಿದ
ಗಂಡನಿದ್ದರೂ ಪರಪುರುಷನೊಂದಿಗೆ 2 ಮಕ್ಕಳ ತಾಯಿ ಕಾಮದಾಟ! ತಡರಾತ್ರಿ ನಡೆದೇ ಹೋಯ್ತು ಭೀಕರ ದುರಂತ