ಬೆಂಗಳೂರು: ಕಣ್ಣೂರು-ಬೆಂಗಳೂರು ಎಕ್ಸ್ಪ್ರೆಸ್ ರೈಲು(Train No. 07390 Kannur- Bengaluru Express) ಮಾರ್ಗಮಧ್ಯೆ ಹಳಿ ತಪ್ಪಿದ್ದು, ಕೆಲಕಾಲ ಆತಂಕ ಮೂಡಿಸಿತ್ತು. ಗುರುವಾರ ಸಂಜೆ 6.05ರ ಸುಮಾರಿಗೆ ಕಣ್ಣೂರಿನಿಂದ ಬೆಂಗಳೂರಿಗೆ ಈ ರೈಲು ಹೊರಟಿತ್ತು, ಶುಕ್ರವಾರ ಮುಂಜಾನೆ 3.30ರ ಸುಮಾರಿಗೆ ಬೆಂಗಳೂರು ರೈಲ್ವೆ ವ್ಯಾಪ್ತಿಯ ತೊಪ್ಪೂರು-ಶಿವಾಡಿ ಮಾರ್ಗದಲ್ಲಿ ಈ ರೈಲು ಬರುತ್ತಿತ್ತು. ಈ ವೇಳೆ ರೈಲ್ವೆ ಹಳಿಯ ಮೇಲೆ ಬಂಡೆಗಳು ಉರುಳಿಬಿದ್ದ ಪರಿಣಾಮ ರೈಲಿನ 5 ಬೋಗಿಗಳು ಹಳಿತಪ್ಪಿದವು.
ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ. ರೈಲಿನಲ್ಲಿದ್ದ 2,348 ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂದು ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ತೊಪ್ಪೂರಿನಿಂದ ವಿವಿಧ ಕಡೆಗೆ 15 ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಗಕರು ತಲುಪಬೇಕಿದ್ದ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ.
ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ.
ತೆಪ್ಪೂರು-ಶಿವಾಡಿ ಮಾರ್ಗವಾಗಿ ಸಂಚರಿಸಲಿದ್ದ ರೈಲುಗಳ ಓಡಾಟದಲ್ಲಿ ತಾತ್ಕಾಲಿಕವಾಗಿ ವ್ಯತ್ಯಯವಾಗಲಿದೆ. ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ ಸೂಪರ್ ಫಾಸ್ಟ್ ಬೈಯಪ್ಪಹಳ್ಳಿ, ಬಂಗಾರಪೇಟೆ ಮತ್ತು ತಿರುಪತ್ತೂರ್ ಮೂಲಕ ಸಂಚರಿಸಲಿವೆ.
ಮದ್ವೆಗೂ ಮುನ್ನ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿದ, ಈಗ ಹಿಂಸಿಸುತ್ತಿದ್ದಾನೆ… ಕಿರುತೆರೆ ನಟಿ ದೂರು
ಮಗು ಅಪಹರಣ ಕೇಸ್: ತನಿಖೆಗೆ ಹೆದರಿ ವಿಷ ಕುಡಿದ ಒಂದೇ ಕುಟುಂಬದ ಐವರಲ್ಲಿ ಒಬ್ಬರೂ ಬದುಕಲಿಲ್ಲ…