ಬೆಳಗಾವಿ: ಸ್ಮಶಾನ ಭೂಮಿ ನೀಡುವಂತೆ ಆಗ್ರಹಿಸಿ ತಾಲೂಕಿನ ಹುಂಚ್ಯಾನಟ್ಟಿ ಗ್ರಾಮದ ಮುಸ್ಲಿಂ ಸಮುದಾಯದವರು ಹಾಗೂ ಸ್ಥಳಿಯ ವಕೀಲರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಹುಂಚ್ಯಾನಟ್ಟಿ ಗ್ರಾಮದ ಟಿಪ್ಪು ಸುಲ್ತಾನ ನಗರ, ಅರ್ಷತ್ ಮೊಹಲ್ಲಾ, ಅಮನ್ ಮೊಹಲ್ಲಾ, ಜೈನಗರ ಸೇರಿದಂತೆ ಕಲಾನಗರ (ಐದನೇ ಕ್ರಾಸ್) ಗಳಲ್ಲಿ ಸುಮಾರು 12 ಸಾವಿರ ಮುಸ್ಲಿಂ ಸಮುದಾಯದ ಜನರು ವಾಸವಿದ್ದಾರೆ. ಇಲ್ಲಿರುವ ಜನರಿಗೆ ಸ್ಮಶಾನ ಭೂಮಿ ಇಲ್ಲದಂತಾಗಿದೆ.
ಪೀರನವಾಡಿ ವ್ಯಾಪ್ತಿಯಲ್ಲಿನ ಗಾಯರಾಣ ಭೂಮಿಯನ್ನು ಸ್ಮಶಾನಕ್ಕೆಂದು ನೀಡಬೇಕು ಎಂದು ಗ್ರಾಮಸ್ಥರು ಹಾಗೂ ವಕೀಲರು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಬಾರ್ ಅಸೋಸಿಯೇಷನ್ ಅಧ್ಯ ಪ್ರಭು ಯಾತ್ನಟ್ಟಿ, ಯಾಸೀನ ಪಟದೇಕರ, ಅತಿಕ ಸಯೈದ್, ಇಸ್ಮಾಯಿಲ್ ಶೇಠ ಅನೇಕರಿದ್ದರು.