More

    ಬಸವಣ್ಣ ಮಾನವಿಯತೆಯ ಮೌಲ್ಯ ಗುಣಗಳ ವ್ಯಕ್ತಿತ್ವ:ಡಾ.ಚಿ.ಸಿ.ನಿಂಗಣ್ಣ

    ಜಯ ನಗರ ಶಿವ ಮಂದಿರದಲ್ಲಿ ಬಸವ ಜಯಂತಿ

    ಕಲಬುರಗಿ:ಸಮಾಜ ಸುಧಾರಕ,ವಚನ ಚಳುವಳಿಯ ನೇತಾರ ವಿಶ್ವಗುರು ಬಸವಣ್ಣನವರದು ಮಾನವಿಯತೆಯ ಮೌಲ್ಯಗುಣಗಳ ವ್ಯಕ್ತಿತ್ವ ಎಂದು ಸಾಹಿತಿ ಲೇಖಕ ಡಾ.ಚಿ.ಸಿ ನಿಂಗಣ್ಣ ಅಭಿಪ್ರಾಯಪಟ್ಟರು.

    ಇಲ್ಲಿನ ಜಯನಗರದ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಇಂದು ಆಯೋಜಿಸಿದ್ದ 891ನೆಯ ಬಸವ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಜಯಂತಿ ಆಚರಣೆಯನ್ನು 1913ರಲ್ಲಿ ಹರ್ಡೇಕರ್ ಮಂಜಪ್ಪನವರು ಆರಂಭ ಮಾಡಿದರು.ಅದು ಇಂದಿಗೂ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

    ಮಾನವನ ಉದ್ಧಾರಕ್ಕಾಗಿ ಬಸವ ಮಾರ್ಗವೊಂದೇ ಪರಿಹಾರವಾಗಿದ್ದು, ಬಸವಾದಿ ಶರಣರ ವಚನಗಳನ್ನು ಅರ್ಥ ಮಾಡಿಕೊಂಡು ನೆಮ್ಮದಿ ಜೀವನ ನಡೆಸಬಹುದು.ಬಸವಣ್ಣ ಲೋಕಸೂರ್ಯ .ಬೆಳಕು ಇದ್ದಲ್ಲಿ ಕತ್ತಲೆ ಕಾಲ್ತೆಗೆಯುವಂತೆ ಬಸವಣ್ಣನವರಿದ್ದಲ್ಲಿ ಜಾತಿ,ಮತಗಳಿಲ್ಲ,ಮೇಲು ಕೀಳಿಲ್ಲ ,12ನೆಯ ಶತಮಾನದಲ್ಲಿ ‌ಸಮಾನತೆಯ ಬೀಜ ಬಿತ್ತುವ ಕೆಲಸವನ್ನು ಅವರು ಮಾತನಾಡಿದರು ಎಂದು ಬಣ್ಣಿಸಿದರು.

    ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿ‌ಮಾತನಾಡಿದ ಬಸವ ಚಿಂತಕ, ಸಾಹಿತಿ ಡಾ.ಆನಂದ ಸಿದ್ಧಾಮಣಿ ಬಸವಣ್ಣ ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು.ಅವರ ಒಂದೊಂದು ವಚನಗಳು ಇಂದಿಗೂ ಪ್ರಸ್ತುತ.ಕಾಯಕವೇ ಕೈಲಾಸ ಎಂದರು.ಕಾಯಕ ಮಾಡುವುದು ಮನುಷ್ಯನ ಧರ್ಮವಾಗಬೇಕು ಎಂದರು.

    ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದ ಟ್ರಸ್ಟ್ ಹಿರಿಯ ಸದಸ್ಯ ಎಂ.ಡಿ.ಮಠಪತಿ ಬಸವಣ್ಣನವರು ಹಾಗೂ ಅವರ ವಚನಗಳು ಕಾಲ ಕಾಲದ ಎಚ್ಚರಿಕೆಯ ಗಂಟೆಯಾಗಿದ್ದು, ವಚನಗಳನ್ನು ಪಚನ ಮಾಡಿಕೊಳ್ಳಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಾತನಾಡಿ ,ವಚನಗಳಲ್ಲಿ ವಿವೇಕವಿದ್ದು,ವಚನಗಳ ಅನುಸರಣೆ ಅಗತ್ಯ.ಬಸವಣ್ಣನವರ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ ಮಾತನಾಡಿದರು.

    ವೇದಿಕೆ ಮೇಲೆ ಟ್ರಸ್ಟ್ ಮಹಿಳಾ ಸದಸ್ಯರಾದ ಅನುರಾಧ ಕುಮಾರಸ್ವಾಮಿ, ಸುಜಾತಾ ಭೀಮಳ್ಳಿ ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ನಿರೂಪಿಸಿದರು.ಹಿರಿಯ ಸದಸ್ಯರಾದ ಭೀಮಾಶಂಕರ ಶೆಟ್ಟಿ,ಶಿವಕುಮಾರ ಪಾಟೀಲ,ಬಂಡಪ್ಪ ಕೇಸೂರ,ಸಿದ್ಧಲಿಂಗ ಗುಬ್ಬಿ,ಬಸವರಾಜ ಪುರ್ಮಾ,ಮಲ್ಲಯ್ಯ ಸ್ವಾಮಿ ಗಂಗಾಧರಮಠ,ವೀರಪ್ಪ ಹುಡುಗಿ,ಗುರುಪಾದಪ್ಪ ಕಾಂತಾ,ಮಲ್ಲಯ್ಯಸ್ವಾಮಿ ಬೀದಿಮನಿ,ಸುನೀಲ ಬೀಡಪ್,ಮಹಿಳಾ ಘಟಕದ ಪದಾಧಿಕಾರಿಗಳಾದ ಸುರೇಖಾ ಬಾಲಕೊಂದೆ,ಲತಾ ತುಪ್ಪದ ಸೇರಿದಂತೆ ಅನೇಕರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts