ಬೆಂಗಳೂರು: ಅವರೆಲ್ಲರೂ ದುಬೈನಿಂದ ಚೆನ್ನೈಗೆ ಹೊರಟಿದ್ದರು, ಆದರೆ ಬಂದಿಳಿದಿದ್ದು ಬೆಂಗಳೂರಿಗೆ. ಅನಿವಾರ್ಯವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರೆಲ್ಲರಿಗೂ ‘ಐರಾವತ’ ನೆರವಿಗೆ ಬಂದಿದ್ದಾನೆ.
ಮಳೆಯಿಂದಾಗಿ ತೀವ್ರ ಸಮಸ್ಯೆ ಉಂಟಾಗಿರುವ ಕಾರಣ ದುಬೈನಿಂದ ಚೆನ್ನೈಗೆ ಹೊರಟಿದ್ದ ವಿಮಾನವನ್ನು ಬೆಂಗಳೂರು ನಿಲ್ದಾಣಕ್ಕೆ ಕಳುಹಿಸಲಾಗಿದೆ. ಚೆನ್ನೈನ ವಿಮಾನ ನಿಲ್ದಾಣದಲ್ಲಿ ಭಾರಿ ಮಳೆಯಿಂದಾಗಿ ಲ್ಯಾಂಡಿಂಗ್ ಸಮಸ್ಯೆ ಆಗಿರುವುದರಿಂದ ಅವರಿಗೆ ಈ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಒಂದೇ ಕುಟುಂಬದ ಐವರ ಆತ್ಮಹತ್ಯೆ; ಅನುಮಾನ ಯಾರ ಮೇಲೆ ಗೊತ್ತೇ?
ದುಬೈನಿಂದ ನೇರ ಚೆನ್ನೈಗೆ ಹೋಗಬೇಕಿದ್ದ ವಿಮಾನದಿಂದ ಬೆಂಗಳೂರಿನಲ್ಲಿ ಇಳಿದ ಪ್ರಯಾಣಿಕರನ್ನು ಕೊನೆಗೆ ಕೆಎಸ್ಆರ್ಟಿಸಿಯ ಐರಾವತ ಬಸ್ ಮೂಲಕ ಚೆನ್ನೈಗೆ ಕಳುಹಿಸಿಕೊಡಲಾಗಿದೆ. ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 40 ಮಂದಿ ಬಸ್ನಲ್ಲಿ ಚೆನ್ನೈಗೆ ತೆರಳಿದ್ದಾರೆ.
ಎಣ್ಣೆಗೂ ಹೆಣ್ಣಿಗೂ ಲಿಂಕಿಟ್ಟ ಪ್ರೇಮ್; ರಚಿತಾ ಕೈಯಲ್ಲಿ ಬಾಟಲಿ, ರಕ್ಷಿತಾ ಸ್ಟೆಪ್ಸು; ಮತ್ತೆ ಕಿಚ್ಚು ಹೊತ್ತಿಸಲಿದ್ದಾರಾ ರಚ್ಚು?
ಜನವರಿ ಒಳಗೆ ಅಧಿಕಾರ ಕಳೆದುಕೊಳ್ಳಲಿದ್ದಾರಂತೆ ಬಸವರಾಜ ಬೊಮ್ಮಾಯಿ; ಅವರ ಬಳಿಕ ಒಮ್ಮೆ ಅಲ್ಲ, 2 ಸಲ ಸಿಎಂ ಬದಲಾವಣೆ!
ಮದ್ವೆ ಆದ್ಮೇಲೆ ಫಸ್ಟ್ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್