ನವದೆಹಲಿ: ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಪೈಕಿ ದೇಶದ 5 ಪ್ರಮುಖ ರಾಜ್ಯಗಳು ಶೇ. 27 ರಷ್ಟು ಕೊಡುಗೆ ನೀಡುತ್ತಿದ್ದು, ಕರೊನಾ ವೈರಸ್ ಮಹಾಮಾರಿಯಿಂದ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಗೆ ಚೇತರಿಕೆ ತುಂಬಲು ಮುಂಚೂಣಿಯ ಪಾತ್ರವನ್ನು ವಹಿಸಲಿವೆ ಎಂದು ಸಂಯೋಜಿತ ಎಲಾರಾ ಸೆಕ್ಯುರಿಟಿ ಕಂಪನಿ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: ಚೆನ್ನೈನಲ್ಲಿನ್ನು ಕ್ಷೌರ ಮಾಡಿಸಲು ಆಧಾರ್ ಕಡ್ಡಾಯ..!
ಕೇರಳ, ಪಂಜಾಬ್, ತಮಿಳುನಾಡು, ಹರಿಯಾಣ ಮತ್ತು ಕರ್ನಾಟಕ ಈಗಾಗಲೇ ಕರೊನಾ ವಿರುದ್ಧ ಗೆದ್ದು, ಚಟುವಟಿಕೆ ಆರಂಭಿಸಿವೆ. ಈ ರಾಜ್ಯಗಳಲ್ಲಿನ ವಿದ್ಯುತ್ ಬಳಕೆ, ಟ್ರಾಫಿಕ್ ಚಲನೆ ಸಗಟು ಮಾರುಕಟ್ಟೆಗಳಿಗೆ ಬರುವ ಕೃಷಿ ಉತ್ಪನ್ನಗಳು ಮತ್ತು ಗೂಗಲ್ ಮೊಬಿಲಿಟಿ ಆಧಾರದ ಮೇಲೆ ವಿಶ್ಲೇಷಣೆ ನಡೆಸಿದ್ದು, ಈ ಐದು ರಾಜ್ಯಗಳು ದೇಶ ಆರ್ಥಿಕತೆಗೆ ಉತ್ತೇಜನ ನೀಡಲಿದೆ ಎಂದು ಎಲಾ ಸೆಕ್ಯುರಿಟಿ ಕಂಪನಿಯ ಅರ್ಥಶಾಸ್ತ್ರಜ್ಞೆ ಗರೀಮಾ ಕಪೂರ್ ಅವರು ನೋಟ್ ಒಂದು ಬರೆದಿದ್ದಾರೆ.
ಮಹಾರಾಷ್ಟ್ರ ಮತ್ತು ಗುಜಾರತ್ ಸೇರಿದಂತೆ ಕೆಲ ಕೈಗಾರೀಕೃತ ರಾಜ್ಯಗಳು ಕರೊನಾ ವೈರಸ್ ತಡೆಗಟ್ಟುವಲ್ಲಿ ಇನ್ನೂ ಹಿಂದು ಉಳಿದಿದ್ದು, ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಇವುಗಳ ಕೊಡುಗೆ ಪರಿಗಣೆಗೆ ಬರುವುದಿಲ್ಲ ಎಂದಿದ್ದಾರೆ.
ರಾಷ್ಟ್ರಾದ್ಯಂತ ಹೇರಲಾಗಿರುವ ಲಾಕ್ಡೌನ್ ಅನ್ನು ಸರ್ಕಾರ ಹಂತ ಹಂತವಾಗಿ ಮರುಸ್ಥಾಪಿಸಲು ನಿರ್ಧರಿಸಿದೆ. ವೈರಸ್ ನಿಯಂತ್ರಣಕ್ಕೆ ಬಂದಿರುವ ಏರಿಯಾಗಳಲ್ಲಿ ಜೂನ್ 8ರಿಂದ ಶಾಪಿಂಗ್ ಮಾಲ್ಸ್, ರೆಸ್ಟೋರೆಂಟ್ ಮತ್ತು ದೇವಸ್ಥಾನಗಳು ತೆರೆಯಲಿವೆ.
