More

    ಚಾಕು ಇರಿತಕ್ಕೊಳಗಾಗಿದ್ದ BBMP ಮಾಜಿ ಕಾರ್ಪೋರೇಟರ್​​ ಸಾವು: ಅಣ್ಣನ ಮಗನಿಂದಲೇ ಅಯೂಬ್​ ಕೊಲೆ

    ಬೆಂಗಳೂರು: ಚಾಕು ಇರಿತಕ್ಕೊಳಗಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಸ್​​ಕೆಆರ್​ ಮಾರ್ಕೆಟ್​ ವಾರ್ಡ್​ನ ಮಾಜಿ ಸದಸ್ಯ ಅಯೂಬ್​ ಖಾನ್​ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.

    ಈ ಹಿಂದೆ ಅಯೂಬ್​ ಖಾನ್​ ರಾಜಕೀಯವಾಗಿ ಬೆಳೆಯಲು ತನ್ನ ಕುಟುಂಬದ ಸದಸ್ಯರನ್ನು ಬಳಸಿಕೊಂಡಿದ್ದು, ಇದೀಗ ರಾಜಕೀಯವಾಗಿ ಬೆಳೆದ ಬಳಿಕ ಎಲ್ಲರನ್ನೂ ದೂರು ಮಾಡಿದ್ದಾರೆ ಎನ್ನಲಾಗಿದೆ. ಇದೇ ವಿಚಾರವಾಗಿ ಇವರ ಸಹೋದರನ ಪುತ್ರ ಮತ್ತಿನ್​ ಖಾನ್​ ನಡುವೆ ಪದೇಪದೆ ಗಲಾಟೆ ನಡೆಯುತ್ತಿತ್ತು. ಬುಧವಾರ ರಾತ್ರಿ ಕೂಡ ಚಾಮರಾಜಪೇಟೆಯ ವಿನಾಯಕ ಚಿತ್ರಮಂದಿರ ಸಮೀಪ ಅಯೂಬ್​ ಖಾನ್​ ಮನೆ ಬಳಿ ಮತ್ತಿನ್​ ಗಲಾಟೆ ಮಾಡಿದ್ದ. ಜಗಳ ವಿಕೋಪಕ್ಕೆ ತಿರುಗಿದ್ದು, ಆಕ್ರೋಶಗೊಂಡ ಮತ್ತಿನ್​, ಚಾಕುವಿನಿಂದ ಅಯೂಬ್​ ಖಾನ್​ ಹೊಟ್ಟೆಗೆ ಇರಿದಿದ್ದ.

    ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದಿದ್ದ ಅಯೂಬ್​ ಖಾನ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅಯೂಬ್​ ಮೃತಪಟ್ಟಿದ್ದಾರೆ. ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಘಟನೆಗೆ ಮಸೀದಿ ಅಧ್ಯಕ್ಷ ಪಟ್ಟವೇ ಕಾರಣ ಎಂದು ಅಯುಬ್ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಟಿಪ್ಪುನಗರದ ಖುದಾಯತ್ ಮಸೀದಿಗೆ ಅಯೂಬ್ ಅಧ್ಯಕ್ಷರಾಗಿದ್ದರು. ಈ ಸ್ಥಾನ ಬಿಟ್ಟುಕೊಡುವಂತೆ ಅಯೂಬ್​ರ ಮತ್ತೀನ್ ಗಲಾಟೆ ಮಾಡುತ್ತಿದ್ದ. ಇದೇ ವಿಚಾರವಾಗಿ ಈ ಹಿಂದೆ ಕೊಲೆ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಹೆತ್ತಮ್ಮನ ಸಾವಿನ ನೋವಲ್ಲೇ ಪರೀಕ್ಷೆ ಬರೆದ ಸ್ಫೂರ್ತಿ: ಅಜ್ಜ-ಅಜ್ಜಿಯ ಸಾವು ಮಾಸುವ ಮುನ್ನವೇ ಅಮ್ಮನೂ ದೂರ…

    ಕಿಕ್​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ ಸಾವು: ಆಟ ಆಡುತ್ತಿರುವಾಗಲೇ ಜೀವ ಕಸಿದ ದುರ್ವಿಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts