More

    ಹುಬ್ಬಳ್ಳಿಯಲ್ಲಿ ನಟಿ ಶನಾಯ ಅರೆಸ್ಟ್: ಹೈಸ್ಕೂಲ್​ ಲವ್​ಗೆ ಅಡ್ಡಿಯಾದ ಸೋದರನ ಸಾವಿನ ಹಿಂದಿದೆ ಬೆಚ್ಚಿಬೀಳಿಸೋ ರಹಸ್ಯ

    ಹುಬ್ಬಳ್ಳಿ: ಸಹೋದರನ ಕೊಲೆ ಕೇಸ್​ನಲ್ಲಿ ‘ಛೋಟಾ ಬಾಂಬೆ’ ಸಿನಿಮಾ ನಟಿ ಶನಾಯ ಕಾಟವೆಯನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಮಾಡೆಲ್ ಕಂ ನಟಿ ಆಗಿರುವ ಶನಾಯ 2018ರಲ್ಲಿ ತೆಲುಗಿನ ‘ಇದಂ ಪ್ರೇಮಂ ಜೀವನಂ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಕನ್ನಡದ ‘ಒಂದು ಗಂಟೆಯ ಕಥೆ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹುಬ್ಬಳ್ಳಿ ಮೂಲದ ಅಂಡರ್ ವಲ್ಡ್೯ ಕಥೆ ಒಳಗೊಂಡಿರುವ ‘ಛೋಟಾ ಬಾಂಬೆ’ ಚಿತ್ರದ ಎರಡನೇ ನಾಯಕಿಯಾಗಿ ಶನಾಯ ಬಣ್ಣ ಹಚ್ಚಿದ್ದರು.
    ಏ.11ರಂದು ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ ಅರ್ಧಂಬರ್ಧ ಸುಟ್ಟಿದ್ದ, ರುಂಡ-ಮುಂಡ-ಕೈಕಾಲು ಬೇರ್ಪಟ್ಟಿದ್ದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಈ ಶವ ನಟಿ ಶನಾಯಳ ಸಹೋದರ ರಾಕೇಶ ಕಾವೆಯದ್ದು ಎಂದು ತಿಳಿಯುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ನಟಿ ಮೇಲೆಯೇ ಅನುಮಾನ ಮೂಡಿತ್ತು. ಇದನ್ನೂ ಓದಿರಿ ಕುಷ್ಟಗಿ ಪುರಸಭೆ ಉಪಾಧ್ಯಕ್ಷೆ ರಾಜೇಶ್ವರಿ ಆತ್ಮಹತ್ಯೆ!

    ಈ ಜಾಡನ್ನು ಹಿಡಿದು ಹೊರಟ ಪೊಲೀಸರು ನಟಿ ಶನಾಯ, ಈಕೆಯ ಪ್ರಿಯಕರ ನಿಯಾಜ್, ಸಹಚರರಾದ ಮಲ್ಲಿಕ್, ಫಿರೋಜ್, ಸೈಫುದ್ದೀನ್​ನನ್ನು ಬಂಧಿಸಿದ್ದಾರೆ. ರೀಲ್​ನಲ್ಲಿ ಹಿರೋಯಿನ್ ಆಗಿದ ಶನಾಯ ರಿಯಲ್​ನಲ್ಲಿ ವಿಲನ್ ಆಗಿದ್ದೇಕೆ ಎಂಬುದು ಪೊಲೀಸ್​ ತನಿಖೆಯಲ್ಲಿ ಬಯಲಾಗಿದೆ.

