More

    38 ಪಕ್ಷಗಳು NDA ಸೇರಿರುವುದು ಇಡಿ ದಾಳಿ ಭೀತಿಯಿಂದ: ಎಎಪಿ ನಾಯಕ ರಾಘವ್​ ಚಡ್ಡಾ

    ನವದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯುತನ್ನ ಮಿತ್ರಪಕ್ಷಗಳಿಗೆ ಜಾರಿ ನಿರ್ದೇಶನಾಲಯದಿಂದ ದಾಳಿ ಮಾಡಿಸುವುದಾಗಿ ಬೆದರಿಸುವ ಮೂಲಕ ಒಗ್ಗೂಡಿಸಿದೆ ಎಂದು ಎನ್​ಡಿಎ ಮೃತ್ರಿಕೂಟದ ಸಭೆ ಕುರಿತು ಎಎಪಿ ನಾಯಕ ರಾಘವ್​ ಚಡ್ಡಾ ವ್ಯಂಗ್ಯವಾಡಿದ್ದಾರೆ.

    ಎನ್​ಡಿಎ ಸಭೆಗೆ 38 ಪಕ್ಷಗಳ ನಾಯಕರು ಹಾಜರಾಗುವುದಾಗಿ ಖಚಿತಪಡಿಸಿರುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿಕೆಗೆ ರಾಘವ್​ ಚಡ್ಡಾ ತಿರುಗೇಟು ನೀಡಿದ್ದು, 38 ಪಕ್ಷಗಳ ಎನ್​ಡಿಎ ಅದನ್ನು ನಿಮಗೆ ತಂದುಕೊಟ್ಟಿದ್ದು, ಇಡಿ ಎಂದು ಕುಟುಕಿದ್ದಾರೆ.

    ಇದನ್ನೂ ಓದಿ: ಅವರಿಗೆ ಖುಷಿ ಆಗುವ ವಿಷಯ ಹೇಳು ಮಾರಾಯಾ; ಶಾಸಕ ವೇದವ್ಯಾಸ ಕಾಮತ್​ ಕಾಲೆಳೆದ ಸಭಾಧ್ಯಕ್ಷ ಯು.ಟಿ. ಖಾದರ್​

    2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಪಕ್ಷಗಳ ಎರಡನೇ ಸಭೆ ನಡೆಯುತ್ತಿರುವ ಬೆನ್ನಲ್ಲೇ ಎನ್​ಡಿಎ ಮೃತ್ರಿಕೂಟದ ಮೀಟಿಂಗ್​ ಕರೆದಿರುವುದು ಟೀಕೆಗೆ ಗುರಿಯಾಗಿದೆ.

    ಸಭೆಯಲ್ಲಿ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಹಾಗೂ ಸಂಜಯ್​ ಸಿಂಗ್​ ಜೊತೆ ಭಾಗಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts