More

    ಆರ್ಥಿಕ ಸಹಾಯ ನೀಡಿದ ಶಾಸಕ ದಿನಕರ ಶೆಟ್ಟಿ

    ಕುಮಟಾ: ಕರೊನಾ ತುರ್ತು ಕ್ರಮಗಳಿಂದ ದಿನದ ಆದಾಯ ಕಳೆದುಕೊಂಡಿರುವ ತಾಲೂಕಿನ ಆಟೋ ರಿಕ್ಷಾ ಚಾಲಕ-ಮಾಲೀಕರಿಗೆ ಶಾಸಕ ದಿನಕರ ಶೆಟ್ಟಿ ಶುಕ್ರವಾರ ಬಿಜೆಪಿ ಕಾರ್ಯಾಲಯದಲ್ಲಿ ಆರ್ಥಿಕ ಸಹಾಯ ವಿತರಿಸಿದರು.

    ಬಳಿಕ ಮಾತನಾಡಿದ ಅವರು, ದೇಶವು ಕರೊನಾ ಸಮಸ್ಯೆಯಿಂದ ಹೊರಬರಲು ಪ್ರಧಾನಿ ಮೋದಿಯವರು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಹಾಗೆಯೇ ದೇಶದ ಲಾಕ್​ಡೌನ್ ಆದ ಸಂದರ್ಭದಲ್ಲಿ ಕಡುಬಡವರು, ದಿನಕೂಲಿಗಳು, ಕಾರ್ವಿುಕರು, ವೃದ್ಧರು, ರೈತರು, ವಿಧವೆಯರು, ಅಂಗವಿಕಲರು ಮುಂತಾದವರಿಗೆ ಸಮಸ್ಯೆಯಾಗದಂತೆ ಆರ್ಥಿಕ ಪ್ಯಾಕೇಜ್ ಘೊಷಣೆಯನ್ನೂ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ದಿನದ ದುಡಿಮೆಯನ್ನು ಕಳೆದುಕೊಂಡ ಸುಮಾರು ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ 700 ಕ್ಕೂ ಹೆಚ್ಚು ಆಟೋರಿಕ್ಷಾ ಚಾಲಕ-ಮಾಲೀಕರು ಸಂಕಟದಲ್ಲಿದ್ದಾರೆ. ಅವರಿಗೆ ಬೇರೆ ಯಾವುದೇ ಉತ್ಪನ್ನ ಇಲ್ಲದಿರುವರಿಂದ ಅವರೆಲ್ಲರಿಗೂ ತಲಾ 1000 ರೂ.ನಂತೆ ನಮ್ಮ ಕುಟುಂಬದ ವತಿಯಿಂದ ಚಿಕ್ಕ ಆರ್ಥಿಕ ಸಹಾಯವನ್ನು ನೀಡುತ್ತಿದ್ದೇನೆ. ಇದಲ್ಲದೇ ಬಿಜೆಪಿ ವತಿಯಿಂದ 9481151998 ಸಹಾಯವಾಣಿ ನಿಗದಿಸಲಾಗಿದೆ. ಅಗತ್ಯವುಳ್ಳವರು ಕರೆ ಮಾಡಬೇಕು. ಲಾಕ್​ಡೌನ್​ಗೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು. ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಪದಾಧಿಕಾರಿಗಳಾದ ಗುರುದಾಸ ಗೌಡ, ತಿಮ್ಮಪ್ಪ ಮುಕ್ರಿ, ವಿನಾಯಕ ನಾಯ್ಕ, ಜಿಪಂ ಸದಸ್ಯ ಗಜಾನನ ಪೈ, ಪುರಸಭೆ ಸದಸ್ಯ ತುಳಸು ಗೌಡ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts