ಗೋಕರ್ಣದಲ್ಲಿ ವಾಸವಾಗಿದ್ದ 19 ರಷ್ಯನ್ ಪ್ರವಾಸಿಗರು ಗುರುವಾರ ವಿಶೇಷ ಬಸ್ ಮೂಲಕ ಗೋವಾಕ್ಕೆ ತೆರಳಿದರು. ಅಲ್ಲಿಂದ ವಿಶೇಷ ವಿಮಾನದಲ್ಲಿ ಅವರು ಸ್ವದೇಶಕ್ಕೆ ಪಯಣಿಸಲಿದ್ದಾರೆ. ಶುಕ್ರವಾರ ರಷ್ಯನ್ರ ಮತ್ತೊಂದು ತಂಡ ಗೋಕರ್ಣದಿಂದ ಹೊರಡಲಿದೆ. ಕಾರವಾರ ಪ್ರವಾಸೋದ್ಯಮ ಇಲಾಖೆಯ ಕೃಷ್ಣ ನಾಯ್ಕ, ಪೊಲೀಸ್ ಸಿಬ್ಬಂದಿ ಶಿವಾನಂದ ಗೌಡ, ಪ್ರವಾಸದ ಸಂಘಟಕ ನಿತ್ಯಾನಂದ ಶೆಟ್ಟಿ ಮುಂತಾದವರಿದ್ದರು.