ಬಾಳೆಹೊನ್ನೂರು: ಹಿಡುವಳಿ ಜಾಗದಲ್ಲಿ ಬೆಳೆದಿದ್ದ ಕಾಡು ಜಾತಿಯ ಮರಗಳನ್ನು ಕತ್ತರಿಸಿದ ಆರೋಪದಡಿ ಜಮೀನಿನ ಮಾಲೀಕನ ವಿರುದ್ಧ ಬಾಳೆಹೊನ್ನೂರು ಅರಣ್ಯ ಇಲಾಖೆ ಸಿಬ್ಬಂದಿ ಪ್ರಕರಣ ದಾಖಲಿಸಿದ್ದಾರೆ.
ತನೂಡಿ ಸರ್ವೇ ನಂ.122ರಲ್ಲಿ ಶಂಕರ್ ಎಂಬುವರ ಹಿಡುವಳಿ ಜಾಗದಲ್ಲಿ ಬೆಳೆದಿದ್ದ ಕಾಡು ಜಾತಿಯ 192 ಮರಗಳನ್ನು ಅನುಮತಿ ಪಡೆಯದೆ ಕತ್ತರಿಸಲಾಗಿತ್ತು. ಬಿಲ್ವಾರ್, ಗರಿಗೆ, ನೇರಳೆ, ಮತ್ತಿ, ಹಲಸು ಜಾತಿಯ ಒಣಗಿದ ಮರಗಳನ್ನು ಕಡಿಯಲಾಗಿತ್ತು. ಮರ ಕತ್ತರಿಸಿರುವ ದೂರು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ 132 ಮೀಟರ್ ಟಿಂಬರ್ ಹಾಗೂ 96 ಮೀಟರ್ ಸೌದೆಯನ್ನು ವಶಕ್ಕೆ ಪಡೆದಿದ್ದಾರೆ.
ಬಾಳೆಹೊನ್ನೂರು ಆರ್ಎಫ್ಒ ಸಂದೀಪ್, ಡಿಆರ್ಎಫ್ಒ ಪರಶುರಾಮ್ ಸ್ಥಳ ಪರಿಶೀಲಿಸಿದರು.