ಮಂಡ್ಯ: ರಾಜ್ಯದಲ್ಲೂ ಬುಲ್ಡೋಜರ್ ನೀತಿ ಜಾರಿಗೆ ತನ್ನಿ ಎಂದು ಸಿಎಂಗೆ ಮನವಿ ಮಾಡಿರುವ ಮಂಡ್ಯ ಬಿಜೆಪಿ ಕಾರ್ಯಕರ್ತರು ಗುರುವಾರ ಬುಲ್ಡೋಜರ್ಗೆ ವಿಶೇಚ ಪೂಜೆ ಸಲ್ಲಿಸಿದರು.
ಹುಬ್ಬಳ್ಳಿ ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಕಾರ್ಯಕರ್ತರು ಉತ್ತರ ಪ್ರದೇಶದ ರೀತಿ ರಾಜ್ಯದಲ್ಲೂ ಬುಲ್ಡೋಜರ್ ನೀತಿ ಜಾರಿಗೆ ತನ್ನಿ. ಬುಲ್ಡೋಜರ್ ಬಳಸಿ ಗಲಭೆಕೋರ ಮನೆ ಧ್ವಂಸಗೊಳಿಸಿ ಎಂದು ಮನವಿ ಮಾಡಿದರು.
ಮಂಡ್ಯದ ಶಕ್ತಿ ದೇವತೆ ಕಾಳಮ್ಮ ದೇವಾಲಯದಲ್ಲಿ ಬುಲ್ಡೋಜರ್ಗೆ ಪೂಜೆ ಸಲ್ಲಿಸಿ ಸರ್ಕಾರದ ಗಮನ ಸೆಳೆಯಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು, ಹಿಂದೂ-ಮುಸ್ಲಿಮರು ಸಹೋದರರಂತೆ ಬದುಕಿದ್ದೇವೆ. ಕೆಲ ಕಿಡಿಗೇಡಿಗಳು ಗಲಭೆ ಎಬ್ಬಸಿ ಕೋಮು ಸೌಹಾರ್ದತೆ ಹಾಳು ಮಾಡ್ತಿದ್ದಾರೆ. ಅಂತಹ ಗಲಭೆಕೋರರ ವಿರುದ್ಧ ಬುಲ್ಡೋಜರ್ ದಾಳಿ ಆಗಬೇಕು. ಅವರ ಮನೆ-ಆಸ್ತಿ ಧ್ವಂಸಗೊಳಿಸಬೇಕು. ಸಿಎಂ ಬಸವರಾಜ ಬೊಮ್ಮಾಯಿ ಅವರೇ ನೀವು ‘ಬುಲ್ಡೋಜರ್ ಬೊಮ್ಮಾಯಿ’ ಆಗಿ ಎಂದು ಆಗ್ರಹಿಸಿದರು.
ಪಕ್ಕದ ರೂಮಲ್ಲಿ ಗಂಡ ಮಲಗಿದ್ರೂ ನಡೆದೇ ಹೋಯ್ತು ಘೋರ ದುರಂತ! ಬೆಳಗ್ಗೆ ಪತ್ನಿಯ ಕೋಣೆಗೆ ಹೋದವನಿಗೆ ಕಾದಿತ್ತು ಶಾಕ್
ಏ.26ಕ್ಕೆ ನನ್ನ ಮದ್ವೆ ಇದೆ, ದಯವಿಟ್ಟು ಎಲ್ಲಿಗಾದ್ರೂ ಓಡೋಗೋಣ… ಸಖತ್ ವೈರಲ್ ಆಗ್ತಿದೆ ಪ್ರಿಯತಮೆ ಸಂದೇಶ
ಫ್ರೆಂಡ್ಸ್ ಜತೆ ಲೈಂಗಿಕವಾಗಿ ಸಹಕರಿಸು… ಮೊದಲ ಪತಿಗೆ ಡಿವೋರ್ಸ್ ಕೊಟ್ಟು ಮತ್ತೊಬ್ಬನ ಮದ್ವೆ ಆದಾಕೆ ಬಾಳಲ್ಲಿ ದುರಂತ