ಇದನ್ನೂ ಓದಿ: ನರಸೀಪುರ ಪೊಲೀಸ್ ಠಾಣೆಯಲ್ಲೇ ಕಳ್ಳತನ?: 58 ಸಜೀವ ಬುಲೆಟ್ಗಳು ನಾಪತ್ತೆ!
ರಾಷ್ಟ್ರದ ಆರ್ಥಿಕತೆಯ ಉತ್ತೇಜನಕ್ಕಾಗಿ ಇರುವ ಉತ್ತಮ ವಿಧಾನವೆಂದರೆ ಸಾಧಾರಣ ಆರ್ಥಿಕ ಚಟುವಟಿಕೆಯನ್ನು ಪುನರಾರಂಭಿಸುವುದು. ಹೀಗಾದಲ್ಲಿ ದೇಶವು ಆರ್ಥಿಕ ಪ್ರಗತಿಗೆ ಸಾಕ್ಷಿಯಾಗಲಿದೆ. ಆದರೆ, ಅದು ಸರಳವಾಗಿರಲಿದೆ ಎಂದು ಕಪೂರ್ ತಿಳಿಸಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಗೂಗಲ್ನಲ್ಲಿ ಬಳಕೆದಾರರು ಹುಡುಕಾಡಿರುವುದನ್ನು ಗಮನಿಸಿದರೆ, ಬಳಕೆದಾರರು ಹೊಸ ರೀತಿಯ ಜೀವನ ಹಾದಿಗೆ ಬದಲಾಗಿದ್ದಾರೆಯೇ ಎಂಬ ಸೂಚನೆ ಸಿಗುತ್ತಿದೆ. ಸಲೂನ್ ಸೇವೆ, ಏರ್ ಕಂಡೀಷನ್, ವಿಮಾನಯಾನ, ಬೈಕ್ಸ್, ವ್ಯಾಕ್ಯೂಮ್ ಕ್ಲೀನರ್ ಮತ್ತು ವಾಷಿಂಗ್ ಮೆಶಿನ್ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂಬುದನ್ನು ತೋರಿಸಿದೆ. ಅಲ್ಲದೇ ಮೊದಲ ಲಾಕ್ಡೌನ್ ಘೋಷಣೆಯಾದಾಗ ಗಾಬರಿಗೊಂಡ ಜನತೆ ಕಿರಾಣಿ ವಸ್ತುಗಳು, ಔಷಧ ಹಾಗೂ ಲಿಕ್ವಿಡ್ ಸೋಪುಗಳನ್ನು ಹೆಚ್ಚಾಗಿ ಖರೀದಿಸಿದ್ದಾರೆ. ಲಾಕ್ಡೌನ್ ಸಮಯದಲ್ಲೂ ಸಹ ಜನರು ಇಯರ್ ಫೋನ್, ಹೇರ್ ಆಯಿಲ್, ಲ್ಯಾಪ್ಟಾಪ್, ಮೊಬೈಲ್ ಫೋನ್ಸ್, ಜುವೆಲ್ಲರಿ, ಗೊಂಬೆಗಳು ಮತ್ತು ಮೈಕ್ರೋವೇವ್ ಓವನ್ ನೋಡುವುದನ್ನು ಬಿಟ್ಟುಕೊಟ್ಟಿಲ್ಲ ಎಂಬುದು ತಿಳಿದುಬಂದಿದೆ ಎಂದು ಕಪೂರ್ ಹೇಳಿದ್ದಾರೆ. (ಏಜೆನ್ಸೀಸ್)
‘ಲಾಕ್ಡೌನ್ ತೆರವುಗೊಳಿಸುತ್ತೇವೆ, ಕರೊನಾದೊಂದಿಗೇ ಬದುಕೋಣ…’ಎಂದ ಪಾಕ್ ಪ್ರಧಾನಿ