More

    ಸ್ಮಶಾನ ಭೂಮಿ ನೀಡುವಂತೆ ಆಗ್ರಹ, ಜಿಲ್ಲಾಡಳಿತಕ್ಕೆ ಮನವಿ

    ಬೆಳಗಾವಿ: ಸ್ಮಶಾನ ಭೂಮಿ ನೀಡುವಂತೆ ಆಗ್ರಹಿಸಿ ತಾಲೂಕಿನ ಹುಂಚ್ಯಾನಟ್ಟಿ ಗ್ರಾಮದ ಮುಸ್ಲಿಂ ಸಮುದಾಯದವರು ಹಾಗೂ ಸ್ಥಳಿಯ ವಕೀಲರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

    ಹುಂಚ್ಯಾನಟ್ಟಿ ಗ್ರಾಮದ ಟಿಪ್ಪು ಸುಲ್ತಾನ ನಗರ, ಅರ್ಷತ್​ ಮೊಹಲ್ಲಾ, ಅಮನ್​ ಮೊಹಲ್ಲಾ, ಜೈನಗರ ಸೇರಿದಂತೆ ಕಲಾನಗರ (ಐದನೇ ಕ್ರಾಸ್​) ಗಳಲ್ಲಿ ಸುಮಾರು 12 ಸಾವಿರ ಮುಸ್ಲಿಂ ಸಮುದಾಯದ ಜನರು ವಾಸವಿದ್ದಾರೆ. ಇಲ್ಲಿರುವ ಜನರಿಗೆ ಸ್ಮಶಾನ ಭೂಮಿ ಇಲ್ಲದಂತಾಗಿದೆ.

    ಪೀರನವಾಡಿ ವ್ಯಾಪ್ತಿಯಲ್ಲಿನ ಗಾಯರಾಣ ಭೂಮಿಯನ್ನು ಸ್ಮಶಾನಕ್ಕೆಂದು ನೀಡಬೇಕು ಎಂದು ಗ್ರಾಮಸ್ಥರು ಹಾಗೂ ವಕೀಲರು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಬಾರ್​ ಅಸೋಸಿಯೇಷನ್​ ಅಧ್ಯ ಪ್ರಭು ಯಾತ್ನಟ್ಟಿ, ಯಾಸೀನ ಪಟದೇಕರ, ಅತಿಕ ಸಯೈದ್​, ಇಸ್ಮಾಯಿಲ್​ ಶೇಠ ಅನೇಕರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts