ಗೊಳಸಂಗಿ: ಸಮೀಪದ ಮಸೂತಿ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜಯಂತಿಯನ್ನು ಶುಕ್ರವಾರ ವಿಜ್ರಂಭಣೆಯಿಂದ ಆಚರಿಸಲಾಯಿತು.ಪಿಕೆಪಿಎಸ್ ಅಧ್ಯಕ್ಷ ಕೆ.ವಿ.ಕುಲಕರ್ಣಿ, ತಾಪಂ ಸದಸ್ಯ ಗುರುಶಾಂತ ಯರಂತೇಲಿ, ಪ್ರಮುಖ ಗುರುಶಾಂತಪ್ಪ ಸಾಲಹಳ್ಳಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಎಸ್. ಕೆ.ಹಂಗರಗಿ, ದ್ಯಾಮಣ್ಣ ಕಾಗಲ್, ರಮೇಶ್ ಬೀಳಗಿ, ನ್ಯಾಯವಾದಿ ಎಸ್. ಎಸ್. ಗರಸಂಗಿ, ಪ್ರಕಾಶ ಕಾಗಲ್, ಬಿ.ಕೆ.ಸಾಲಳ್ಳಿ, ಸಂತೋಷ ಚನಗೊಂಡ, ಈರಪ್ಪ ರಾಂಪೂರ, ಶ್ರೀಮಂತ ಕೊಲ್ಹಾರ, ಶ್ರೀಕಾಂತ್ ಸಾಲಳ್ಳಿ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.