ಇಡುಕ್ಕಿ: ಕೆಲ ದಿನಗಳ ಹಿಂದೆ ಸ್ಪೋಟಕ ತುಂಬಿದ ಪೈನಾಪಲ್ ತಿಂದು ಗರ್ಭಿಣಿ ಆನೆ ಮೃತಪಟ್ಟಿದ್ದ ಪ್ರಕರಣ ಇಡೀ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೇ, ಆನೆ ಸಾವಿನ ಬಗ್ಗೆ ಎಲ್ಲರೂ ಮರುಕ ವ್ಯಕ್ತಪಡಿಸಿದ್ದರು. ಇದೀಗ ಅದೇ ಪೈನಾಪಲ್ನಿಂದಲೇ ಆನೆ ಮರಿಯ ಜೀವವೊಂದು ಉಳಿದಿದೆ.
ಹೌದು, ಕೇರಳದ ಇಡುಕ್ಕಿ ಜಿಲ್ಲೆಯ ಕಾಂಥಾಲ್ಲೂರ್ ಪಂಚಾಯಿತಿಯ ಶಿವಬಂತಿ ಗ್ರಾಮ ಸಮೀಪದ ಅರಣ್ಯದಲ್ಲಿ ಆನೆಯ ಮರಿಯೊಂದು ತನ್ನ ಕಾಲು ಮುರಿದುಕೊಂಡು ಗಂಭೀರವಾಗಿ ಗಾಯಗೊಂಡಿತ್ತು. ಜೂನ್ 5 ರಂದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಮಾಹಿತಿ ತಿಳಿದು ಪಶುವೈದ್ಯಾಧಿಕಾರಿ ಡಾ ನಿಶಾ ರಾಚೆಲ್ ಅವರನ್ನು ಸ್ಥಳಕ್ಕೆ ಆಗಮಿಸಿದ ಪರೀಕ್ಷಿಸಿದ್ದರು.
ಈ ವೇಳೆ ಪೈನಾಪಲ್ನಲ್ಲಿ ಔಷಧ ತುಂಬಿ ಆನೆಗೆ ನೀಡಲಾಗಿತ್ತು. ಇದೀಗ ಕಾಂಥಾಲ್ಲೂರ್ ಅರಣ್ಯ ವಲಯದ 9 ಸಿಬ್ಬಂದಿಯನ್ನು 24 ಗಂಟೆ ಆನೆಯ ಮೇಲೆ ನಿಗಾವಹಿಸಲು ನಿಯೋಜಿಸಲಾಗಿದೆ. ಸ್ಥಳೀಯರಿಂದ ಹಾಗೂ ಇತರೆ ಆನೆಗಳು ಗುಂಪಿನಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಇದನ್ನೂ ಓದಿ: VIDEO| ಚೀನಾ ಮೇಲಿನ ಕೋಪಕ್ಕೆ ಕಿಮ್ ಜಾಂಗ್ ಉನ್ ಪ್ರತಿಕೃತಿ ದಹಿಸಿ ಆಕ್ರೋಶ…!
ಸದ್ಯ ಆನೆಯನ್ನು ಚಂದ್ರಮಂಡಲಂ ಏರಿಯಾದಲ್ಲಿ ಸುರಕ್ಷಿತವಾಗಿ ನೋಡಿಕೊಳ್ಳಲಾಗುತ್ತಿದೆ. ನೇರವಾಗಿ ಔಷಧ ಕೊಡಲು ಸಾಧ್ಯವಾಗದಿದ್ದರಿಂದ ಪೈನಾಪಲ್ನಲ್ಲಿ ತುಂಬಿ ಆನೆಗೆ ನೀಡಲಾಗಿತ್ತು. ಬಲ ಕಾಲಿಗೆ ಗಂಭೀರವಾದ ಗಾಯವಾಗಿದ್ದರಿಂದ ಸರಿಯಾಗಿ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಚೇತರಿಸಿಕೊಳ್ಳುತ್ತಿದ್ದು, ಈಗ ಯಾರ ಸಹಾಯವೂ ಇಲ್ಲದೇ ಎದ್ದು ನಿಲ್ಲುತ್ತದೆ ಎಂದು ಕಾಂಥಾಲ್ಲೂರ್ ವಲಯ ಅರಣ್ಯಾಧಿಕಾರಿ ಎಸ್. ಸಂದೀಪ್ ತಿಳಿಸಿದ್ದಾರೆ. (ಏಜೆನ್ಸೀಸ್)
ಗರ್ಭಿಣಿ ಆನೆ ಕೊಂದ ಪ್ರಕರಣದಲ್ಲಿ ಮೂವರ ಬಂಧನ: ಮರಣೋತ್ತರ ವರದಿಯಲ್ಲಿ ನೋವಿನ ಸಂಗತಿ