    ಹುಬ್ಬಳ್ಳಿಯಲ್ಲಿ ನಟಿ ಶನಾಯ ಅರೆಸ್ಟ್: ಹೈಸ್ಕೂಲ್​ ಲವ್​ಗೆ ಅಡ್ಡಿಯಾದ ಸೋದರನ ಸಾವಿನ ಹಿಂದಿದೆ ಬೆಚ್ಚಿಬೀಳಿಸೋ ರಹಸ್ಯಏ.10ರಂದು ಹುಬ್ಬಳ್ಳಿಯಲ್ಲಿ ಸಿನಿಮಾವೊಂದರ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತು. ಈ ನಿಮಿತ್ತ ಹಿಂದಿನ ದಿನವೇ ಹುಬ್ಬಳ್ಳಿಗೆ ಬಂದಿದ್ದ ಶನಾಯ, ಮರುದಿನ ಸಮಾರಂಭಕ್ಕೆ ಆಗಮಿಸಿರಲಿಲ್ಲ. ಏ.9ರಂದೇ ಶನಾಯಳ ಸಹೋದರ ರಾಕೇಶ ಕಾವಟೆಯನ್ನ ಶನಾಯಳ ಪ್ರಿಯಕರ ನಿಯಾಜ್​ ಕೊಲೆ ಮಾಡಿದ್ದ. ದಿನವಿಡೀ ನಿಯಾಜ್ ತನ್ನ ಮನೆಯಲ್ಲೇ ಶವ ಇಟ್ಟುಕೊಂಡು ಬಳಿಕ ರುಂಡ-ಮುಂಡ-ಕೈಕಾಲು ಬೇರ್ಪಡಿಸಿ ಮರುದಿನ ರಾತ್ರಿ ರಮ್ಯ ರೆಸಿಡೆನ್ಸಿ ಬಳಿ ಜಮೀನೊಂದರಲ್ಲಿ ಶವವನ್ನು ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದ. ಏ.11ರಂದು ಹೋಗಿ ಅರ್ಧಂಬರ್ಧ ಸುಟ್ಟಿದ್ದ ಮೃತದೇಹವನ್ನು ಚೀಲದಲ್ಲಿ ತುಂಬಿಕೊಂಡು ಕೇಶ್ವಾಪುರದ ನಿರ್ಜನ ಪ್ರದೇಶಕ್ಕೆ ಹೋಗಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಇದನ್ನೂ ಓದಿರಿ ಕ್ಯಾಂಟರ್​ನಲ್ಲಿ ಮಲಗಿದ್ದವರ ಮೇಲೆ ತೊಗರಿ ಮೂಟೆಗಳು ಬಿದ್ದು ಸ್ಥಳದಲ್ಲೇ ಯುವಕರಿಬ್ಬರ ಸಾವು!

    ಹುಬ್ಬಳ್ಳಿಯಲ್ಲಿ ನಟಿ ಶನಾಯ ಅರೆಸ್ಟ್: ಹೈಸ್ಕೂಲ್​ ಲವ್​ಗೆ ಅಡ್ಡಿಯಾದ ಸೋದರನ ಸಾವಿನ ಹಿಂದಿದೆ ಬೆಚ್ಚಿಬೀಳಿಸೋ ರಹಸ್ಯಈ ಪಕ್ರರಣ ಸಂಬಂಧ ಪೊಲೀಸರು ನಟಿ ಶನಾಯಳನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಶನಾಯ ಮತ್ತು ನಿಯಾಜ್​ನ ಪ್ರೀತಿಗೆ ರಾಕೇಶ್​ ಆಕ್ಷೇಪಿಸುತ್ತಿದ್ದ. ಇದೇ ಕಾರಣಕ್ಕೆ ಏ.9ರಂದು ರಾಕೇಶನ ಕತ್ತು ಹಿಸುಕಿ ನಯಾಜ್ ಕೊಂದಿದ್ದ. ಮೃತದೇಹವನ್ನ ಕಾರಿನಲ್ಲಿ ಹಾಕಿಕೊಂಡು ಶಿಮ್ಲಾ ನಗರದ ತನ್ನ ಮನೆಗೆ ಬಂದಿದ್ದ. ಮನೆಯಲ್ಲಿದ್ದ ಶನಾಯ ಬಳಿ ‘ನಿನ್ನ ಅಣ್ಣನಿಗೆ ಯಾರೋ ಹೊಡೆದಿದ್ದಾರೆ. ಆಸ್ಪತ್ರೆಗೆ ತೋರಿಸಬೇಕು. ನೀನು ಕೇಶ್ವಾಪುರದಲ್ಲಿನ ನನ್ನ ಹೊಸ ಬಾಡಿಗೆ ಮನೆಗೆ ಹೋಗು’ ಎಂದು ಕಾರಿನಲ್ಲಿ ಹತ್ತಿಸಿದ್ದ. ಕುಳಿತ ಭಂಗಿಯಲ್ಲೇ ಇದ್ದ ಸಹೋದರನ ಶವದೊಂದಿಗೆ ಶನಾಯ ಪ್ರಯಾಣಿಸಿದ್ದಳು. ನಂತರ ನಿಯಾಜ್ ಶಿಮ್ಲಾ ನಗರದ ಮನೆಯಲ್ಲಿ ರಾಕೇಶನ ಶವ ತಂದು ತುಂಡರಿಸಿ ಬಳಿಕ ಸುಟ್ಟು ಹಾಕಿದ್ದ. ಸಹೋದರನ ಕೊಲೆ ಬಳಿಕ ಶನಾಯ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಳು.

