ಹಿರೇಕೆರೂರ: ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ? ಅಮ್ಮನ ಕಂಕುಳಲ್ಲಿ ಕೂತು ಕೈತುತ್ತು ತಿನ್ನುತ್ತಿರುವಾಗಲೇ ಹಾಲುಗಲ್ಲದ ಕಂದ ಸಾವಿಗೀಡಾಗಿದೆ.
ಹೆತ್ತಮ್ಮನ ಕಣ್ಣೆದುರಲ್ಲೇ ತೆಂಗಿನಕಾಯಿ ರೂಪದಲ್ಲಿ ಬಂದ ಜವರಾಯ ಮಗುವಿನ ಪ್ರಾಣ ಹೊತ್ತೊಯ್ದ ಕರುಣಾಜಕನ ಘಟನೆ ಹಿರೇಕೆರೂರ ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ಮಲ್ಲಿಕಾರ್ಜುನ ವಾಲ್ಮೀಕಿ ಮತ್ತು ಮಾಲಾ ವಾಲ್ಮೀಕಿ ದಂಪತಿಯ 11 ತಿಂಗಳ ಮಗು ತನ್ವಿತ್ ಮೃತ ದುರ್ದೈವಿ. ಸೋಮವಾರ ತಾಯಿ ಮಾಲಾ, ಮಗುವಿಗೆ ಊಟ ಮಾಡಿಸುತ್ತಾ ಪಕ್ಕದ ಮನೆಗೆ ಹೋಗುತ್ತಿದ್ದರು. ಇದನ್ನೂ ಓದಿರಿ ಅಮ್ಮ ಸತ್ತ ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ ಅಪ್ಪ-ಮಕ್ಕಳು! ಸುಂದರ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?
ಮನೆ ಆವರಣದಲ್ಲೇ ಇದ್ದ ತೆಂಗಿನ ಮರದಿಂದ ಹಸಿಕಾಯಿ ಮಗುವಿನ ತಲೆ ಮೇಲೆ ಬಿತ್ತು. ಗಂಭೀರ ಗಾಯಗೊಂಡ ಮಗುವನ್ನು ಕೂಡಲೇ ಗ್ರಾಮದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಮಗು ಬದುಕಲಿಲ್ಲ.
ಆಟಾವಾಡುತ್ತ ನಲಿದಾಡಬೇಕಿದ್ದ ಪುಟ್ಟ ಕಂದ ತನ್ನ ಕಣ್ಣೆದುರಲ್ಲೇ ಬಾರದ ಲೋಕಕ್ಕೆ ಹೋದದ್ದನ್ನ ಕಂಡ ಹೆತ್ತಮ್ಮನ ಒಡಲಿಗೆ ಬೆಂಕಿ ಬಿದ್ದಂತಾಗಿದೆ. 2 ವರ್ಷದ ಹಿಂದೆ ಮಲ್ಲಿಕಾರ್ಜುನ ಹಾಗೂ ಮಾಲಾ ದಂಪತಿ ಮದುವೆಗಿದ್ದರು. ಈ ದಂಪತಿಗೆ ಚೊಚ್ಚಲ ಮಗು ಇದು. ಮುದ್ದುಮುದ್ದಾಗಿ ತನ್ವಿತ್ನನ್ನು ಓಣಿಯ ಜನರೂ ಬಹಳ ಹಚ್ಚಿಕೊಂಡಿದ್ದರು. ಮಗುವಿನ ದುರಂತ ಸಾವಿನ ಸುದ್ದಿ ಇಡೀ ಓಣಿಗೆ ಸೂತಕದ ಛಾಯೆ ಆವರಿಸಿದೆ.(ದಿಗ್ವಿಜಯ ನ್ಯೂಸ್, ಹಾವೇರಿ)
ಹೊಲದಲ್ಲಿ ಮೈಮರೆತ ಪ್ರೇಮಿಗಳು! ವಿಡಿಯೋ ಚಿತ್ರೀಕರಿಸಿ, ಮರಕ್ಕೆ ಕಟ್ಟಿ ಹಿಂಸಿಸಿದ ಜನ… ಬೆಚ್ಚಿಬೀಳಿಸುತ್ತೆ ಭಯಾನಕ ಘಟನೆ
ಮಹಿಳೆಯನ್ನ ನಗ್ನಗೊಳಿಸಿ ತೋಟದ ಮನೆಯಲ್ಲಿ ಕೂಡಿಹಾಕಿದ ಬಿಎಂಟಿಸಿ ಬಸ್ ಚಾಲಕ! ಮುಂದಾಗಿದ್ದು ದುರಂತ
ಅಮ್ಮ ಸತ್ತ ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ ಅಪ್ಪ-ಮಕ್ಕಳು! ಸುಂದರ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?
ಮಗು ಹುಟ್ಟಿದ ಮೂರೇ ದಿನಕ್ಕೆ ರೈಲಿಗೆ ತಲೆ ಕೊಟ್ಟ ಗಂಡ! ಪತ್ನಿಯ ಆ ನಿರ್ಧಾರವೇ ಇಷ್ಟಕ್ಕೆಲ್ಲ ಕಾರಣ
ವರದಕ್ಷಿಣೆಗೆ ಮತ್ತೊಂದು ಬಲಿ: ಆರು ತಿಂಗಳ ಹಿಂದಷ್ಟೇ ಮದ್ವೆ ಆಗಿದ್ದ ಯುವತಿ ಗಂಡನ ಮನೆಯಲ್ಲೇ ದುರಂತ ಸಾವು!