ಶ್ರೀನಗರ : ಕರೊನಾ ಎರಡನೇ ಅಲೆಯಿಂದ ಚೇತರಿಸಿಕೊಳ್ಳುತ್ತಿರುವ ಭಾರತದಲ್ಲಿ ಮೂರನೇ ಅಲೆಯ ಎಚ್ಚರಿಕೆ ನೀಡಲಾಗಿರುವ ಈ ಸಂದರ್ಭದಲ್ಲಿ, ದೇಶದಾದ್ಯಂತ ಆರೋಗ್ಯ ಸೇವೆಯನ್ನು ವಿಸ್ತಾರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇಂತಹುದೇ ಪ್ರಯತ್ನ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಪಿಎಂಕೇರ್ಸ್ ಫಂಡ್ನ ಸಹಾಯದಿಂದ ನಡೆದಿದೆ.
ಶ್ರೀನಗರದ ಖೋನ್ಮೋಹ್ನಲ್ಲಿ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್(ಡಿಆರ್ಡಿಒ) ಹದಿನೇಳೇ ದಿನಗಳಲ್ಲಿ ಸ್ಥಾಪಿಸಿರುವ 500 ಬೆಡ್ ಸಾಮರ್ಥ್ಯದ ಕೋವಿಡ್ ಆಸ್ಪತ್ರೆಗೆ ಇದೀಗ ಚಾಲನೆ ಸಿಕ್ಕಿದೆ. ಕರೊನಾ ರೋಗಿಗಳನ್ನು ಉಚಿತ ಚಿಕಿತ್ಸೆಗಾಗಿ ದಾಖಲಿಸಿಕೊಳ್ಳಲು ಆರಂಭಿಸಿರುವ ಈ ಆಸ್ಪತ್ರೆಯಲ್ಲಿ, 125 ವೆಂಟಿಲೇಟರ್ಸಹಿತ ಐಸಿಯು ಬೆಡ್ಗಳಿವೆ.
ಕರೊನಾ ಸೋಂಕಿತ ಮಕ್ಕಳ ಚಿಕಿತ್ಸೆಗೂ ಗಮನ ನೀಡಲಾಗಿದ್ದು, 25 ವೆಂಟಿಲೇಟರ್ ಸಹಿತ ಬೆಡ್ಗಳ ಪೀಡಿಯಾಟ್ರಿಕ್ ಐಸಿಯು ಸ್ಥಾಪಿಸಲಾಗಿದೆ ಎಂದು ಡಿಆರ್ಡಿಒ ತಿಳಿಸಿದೆ. (ಏಜೆನ್ಸೀಸ್)
ಸಂಬಳ ಹೆಚ್ಚಿಸುತ್ತಿಲ್ಲ, ಮನೆ ಸಂಭಾಳಿಸಲು ಆಗುತ್ತಿಲ್ಲ ಎಂದು ಕಾರ್ಮಿಕ ಆತ್ಮಹತ್ಯೆ