ನವದೆಹಲಿ: ಭಾರತೀಯ ಯೋಧರಿಬ್ಬರು ಪಾಕಿಸ್ತಾನಕ್ಕೆ ಮಹತ್ವದ ಮಾಹಿತಿ ಕೊಡುತ್ತಿದ್ದುದು ಪತ್ತೆಯಾಗಿದ್ದು, ಅಂಥ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹರ್ಪ್ರೀತ್ ಸಿಂಗ್ (23), ಗುರ್ಬೇಜ್ ಸಿಂಗ್ (23) ಬಂಧಿತ ಯೋಧರು. ಇವರಿಬ್ಬರನ್ನು ಪಂಜಾಬ್ ಪೊಲೀಸರು ವಶಕ್ಕೆ ಪಡೆದಿಕೊಂಡಿರುವುದಾಗಿ ಅಲ್ಲಿನ ಡಿಜಿಪಿ ತಿಳಿಸಿದ್ದಾರೆ.
ಅಮೃತಸರದ ಚೀಚ ಮೂಲದ ಹರ್ಪ್ರೀತ್ ಸಿಂಗ್ 2017ರಲ್ಲಿ ಸೇನೆಗೆ ಸೇರಿದ್ದು, 19 ರಾಷ್ಟ್ರೀಯ ರೈಫಲ್ಸ್ನಲ್ಲಿದ್ದು, ಅನಂತ್ನಾಗ್ನಲ್ಲಿ ಕರ್ತವ್ಯದಲ್ಲಿದ್ದ. 18 ಸಿಖ್ ಲೈಟ್ ಇನ್ಫ್ಯಾಂಟ್ರಿನಲ್ಲಿರುವ ಗುರ್ಬೇಜ್ ಸಿಂಗ್ ಕಾರ್ಗಿಲ್ನಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಈತ 2015ರಲ್ಲಿ ಸೇನೆಯನ್ನು ಸೇರಿದ್ದ.
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!
ಎಸ್ಎಸ್ಪಿ ನವೀನ್ ಸಿಂಗ್ಲಾ ನೇತೃತ್ವದ ಜಲಂಧರ್ ಗ್ರಾಮೀಣ ಪೊಲೀಸರು ಎನ್ಡಿಪಿಎಸ್ ಕೇಸ್ ತನಿಖೆ ನಡೆಸುತ್ತಿದ್ದಾಗ ಸ್ಮಗ್ಲರ್ ರಣವೀರ್ ಸಿಂಗ್ನಿಂದ ಸಿಕ್ಕ ಮಾಹಿತಿ ಇವರಿಬ್ಬರ ಅಸಲಿಯತ್ತನ್ನು ಬಯಲುಪಡಿಸಿದೆ. ಭಾರತೀಯ ಸೇನೆಯ ರಹಸ್ಯ ಮಾಹಿತಿ ಹಾಗೂ ಭಾರತದ ಗಡಿಯಲ್ಲಿ ಯೋಧರ ನಿಯೋಜನೆ ಮತ್ತು ಕಾರ್ಯನಿರ್ವಹಣೆಯ ಮಹತ್ವದ ಮಾಹಿತಿ ಇರುವ ದಾಖಲೆಗಳು ಇವನ ಬಳಿ ಸಿಕ್ಕಿದ್ದವು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಈತನದೇ ಊರಿನ ಗೆಳೆಯನಾಗಿರುವ ಹರ್ಪ್ರೀತ್ ಸಿಂಗ್ನಿಂದ ಸಿಕ್ಕಿರುವುದಾಗಿ ತಿಳಿಸಿದ್ದಾನೆ. ಹೆರಾಯ್ನ್ ಕಳ್ಳಸಾಗಣಿಕೆ ಕೇಸ್ನಲ್ಲಿ ಮೇ 21ರಂದು ರಣ್ವೀರ್ ಸಿಂಗ್ನನ್ನು ಬಂಧಿಸಲಾಗಿತ್ತು ಎಂದು ಪಂಜಾಬ್ ಡಿಜಿಪಿ ದಿನಕರ್ ಗುಪ್ತ ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ನಿಂದ ಸತ್ತ 75 ದಿನಗಳ ಬಳಿಕ ನಡೆಯಿತು ಶವಸಂಸ್ಕಾರ; ಹಣಕ್ಕಾಗಿ ಹೆಣ ಇಟ್ಕೊಂಡ್ರಾ?
ರಣ್ವೀರ್ ನೀಡುತ್ತಿದ್ದ ಆರ್ಥಿಕ ಆಮಿಷಕ್ಕೆ ಒಳಗಾಗಿ ಹರ್ಪ್ರೀತ್ ಸಿಂಗ್ ಈ ರೀತಿ ಮಾಡುತ್ತಿದ್ದ ಮತ್ತು ಅದಕ್ಕಾಗಿ ಗುರ್ಬೇಜ್ ಸಿಂಗ್ನ ನೆರವು ಪಡೆಯುತ್ತಿದ್ದ. ಗುರ್ಬೇಜ್ ಸಿಂಗ್ ಕಾರ್ಗಿಲ್ನ 121 ಇನ್ಫ್ಯಾಂಟ್ರಿ ಬ್ರಿಗೇಡ್ ಹೆಡ್ಕ್ವಾರ್ಟರ್ಸ್ನಲ್ಲಿ ಕ್ಲರ್ಕ್ ಆಗಿದ್ದಿದ್ದರಿಂದ ಆತನಿಗೆ ಸೇನೆಯ ಮಹತ್ವದ ದಾಖಲೆಗಳು ಸಿಗುತ್ತಿದ್ದವು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ಇದುವರೆಗೆ ಇವರು ಇಂಥ 900 ದಾಖಲೆಗಳನ್ನು ಹಂಚಿಕೊಂಡಿರುವ ಮಾಹಿತಿ ಲಭಿಸಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಸೀಟ್ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ
ರಣ್ವೀರ್ ಸಿಂಗ್ ಈ ಮಾಹಿತಿಗಳನ್ನು ನೇರವಾಗಿ ಪಾಕಿಸ್ತಾನಿ ಐಎಸ್ಐನವರಿಗೆ ತಲುಪಿಸುತ್ತಿದ್ದ. ಇಲ್ಲವೆ ಇನ್ನೊಬ್ಬ ಪ್ರಮುಖ ಸ್ಮಗ್ಲರ್ ಗೋಪಿ ಮೂಲಕ ಪಾಕ್ ಡ್ರಗ್ ಸ್ಮಗ್ಲರ್ ಮೂಲಕ ಐಎಸ್ಐನವರಿಗೆ ತಲುಪಿಸುತ್ತಿದ್ದ. ಇದಕ್ಕೆ ಪ್ರತಿಯಾಗಿ ಹರ್ಪ್ರೀತ್ ಹಾಗೂ ಗುರ್ಬೇಜ್ ಇಬ್ಬರಿಗೂ ಹಣ ಸಿಗುತ್ತಿತ್ತು ಎಂದು ಗುಪ್ತ ಹೇಳಿದ್ದಾರೆ. (ಏಜೆನ್ಸೀಸ್)
18 ತಿಂಗಳ ಮಗುವಿಗಾಗಿ ಏಳೇ ದಿನಗಳಲ್ಲಿ ಸಂಗ್ರಹವಾಯ್ತು 18 ಕೋಟಿ ರೂ.; ಬೇಡ ಎಂಬಷ್ಟು ಬಂತು ಹಣ!
‘ಕಪಿಲ್ದೇವ್’ ವರ್ಗಾವಣೆ, ‘ಬೌಂಡರಿ’ ಮೀರಿದ ಸಂಭ್ರಮ!; ಖಾಕಿ ಖದರಿಗೆ ಮುದುರಿತಾ ಕೋವಿಡ್ ನಿಯಮ?