    ಹೈಸ್ಕೂಲ್​ನಲ್ಲೇ ಲವ್​: ಪ್ರಮುಖ ಆರೋಪಿ ನಿಯಾಜ್ ಹಾಗೂ ಶನಾಯಳ ನಡುವೆ ಹೈಸ್ಕೂಲ್​ನಲ್ಲೇ ಲವ್ ಶುರುವಾಗಿತ್ತು. ಅಂದಿನಿಂದಲೇ ಇವರಿಬ್ಬರ ಪ್ರೀತಿಗೆ ರಾಕೇಶ ವಿರೋಧ ವ್ಯಕ್ತಪಡಿಸಿದ್ದ. ವಿದ್ಯಾಭ್ಯಾಸದ ನಂತರ ಶನಾಯ ಮಾಡೆಲಿಂಗ್ ಕ್ಷೇತ್ರಕ್ಕೆ ಹೋಗಿ ನಂತರ ಸಿನಿಮಾದಲ್ಲಿ ಪಾತ್ರ ಗಿಟ್ಟಿಸಿಕೊಂಡಿದ್ದಳು. ನಂತರವೂ ಹುಬ್ಬಳ್ಳಿಗೆ ಬಂದಾಗ ನಿಯಾಜ್ ಜತೆಯಲ್ಲೇ ವಾಸ ಇರುತ್ತಿದ್ದಳು. ಇದೇ ವಿಚಾರವಾಗಿ ನಿಯಾಜ್​ ಜತೆ ರಾಕೇಶ ಗಲಾಟೆ ಮಾಡಿದ್ದ. ಪ್ರೀತಿಗೆ ಅಡ್ಡಿ ಆಗುತ್ತಿದ್ದ ರಾಕೇಶನನ್ನ ಶನಾಯಳ ಪ್ರಿಯಕರನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

    ರುಂಡ-ಮುಂಡ-ಕೈಕಾಲು ಬೇರ್ಪಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ​: ಶವದೊಂದಿಗೆ ಪ್ರಯಾಣಿಸಿದ್ದ ನಟಿ ಶನಾಯ, ಬೆಚ್ಚಿಬೀಳಿಸುತ್ತೆ ಟ್ರಾವೆಲ್ ಹಿಸ್ಟರಿ

    ಶವದೊಂದಿಗೆ ನಟಿ ಶನಾಯ ಪ್ರಯಾಣ: ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಮುನ್ನಾ ದಿನವೇ ಬಂದಿದ್ದರೂ ಗೈರು! ಬಯಲಾಗ್ತಿದೆ ಸ್ಫೋಟಕ ರಹಸ್ಯ…

    ಪ್ರೀತಿ ಬಲೆಗೆ ಬಿದ್ದ ರೂಪದರ್ಶಿ ಮೇಲೆ 16 ಬಾರಿ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಪ್ರಿಯಕರನ ಮತ್ತೊಂದು ಮುಖ

    ಇಬ್ಬರು ಯುವತಿಯರೊಂದಿಗೆ ಯುವಕನ ಲವ್ವಿಡವ್ವಿ! ಪ್ರಶ್ನಿಸಿದ ಪೋಷಕರಿಗೆ ಶಾಕಿಂಗ್​ ಉತ್ತರ ಕೊಟ್ಟ ಪ್ರಿಯಕರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts