ಬೆಂಗಳೂರು: ಬಾಲಿವುಡ್ ಖ್ಯಾತ ನಟಿ ಶ್ರದ್ಧಾ ಕಪೂರ್ ಸಹೋದರನಿಗೆ ಬೆಂಗಳೂರು ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಕಳೆದ ಜೂನ್ 13ರಂದು ಬೆಂಗಳೂರಿನ ಎಂಜಿ ರಸ್ತೆಯ ಹೋಟೆಲ್ವೊಂದರಲ್ಲಿ ಬಂಧಿಸಲಾಗಿದ್ದ ಸಿದ್ಧಾಂತ್ ಕಪೂರ್ಗೆ ನೋಟಿಸ್ ನೀಡಲಾಗಿದೆ.
ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಅಲಸೂರು ಪೊಲೀಸ್ ಠಾಣೆಯಿಂದ ಸಮನ್ಸ್ ಜಾರಿ ಮಾಡಲಾಗಿದೆ. ಹೋಟೆಲ್ನಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದ ಸಿದ್ಧಾಂತ್ ಡ್ರಗ್ಸ್ ಸೇವಿಸಿದ್ದು ನಿಜವೆಂದು ಪ್ರಾಥಮಿಕ ತನಿಖೆಯಿಂದಲೂ ತಿಳಿದುಬಂದಿದೆ.
ಇದೀಗ ಪಾರ್ಟಿ ನಡೆಸಿದ್ದ ವೇಳೆ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿರುವ ಪೊಲೀಸರಿಗೆ ಸಿದ್ಧಾಂತ್ ಸಿಗರೇಟ್ ಮೂಲಕ ಮಾದಕ ದ್ರವ್ಯ ತೆಗೆದುಕೊಳ್ಳುತ್ತಿರುವುದು ದೃಢವಾಗಿದೆ ಎನ್ನಲಾಗಿದೆ.
38ವರ್ಷದ ಸಿದ್ಧಾಂತ್ ಬಂಧಿಸಿದ್ದ ವೇಳೆ ನಡೆಸಿದ್ದ ರಕ್ತ ಪರೀಕ್ಷೆಯಲ್ಲೂ ಕೂಡ ಮಾದಕ ದ್ರವ್ಯ ತೆಗೆದುಕೊಂಡಿರುವುದು ದೃಢವಾಗಿತ್ತು. ಬಂಧನದ ವೇಳೆ ಮೊಬೈಲ್ ಸೇರಿದಂತೆ ಕೆಲವು ದಾಖಲೆಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾದ ಬಳಿಕ ಜಾಮೀನು ಸಿಕ್ಕಿತ್ತು. (ಏಜೆನ್ಸೀಸ್)
ಚಲಿಸುತ್ತಿದ್ದ ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ: ಸೇತುವೆ ಮೇಲಿಂದಲೇ ನದಿಗೆ ಹಾರಿದ ಮಹಿಳೆ!